ಹೈದರಾಬಾದ್ ಕರ್ನಾಟಕ ಪ್ರದೇಶ

ಹೈದರಾಬಾದ್ ಕರ್ನಾಟಕ ಪ್ರದೇಶ
Hyderabad Karnataka

ಭಾನುವಾರ, ಮಾರ್ಚ್ 16, 2025

ಮೈಲಿಗಲ್ಲುಗಳು

ರಸ್ತೆಯ ಉದ್ದಕ್ಕೂ ಇರಿಸಲಾದ ಸಣ್ಣ ಮೈಲಿಗಂಬದ ಮೇಲೆ ದೂರವನ್ನು ಕಿಲೋಮೀಟರ್‌ಗಳಲ್ಲಿ ಬರೆಯಲಾಗುತ್ತದೆ. 

ಹೌದು, ಇತ್ತೀಚಿನ ದಿನಗಳಲ್ಲಿ ಜಿಪಿಎಸ್-ಸಜ್ಜಿತ ಸ್ಮಾರ್ಟ್‌ಫೋನ್‌ಗಳ ವ್ಯಾಪಕತೆಯಿಂದಾಗಿ ಮೈಲಿಗಲ್ಲುಗಳನ್ನು ಹೆಚ್ಚಾಗಿ ಕಡೆಗಣಿಸಲಾಗುತ್ತದೆ. ಆದರೆ ಹಿಂದೆ, ಜನರು ತಮ್ಮ ಗಮ್ಯಸ್ಥಾನವನ್ನು ತಲುಪಲು ಎಷ್ಟು ಕಿಲೋಮೀಟರ್ ಪ್ರಯಾಣಿಸಬೇಕು ಎಂಬುದನ್ನು ಲೆಕ್ಕಾಚಾರ ಮಾಡಲು ಈ ಮೈಲಿ ಗುರುತುಗಳನ್ನು ಬಳಸುತ್ತಿದ್ದರು. ಆದರೆ ಈ 'ಮೈಲಿಗಲ್ಲುಗಳು' ವಿಭಿನ್ನ ಬಣ್ಣಗಳಲ್ಲಿರುವುದನ್ನು ನೀವು ಎಂದಾದರೂ ಗಮನಿಸಿದ್ದೀರಾ? ಅಂತಹ ಬಣ್ಣಗಳನ್ನು ದೂರದ ಬಗ್ಗೆ ಮಾಹಿತಿಯನ್ನು ಒದಗಿಸಲು ಮಾತ್ರವಲ್ಲದೆ ನಾವು ಯಾವ ರೀತಿಯ ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದೇವೆ ಎಂಬುದನ್ನು ತಿಳಿಸಲು ಸಹ ಬಳಸಲಾಗುತ್ತದೆ.

ಭಾರತದ ರಸ್ತೆ ಜಾಲವು 5.6 ಮಿಲಿಯನ್ ಕಿಲೋಮೀಟರ್ ಉದ್ದವಾಗಿದೆ. ರಾಷ್ಟ್ರೀಯ ಹೆದ್ದಾರಿಗಳು, ರಾಜ್ಯ ಹೆದ್ದಾರಿಗಳು ಮತ್ತು ಗ್ರಾಮೀಣ ರಸ್ತೆಗಳ ನಡುವೆ ವ್ಯತ್ಯಾಸವನ್ನು ಗುರುತಿಸಲು ಮೈಲಿಗಲ್ಲುಗಳನ್ನು ಬಣ್ಣ ಸಂಕೇತಗೊಳಿಸಲಾಗಿತ್ತು. ವಿವಿಧ ಮಾರ್ಗಗಳಲ್ಲಿ ಮೈಲಿಗಲ್ಲುಗಳ ಬಣ್ಣವೂ ಬದಲಾಗುತ್ತದೆ. ಭಾರತೀಯ ರಸ್ತೆಗಳಲ್ಲಿ ಕಂಡುಬರುವ ಮೈಲಿಗಲ್ಲುಗಳ ಪ್ರಕಾರಗಳು ಮತ್ತು ಅವುಗಳ ಬಣ್ಣಗಳನ್ನು ತಿಳಿದುಕೊಳ್ಳೋಣ ಬನ್ನಿ.

ಕಿತ್ತಳೆ ಬಣ್ಣದ ಮೈಲಿಗಲ್ಲುಗಳು

ನೀವು ಗ್ರಾಮೀಣ ರಸ್ತೆಯಲ್ಲಿದ್ದೀರಿ ಎಂದು ಇದು ಸೂಚಿಸುತ್ತದೆ. ಈ ರಸ್ತೆಗಳನ್ನು ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ (PMGSY) ಮತ್ತು ಜವಾಹರ್ ರೋಜ್‌ಗಾರ್ ಯೋಜನೆ (JRY) ನಂತಹ ಉಪಕ್ರಮಗಳ ಅಡಿಯಲ್ಲಿ ನಿರ್ಮಾಣ ಮಾಡಲಾಗುತ್ತದೆ.

ಹಸಿರು ಬಣ್ಣದ ಮೈಲಿಗಲ್ಲುಗಳು

ಇದು ನೀವು ರಾಜ್ಯ ಹೆದ್ದಾರಿಯಲ್ಲಿ (SH) ಪ್ರಯಾಣಿಸುತ್ತಿದ್ದೀರಿ ಎಂದು ಇದು ಸೂಚಿಸುತ್ತದೆ. ರಾಜ್ಯ ಹೆದ್ದಾರಿಗಳು ಮುಖ್ಯವಾಗಿ ಒಂದು ನಿರ್ದಿಷ್ಟ ರಾಜ್ಯದೊಳಗಿನ ಎರಡು ಪ್ರಮುಖ ನಗರಗಳು ಅಥವಾ ಸ್ಥಳಗಳನ್ನು ಸಂಪರ್ಕಿಸುತ್ತವೆ. ಈ ರಸ್ತೆಗಳನ್ನು ಆಯಾ ರಾಜ್ಯ ಸರ್ಕಾರಗಳು ನಿರ್ಮಿಸಿ ನಿರ್ವಹಿಸುತ್ತವೆ.

ಕಪ್ಪು ಬಣ್ಣದ ಮೈಲಿಗಲ್ಲು

ವಾಹನದಲ್ಲಿ ಪ್ರಯಾಣಿಸುವಾಗ ಯಾವುದೇ ರಸ್ತೆಯಲ್ಲಿ ಕಪ್ಪು ಅಥವಾ ನೀಲಿ ಮತ್ತು ಬಿಳಿ ಗೆರೆಗಳನ್ನು ಹೊಂದಿರುವ ಮೈಲಿಗಲ್ಲು ಕಂಡುಬಂದರೆ, ನೀವು ಜಿಲ್ಲಾ ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದೀರಿ ಎಂದು ಅರ್ಥ. ಈ ರಸ್ತೆಗಳು ಜಿಲ್ಲೆಯ ಪ್ರಮುಖ ಪಟ್ಟಣಗಳು ಮತ್ತು ಹಳ್ಳಿಗಳನ್ನು ಸಂಪರ್ಕಿಸುತ್ತವೆ.

ನೀಲಿ ಬಣ್ಣದ ಮೈಲಿಗಲ್ಲುಗಳು

ನೀಲಿ ಮೈಲಿಗಲ್ಲುಗಳನ್ನು ಮುಖ್ಯವಾಗಿ ಎಕ್ಸ್‌ಪ್ರೆಸ್ ಹೆದ್ದಾರಿಗಳಿಗೆ ಒದಗಿಸಲಾಗುತ್ತದೆ. ನೀವು ಎಂದಾದರೂ ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇ ಮತ್ತು ಯಮುನಾ ಎಕ್ಸ್‌ಪ್ರೆಸ್‌ವೇಯಲ್ಲಿ ಪ್ರಯಾಣಿಸಿದ್ದರೆ ಇದನ್ನು ಕಾಣಬಹುದಾಗಿದೆ. ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸುಲಭವಾಗಿ ಹೋಗುವಂತೆ ಇಂತಹ ಎಕ್ಸ್‌ಪ್ರೆಸ್‌ವೇಗಳನ್ನು ಈ ಮೂಲಕ ತೋರಿಸಲಾಗಿತ್ತದೆ.

ಹಳದಿ ಬಣ್ಣದ ಮೈಲಿಗಲ್ಲುಗಳು

ರಾಷ್ಟ್ರೀಯ ಹೆದ್ದಾರಿಗಳಲ್ಲಿ ನೀವು ಹಳದಿ ಕಲರ್‌ನ ಮೈಲುಗಲ್ಲುಗಳನ್ನೂ ಸಹ ನೋಡಿರಬಹುದು. ಅಂದರೆ ನೀವು ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಯಾಣಿಸುತ್ತಿದ್ದೀರಿ ಎಂದು ಅರ್ಥ. ಭಾರತದಲ್ಲಿ ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಿಸುವುದು ಮತ್ತು ನಿರ್ವಹಿಸುವುದು ಕೇಂದ್ರ ಸರ್ಕಾರ.


ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (Airports Authority of India) ದಲ್ಲಿ ಖಾಲಿ ಇರುವ ಜೂನಿಯರ್ ಅಸಿಸ್ಟೆಂಟ್ ಹುದ್ದೆಗೆ ಅಧಿಸೂಚನೆಯನ್ನು (Notification) ಹೊರಡಿಸಲಾಗಿದೆ. ಈ ಹುದ್ದೆಗಳಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.

ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (Airports Authority of India) ದಲ್ಲಿ ಖಾಲಿ ಇರುವ ಜೂನಿಯರ್ ಅಸಿಸ್ಟೆಂಟ್ ಹುದ್ದೆಗೆ ಅಧಿಸೂಚನೆಯನ್ನು (Notification) ಹೊರಡಿಸಲಾಗಿದೆ. ಈ ಹುದ್ದೆಗಳಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.

1 ಹುದ್ದೆಯ ಹೆಸರು :

ಜೂನಿಯರ್ ಅಸಿಸ್ಟೆಂಟ್

2 ಒಟ್ಟು ಹುದ್ದೆಗಳು :

89

ವಿದ್ಯಾರ್ಹತೆ :

ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ SSLC, PUC ಮತ್ತು ಡಿಪ್ಲೊಮಾ (Deploma) ವನ್ನು ಪೂರ್ಣಗೊಳಿಸಿರಬೇಕು. ವಯೋಮಿತಿ : ಅಭ್ಯರ್ಥಿಯು 01-11-2024 ರಂತೆ

ಕನಿಷ್ಠ 18 ವರ್ಷಗಳನ್ನು ಮತ್ತು

ಗರಿಷ್ಠ 30 ವರ್ಷಗಳನ್ನು ಹೊಂದಿರಬೇಕು.

OBC ಅಭ್ಯರ್ಥಿಗಳು : 3 ವರ್ಷಗಳು.

SC/ST ಅಭ್ಯರ್ಥಿಗಳು : 5 ವರ್ಷಗಳು.

ಅರ್ಜಿಶುಲ್ಕ :

ಸಾಮಾನ್ಯ/OBC/ಇಡಬ್ಲ್ಯೂಎಸ್ ಅಭ್ಯರ್ಥಿಗಳು : ರೂ. 1000/-

ಮಹಿಳೆಯರು/SC/ST/ಮಾಜಿ ಸೈನಿಕರ ಅಭ್ಯರ್ಥಿಗಳಿಗೆ : ಶುಲ್ಕ ಇರುವುದಿಲ್ಲ.

ಪಾವತಿ ವಿಧಾನ : ಆನ್‌ಲೈನ್ (Online).

ವೇತನ ಶ್ರೇಣಿ :

ಏರ್‌ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ನೇಮಕಾತಿ ಅಧಿಕೃತ ಅಧಿಸೂಚನೆಯ ಪ್ರಕಾರ, ಆಯ್ಕೆಯಾದ ಅಭ್ಯರ್ಥಿಗಳಿಗೆ ರೂ.31,000/- ರಿಂದ ರೂ.92,000/-ರವರೆಗೆ (ಪ್ರತಿ ತಿಂಗಳು) ವೇತನವನ್ನು ನಿಗದಿಪಡಿಸಲಾಗಿದೆ.

ಕಂಪ್ಯೂಟರ್ ಆಧಾರಿತ ಪರೀಕ್ಷೆ (Computer-based test) ಮತ್ತು ಸಂದರ್ಶನ (Interview) ಮೂಲಕ ಆಯ್ಕೆ ಮಾಡಲಾಗುತ್ತದೆ. ಹುದ್ದೆಯ ಸ್ಥಳ : ಅಖಿಲ ಭಾರತ.

ಅರ್ಜಿಸಲ್ಲಿಸುವ ಕ್ರಮಗಳು :

ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ನೀವು ಅರ್ಜಿ ಸಲ್ಲಿಸಲಿರುವ AAI ನೇಮಕಾತಿ ಅಥವಾ ವೃತ್ತಿಗಳನ್ನು ಪರಿಶೀಲಿಸಿ. Junior Assistant ಉದ್ಯೋಗಗಳ ಅಧಿಸೂಚನೆಯನ್ನು ತೆರೆಯಿರಿ ಮತ್ತು ಅರ್ಹತೆಯನ್ನು ಪರಿಶೀಲಿಸಿ. ಅರ್ಜಿ ನಮೂನೆಯ ಸಂಖ್ಯೆ/ಸ್ವೀಕಾರ ಸಂಖ್ಯೆ (Form number/Acceptance number) ಯನ್ನು ಸುರಕ್ಷಿತವಾಗಿಡಿ.

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಏರ್‌ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ಅಧಿಕೃತ ವೆಬ್‌ಸೈಟ್‌ (Official website) ಗೆ ಭೇಟಿ ನೀಡುವ ಮೂಲಕ ಆನ್‌ಲೈನ್‌ (Online) ನಲ್ಲಿ ಅರ್ಜಿ ಸಲ್ಲಿಸಬಹುದು.

ಪ್ರಮುಖ ದಿನಾಂಕಗಳು :

ಅರ್ಜಿ ಸಲ್ಲಿಕೆಯ ಆರಂಭಿಕ ದಿನಾಂಕ : 05 March 2025.

ಅರ್ಜಿ ಸಲ್ಲಿಕೆಯ ಅಂತಿಮ ದಿನಾಂಕ : 11 April 2025.


ರಾಜ್ಯದ ಸರ್ಕಾರಿ ಶಾಲಾ ಶಿಕ್ಷಕರಿಗೆ `ಹಳೆಯ ಡಿಫೈನ್ ಪಿಂಚಣಿ' ಸೌಲಭ್ಯ : ಸರ್ಕಾರದಿಂದ ಮಹತ್ವದ ಆದೇಶ.

2005-06 ಮತ್ತು 2006-07 ನೇ ಸಾಲಿನಲ್ಲಿ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರು ದಿನಾಂಕ: 01-04-2006 ರ ಪೂರ್ವದಲ್ಲಿ ನೇಮಕಾತಿ ಅಧಿಸೂಚನೆಗಳ ಮೂಲಕ ಆಯ್ಕೆ ಹೊಂದಿ ಆ ದಿನಾಂಕದಿಂದ ಅಥವಾ ನಂತರದಲ್ಲಿ ಸೇವೆಗೆ ಸೇರಿದ ಶಿಕ್ಷಕರರು ಹಳೆಯ ಡಿಫೈನ್ ಪಿಂಚಣಿ ಸೌಲಭ್ಯಕ್ಕೆ ಒಳಪಡಿಸುವ ಬಗ್ಗೆ ರಾಜ್ಯ ಸರ್ಕಾರವು ಮಹತ್ವದ ಆದೇಶ ಹೊರಡಿಸಿದೆ.

 ಸಂಬಂದಿಸಿದಂತೆ, ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರು ದಿನಾಂಕ: 01-04-2006 ರ ಪೂರ್ವದಲ್ಲಿ ನೇಮಕಾತಿ ಅಧಿಸೂಚನೆಗಳ ಮೂಲಕ ಆಯ್ಕೆ ಹೊಂದಿ, ಆ ದಿನಾಂಕದಿಂದ ಅಥವಾ ನಂತರದಲ್ಲಿ ಸೇವೆಗೆ ಸೇರಿದ ಶಿಕ್ಷಕರುಗಳನ್ನು ಹಳೆಯ ಡಿಫ್ರೆಂಡ್ ಪಿಂಚಣಿ ಸೌಲಭ್ಯಕ, ಒಳಪಡಿಸುವ ಸಂಬಂಧ, ಬೆಂಗಳೂರು ಮತ್ತು ಮೈಸೂರು ವಿಭಾಗದ ಎಲ್ಲಾ ಜಿಲ್ಲಾ ಉಪನಿರ್ದೇಶಕರು ಸಲ್ಲಿಸಿದ್ದ ವಸ್ತಾವನೆಗಳನ್ನು ಉಲ್ಲೇಖ-02 ರ ಪತ್ರದಲ್ಲಿ ಅಡಕಗೊಳಿಸಿ ಸಲ್ಲಿಸಲಾಗಿತ್ತು

ಈ ಸಂಬಂಧ ಉಲ್ಲೇಖ-03 ರ ಪತ್ರದಲ್ಲಿ ಪ್ರಸ್ತಾವನೆಯನ್ನು ಆರ್ಥಿಕ ಇಲಾಖೆಗೆ ಸರ್ಕಾರದ ಆದೇಶ ಸಂಖ್ಯೆ ಅಇ-ಪಿಇಎನ್/99/2024 ದಿನಾಂಕ 24-01-2024 ರಸ್ತೆಯ ಎನ್.ಪಿ.ಎಸ್ ನಿಂದ ಒಪಿಎಸ್ ಗೆ ಒಳಪಡುವ ಎಲ್ಲಾ ಗ್ರೂಪ್ ಎ ಬಿ. ಸಿ ಮತ್ತು ಡಿ ನೌಕರರ ಇಲಾಖಾವಾರು ಕ್ರೋಡೀಕೃತ ನಮೂನೆ 01 & 02) ರಲ್ಲಿ ವಿವರಗಳನ್ನು ಇಲಾಖಾ ಮುಖ್ಯಸ್ಮರ ಸಹಿಯೊಂದಿಗೆ ದೃಢೀಕರಿಸಿ ಸಲ್ಲಿಸುವಂತಿ ಸೂಚಿಸಲಾಗಿದೆ.

ಅದರಂತೆ, ಬೆಂಗಳೂರು ಮತ್ತು ಮೈಸೂರು ವಿಭಾಗದ ಶಾಲಾ ಶಿಕ್ಷಣ ಇಲಾಖೆಯ ಎಲ್ಲಾ ಉಪನಿರ್ದೇಶಕರು ತಮ್ಮ ಶಿಫಾರಸ್ಸಿನೊಂದಿಗೆ ಮಾಹಿತಿಯನ್ನು ಈ ಕಛೇರಿಗೆ ಸಲ್ಲಿಸಿದ್ದು ಸದರಿ ಮಾಹಿತಿಯನ್ನು ಅಗತ್ಯ ದೃಡೀಕರಣದೊಂದಿಗೆ ಸರ್ಕಾರದ ಮುಂದಿನ ಕ್ರಮಕ್ಕಾಗಿ ಸಲ್ಲಿಸಿದೆ.

ಶುಕ್ರವಾರ, ಮಾರ್ಚ್ 14, 2025

retirement plan

ನಿವೃತ್ತಿಯ ನಂತರ ನೆಮ್ಮದಿಯ ಜೀವನವನ್ನ ನಡೆಸಲು ನಮಗೆ ಹಣದ ಅಗತ್ಯ ಹೆಚ್ಚಿರುತ್ತದೆ. ನಿವೃತ್ತಿಯ ನಂತರ ಯಾವುದೇ ಸ್ಥಿರ ಆದಾಯವಿಲ್ಲದೇ ಹಣಕಾಸು ನಿರ್ವಹಣೆ ಮಾಡುವುದು ಕಷ್ಟವಾಗಬಹುದು.

ಹೀಗಾಗಿ ನೀವು ನಿಮ್ಮ ನಿವೃತ್ತಿಗಾಗಿ ಈಗಲೇ ಹಣವನ್ನ ಉಳಿತಾಯ ಮಾಡಲು ಆರಂಭ ಮಾಡುವುದು ಉತ್ತಮ. ಆದ್ರೆ ಹೇಗೆ ಆರಂಭ ಮಾಡುವುದು ಎಂಬ ಗೊಂದಲ ನಮಗೆ ಹೆಚ್ಚಿರುತ್ತದೆ. ಅದಕ್ಕಾಗಿ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ ಅವುಗಳು ಯಾವುವು ಎಂಬ ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯೋಣ ಬನ್ನಿ...

ಅನೇಕ ಜನರು ಈಗಾಗಲೇ ನಿವೃತ್ತಿಗಾಗಿ ಹಣವನ್ನು ಕೂಡಿಡಲು ಆರಂಭ ಮಾಡುತ್ತಿದ್ದಾರೆ. ಜೊತೆಗೆ ನಿವೃತ್ತಿಗಾಗಿ ತಯಾರಿಗಳನ್ನ ಕೂಡ ಮಾಡಿಕೊಳ್ಳುತ್ತಿದ್ದಾರೆ. ಇನ್ನು ಬ್ಯಾಂಕ್‌ಬಜಾರ್ ಮನಿಮೂಡ್ 2025ರ ಸಮೀಕ್ಷೆಯ ವರದಿ ಪ್ರಕಾರ ಈಗಾಗಲೇ ಶೇಕಡಾ 58 ರಷ್ಟು ಜನರು ನಿವೃತ್ತಿ ಕಾರ್ಪಸ್‌ ಅನ್ನು ಈಗಾಗಲೇ ಸಿದ್ಧಪಡಿಸಿದ್ದಾರೆ ಎಂದು ವರದಿ ತಿಳಿಸಿದೆ. ಅಲ್ಲದೆ ಇದು ಉತ್ತಮ ಸಭ್ಯಸವನ್ನ ಸೂಚಿಸುತ್ತದೆ. ಹಾಗೆ ಭಾರತದಲ್ಲಿ ಮೂರನೇ ಎರಡು ಭಾಗದಷ್ಟು ಜನರು ಸಧ್ಯದಲ್ಲೇ ನಿವೃತ್ತಯನ್ನ ಹೊಂದಲಿದ್ದಾರೆ ಎಂದು ವರದಿ ತಿಳಿಸಿದೆ. ಸಮಯ ಮತ್ತು ಹಣ ಮುಖ್ಯವಾಗುತ್ತದೆ ಈ ನಿವೃತ್ತಿ ಯೋಜನೆ ಎರಡು ಪ್ರಮುಖ ಅಂಶಗಳ ಮೇಲೆ ನಿಂತಿದೆ. ಒಂದು ಸಮಯ ಮತ್ತೊಂದು ಹಣ. ನಿವೃತ್ತಯ ವೇಳೆ ಉತ್ತಮ ಆಯೋಗ್ಯದ ಜೊತೆಜೊತೆಗೆ ಉತ್ತಮ ಆರ್ಥಿಕ ಸ್ಥಿರತೆಯನ್ನ ಕೂಡ ಕಾಪಾಡಿಕೊಳ್ಳಬೇಕು. ನಿವೃತ್ತಿಯ ಸಮಯದಲ್ಲಿ ನೆಮ್ಮದಿಯ ಜೀವನ ನಡೆಸಲು ನೀವು ನಿಮ್ಮ ಹಣವನ್ನ ಉಳಿತಾಯ ಮಾಡಲು ಬೇಗನೇ ಆರಂಭಿಸುವುದು ಮುಖ್ಯ.

ನಿಮ್ಮ ದಿನನಿತ್ಯದ ಜೀವನದಲ್ಲಿ ಸಾಕಷ್ಟು ತೊಂದರೆಗಳು ಎದುರಾಗಬಹುದು. ಅಲ್ಲದೆ ನಿಮ್ಮ ಖರ್ಚುಗಳು ಕೂಡ ಹೆಚ್ಚಾಗಬಹುದು. ಇದರಿಂದಾಗಿ ನೀವು ಹಣದುಬ್ಬರಕ್ಕೆ ತುತ್ತಾಗಬಹುದು. ಅಂತಹ ಸಮಯದಲ್ಲಿ ಜನರು ಸಾಲದ ಮೊರೆ ಹೋಗಬಹುದು. ಅಂತಹ ಪರಿಸ್ಥಿತಿಗಳನ್ನ ತಪ್ಪಿಸಲು ಸುರಕ್ಷಿತ ಭವಿಷ್ಯಕ್ಕಾಗಿ ಸರಿಯಾದ ಕ್ರಮಗಳನ್ನ ತೆಗೆದುಕೊಳ್ಳುವುದು ಬಹಳ ಮುಖ್ಯ. ಹೆಚ್ಚಿನ ಪ್ರಯೋಜನಗಳಿಗಾಗಿ ಬೇಗ ಆರಂಭಿಸಿ ನೀವು ನಿಮ್ಮ 20 ಮತ್ತು 30ರ ದಶಕದಲ್ಲಿ ನಿಮ್ಮ ನಿವೃತ್ತಿ ದೂರವಿದೆ ಎನ್ನಿಸಬಹುದು ಆದ್ರೂ ಕೂಡ ನೀವು ಆವಾಗ್ಲೆ ಆರಂಭ ಮಾಡುವುದು ಉತ್ತಮ. ಕೆಲವರು ನಿವೃತ್ತಿ ಉಳಿತಾಯವನ್ನ ವಿಳಂಬಗೊಳಿಸುತ್ತಾರೆ. ಆದ್ರೆ ನೀವು ಎಷ್ಟು ಬೇಗ ಆರಂಭ ಮಡುತ್ತೀರೋ ಅಷ್ಟು ಪ್ರಯೋಜನಗಳನ್ನ ಗಳಿಸಬಹುದು. ಬೇಗ ಆರಂಭ ಮಾಡುವ ಮೂಲಕ ನೀವು ಹೆಚ್ಚಿನ ಆದಾಯವನ್ನ ಕೂಡ ಗಳಿಸಬಹುದು.

ನಿವೃತ್ತಿಯ ಅಗತ್ಯಗಳನ್ನ ಅಂದಾಜಿಸಿ ನೀವು ನಿಮ್ಮ ನಿವೃತ್ತಿ ಹಣವನ್ನ ಉಳಿತಾಯ ಮಾಡುವ ಮೊದಲು ನಿಮ್ಮ ನಿವೃತ್ತಿಯ ಅಗತ್ಯಗಳ ಬಗ್ಗೆ ತಿಳಿಯಿರಿ. ಉತ್ತಮ ಜೀವನಶೈಲಿಗಾಗಿ ಬೇಕಾಗುವ ಕಾರ್ಪಸ್‌ ಅನ್ನು ಅಂದಾಜು ಮಾಡಿ. ನಂತರ ಹಣವನ್ನ ಉಳಿತಾಯ ಮಾಡಲು ಆರಂಭಿಸಿ. ವೈದ್ಯಕೀಯ ವೆಚ್ಚಗಳು, ಸಾಲಗಳು, ಹಣದುಬ್ಬರ ಸೇರಿದಂತೆ ಎಲ್ಲಾ ಅಂಶಗಳನ್ನ ಗಮನದಲ್ಲಿಟ್ಟುಕೊಂಡು ನಿವೃತ್ತಿಯ ಅಗತ್ಯಗಳನ್ನ ಅಂದಾಜಿಸಬೇಕು. ನಿಮಗೆ ಈಗ 30 ವರ್ಷ ಆಗಿದ್ದರೆ ನೀವು ಈಗ 50,000ಗಳನ್ನ ಖರ್ಚು ಮಾಡುತ್ತಿದ್ದರೆ, ನಿಮಗೆ 60 ವರ್ಷಗಳಾದ ಮೇಲೆ ಆ ಖರ್ಚು 2.22 ಲಕ್ಷಕ್ಕೆ ಏರಿಕೆಯಾಗಬಹುದು. ಅಲ್ಲದೆ ನಿಮ್ಮ ನಿವೃತ್ತಿಯ ನಂತರ ನಿಮ್ಮ ಅಗತ್ಯಗಳು ಹೆಚ್ಚಾಗಬಹುದು. ಹೀಗಾಗಿ ಸರಿಯಾಗಿ ಅಂದಾಜಿಸಿ ಉಳಿತಾಯವನ್ನ ಮಾಡಬೇಕು.

ಸರಿಯಾದ ಹೂಡಿಕೆ ಆಯ್ಕೆಯನ್ನ ಆರಿಸಿ ನಿವೃತ್ತಿಗಾಗಿ ನಿಧಿಯನ್ನ ನಿರ್ಮಿಸುವಾಗ ಹೂಡಿಕೆಗಳನ್ನ ಆಯ್ಕೆ ಮಾಡುವುದು ಉತ್ತಮ ಅದರಲ್ಲೂ ನೀವು ಎಲ್ಲಿ ಹೂಡಿಕೆ ಮಾಡುತ್ತೀರಿ ಎನ್ನುವುದು ಕೂಡ ಮುಖ್ಯವಾಗುತ್ತದೆ. ಭವಿಷ್ಯ ನಿಧಿ(PF): ಇದು ವಿಶ್ವಾಸಾರ್ಹ ಹೂಡಿಕೆ ಯೋಜನೆ ಇದಾಗಿದೆ. ಅಲ್ಲದೆ ದಿರ್ಘಕಾಲದ ಉಳಿತಾಯವನ್ನ ನೀಡುತ್ತದೆ. ಇಕ್ವಿಟಿ ಹೂಡಿಕೆಗಳು (ಸ್ಟಾಕ್‌ಗಳು ಅಥವಾ SIPಗಳು): ಇದು ಕೂಡ ಹೂಡಿಕೆಗೆ ಉತ್ತಮ ಆಯ್ಕೆಯಾಗಿದೆ. ಅಲ್ಲದೆ ಇದು ಸಮಯಕಳೆದಂತೆ ಉತ್ತಮ ಆದಾಯವನ್ನ ನೀಡುತ್ತದೆ.

ರಾಷ್ಟ್ರೀಯ ಪಿಂಚಣಿ ಯೋಜನೆ (NPS): ಇದು ಸುರಕ್ಷಿತ ಹೂಡಿಕೆ ಯೋಜನೆಗಳಲ್ಲಿ ಒಂದಾಗಿದೆ. ತೆರಿಗೆ ಪ್ರಯೋಜನಗಳ ಜೊತೆಗೆ ಸರ್ಕಾರ ಬೆಂಬಲಿತ ಆಯ್ಕೆ ಇದಾಗಿದೆ. ಸಾರ್ವಜನಿಕ ಭವಿಷ್ಯ ನಿಧಿ (PPF): ಸುರಕ್ಷಿತ ಹೂಡಿಕೆ ಆಯ್ಕೆ ಇದಾಗಿದೆ. ನಿವೃತ್ತಿಗಾಗಿ ಉಳಿತಾಯ ಮಾಡುವವರಿಗೆ ಉತ್ತಮ ಆಯ್ಕೆಯಾಗಿದೆ. ನೀವು ಹೂಡಿಕೆ ಮಾಡುವ ಮೂನ್ನ ತಿಳಿದ ತಜ್ಞರ ಸಲಹೆ ಪಡೆಯುವುದು ಉತ್ತಮ. ನಿಮ್ಮ ಹಣಕಾಸಿನ ಗುರಿಗಳಿಗೆ ತಕ್ಕಂತೆ ನಿಮಗೆ ಹೂಡಿಕೆ ಮಾಡಲು ಸಹಾಯವಾಗುತ್ತದೆ. ನಿಯಮಿತ ಮತ್ತು ಸ್ಥಿರವಾದ ಹೂಡಿಕೆ ಯೋಜನೆಗಳನ್ನ ಆಯ್ಕೆ ಮಾಡಿಕೊಂಡು ಹೂಡಿಕೆಯನ್ನ ಆರಂಭಿಸಬೇಕು.

ಇದು ನಿಮಗೆ ಸಮಯ ಕಳೆದಂತೆ ಗಣನೀಯ ಕಾರ್ಪಸ್‌ ಅನ್ನು ಗಳಿಸಲು ಸಹಾಯ ಮಾಡುತ್ತದೆ. ಉತ್ತಮ ಯೋಜನೆಯೊಂದಿಗೆ ನೀವು ನಿಮ್ಮ ನಿವೃತ್ತಿಗಾಗಿ ಹಣವನ್ನ ಕೂಡಿಡುವ ಮೂಲಕ ನೀವು ನಿವೃತ್ತಿ ಸಮಯದಲ್ಲಿ ನೆಮ್ಮದಿಯ ಜೀವನವನ್ನ ಕಟ್ಟಿಕೊಳ್ಳಬಹುದು.

ಈಗ ಜಾರಿಯಲ್ಲಿ ಇರುವ ಪಿಂಚಣಿ ಯೋಜನೆಗಳು

ಭಾರತದಲ್ಲಿ ಎನ್ ಪಿಎಸ್ ಯೋಜನೆ ಜಾರಿಯಲ್ಲಿದೆ. ಇದಲ್ಲದೆ ಅಸಂಘಟಿತ ವಲಯಕ್ಕಾಗಿ ಸರ್ಕಾರಿ ಪಿಂಚಣಿ ಯೋಜನೆ ಜಾರಿಯಲ್ಲಿವೆ. ಇವುಗಳಲ್ಲಿ ಒಂದು ಅಟಲ್ ಪಿಂಚಣಿ ಯೋಜನೆಯಾಗಿದೆ.

ಅಟಲ್ ಪಿಂಚಣಿ ಯೋಜನೆ ಎಂದರೇನು?

ಅಟಲ್ ಪಿಂಚಣಿ ಯೋಜನೆ (Atal Pension Yojana) ಅತ್ಯಂತ ಉತ್ತಮ ಆಯ್ಕೆ. ಅದರಲ್ಲೂ ವಿಶೇಷವಾಗಿ ನಿವೃತ್ತಿಯ ನಂತರ ಪಿಂಚಣಿ ಆವಶ್ಯಕತೆ ಇರುವವರಿಗೆ ಹೆಚ್ಚಿನ ಅನುಕೂಲವಿದೆ.60 ವರ್ಷ ತುಂಬಿದ ವ್ಯಕ್ತಿಗೆ ಪ್ರತಿ ತಿಂಗಳು 1,000 ರಿಂದ 5,000 ರೂ.ಗಳವರೆಗೆ ಪಿಂಚಣಿ ಸಿಗುತ್ತದೆ.ಆದರೆ ಈ ಯೋಜನೆಯಲ್ಲಿ ಪ್ರತಿ ತಿಂಗಳು 210 ರೂಪಾಯಿ ಠೇವಣಿ ಇಡಬೇಕಾಗುತ್ತದೆ.

ಶ್ರಮ ಯೋಗಿ ಮಾನ್ ಧನ್ ಯೋಜನೆ

ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್ ಧನ್ ಯೋಜನೆ (SYM) ದೇಶದ ಬೀದಿ ಬದಿ ವ್ಯಾಪಾರಿಗಳು, ಮನೆ ಕೆಲಸಗಾರರು ಮತ್ತು ಕಾರ್ಮಿಕರಿಗೆ ಆರ್ಥಿಕ ಸುರಕ್ಷತೆ ಒದಗಿಸಲು ಇರುವಂತಹ ಯೋಜನೆ. ಈ ಯೋಜನೆಯು ದೇಶದ ಅಸಂಗತಿತ ಕ್ಷೇತ್ರದ ಕಾರ್ಮಿಕರಿಗೆ, ವಿಶೇಷವಾಗಿ ಅವಶ್ಯಕತೆಯಲ್ಲಿರುವವರಿಗೆ ನಿವೃತ್ತಿ ನಂತರದ ಪಿಂಚಣಿಯನ್ನು ನೀಡುತ್ತದೆ.

ಕಿಸಾನ್ ಮಾನ್ ಧನ್ ಯೋಜನೆ

ಕಿಸಾನ್ ಮಾನ್ ಧನ್ ಯೋಜನೆ (Kisan Mandhan Yojana) ಕರ್ನಾಟಕ ಸೇರಿದಂತೆ ದೇಶಾದ್ಯಾಂತ ಕೃಷಿಕರಿಗೆ ಆರ್ಥಿಕತೆಯನ್ನು ಒದಗಿಸಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಯೋಜನೆ. ಈ ಯೋಜನೆಯು ಕೃಷಿಕರ ನಿವೃತ್ತಿ ನಂತರದ ಆರ್ಥಿಕ ಬೆಂಬಲ ನೀಡಿದ ಸಾಲದ ಭಾರವನ್ನು ಕಡಿಮೆ ಮಾಡಲು ಸಹಾಯಗವಾಗುತ್ತದೆ.

ಇದರಲ್ಲಿ, ಹೂಡಿಕೆದಾರರಿಗೆ 60 ವರ್ಷ ತುಂಬಿದ ನಂತರ, ಸರ್ಕಾರ ಪ್ರತಿ ತಿಂಗಳು 3000 ರೂಪಾಯಿ ಪಿಂಚಣಿ ನೀಡುತ್ತದೆ.

ಏಕೀಕೃತ ಪಿಂಚಣಿ ಯೋಜನೆ (ಯುಪಿಎಸ್)

ಏಕೀಕೃತ ಪಿಂಚಣಿ ಯೋಜನೆ (Unified Pension Scheme)ಯು ಏಪ್ರಿಲ್ 1, 2025 ರಿಂದ ಜಾರಿಗೆ ಬರಲಿರುವಂತಿದ್ದು, ಇದು ದೇಶಾದ್ಯಾಂತ ಉದ್ಯೋಗಿಗಳಿಗೆ ಪಿಂಚಣಿಯ ವ್ಯವಸ್ಥೆಯನ್ನು ಸುಧಾರಿಸಲು ಮತ್ತು ನಿವೃತ್ತಿ ನಂತರವೂ ಆರ್ಥಿಕ ಸುರಕ್ಷತೆ ಒದಗಿಸಲು ಮಹತ್ವದ ಯೋಜನೆ ಆಗಿದೆ. ಈ ಯೋಜನೆಯಡಿಯಲ್ಲಿ, ಒಬ್ಬ ಉದ್ಯೋಗಿ 25 ವರ್ಷಗಳ ಕಾಲ ಕೆಲಸ ಮಾಡಿದ್ದರೆ, ನಿವೃತ್ತಿಯ ಮೊದಲು, ಕೆಲಸದ ಕೊನೆಯ 12 ತಿಂಗಳ ಮೂಲ ವೇತನದ ಶೇಕಡಾ 50ರಷ್ಟು ಹಣ ಪಿಂಚಣಿ ರೂಪದಲ್ಲಿ ಅವರಿಗೆ ಸಿಗುತ್ತದೆ.

ಹೀಗೆ ಹಲವಾರು ಸರ್ಕಾರಿ ಪಿಂಚಣಿ ವ್ಯವಸ್ಥೆ ನಮ್ಮ ದೇಶದಲ್ಲಿ ಜಾರಿಯಲ್ಲಿ ಇವೆ. ಇದರಿಂದ ಕೋಟ್ಯಾಂತರ ಜನ ಇದರ ಅನುಕೂಲ ಪಡೆದುಕೊಂಡ ಆರ್ಥಿಕವಾಗಿ ಸಬಲರಾಗಿದ್ದಾರೆ.


ಗುರುವಾರ, ಮಾರ್ಚ್ 13, 2025

retirement plan

ನಿವೃತ್ತಿಯ ನಂತರ ನೆಮ್ಮದಿಯ ಜೀವನವನ್ನ ನಡೆಸಲು ನಮಗೆ ಹಣದ ಅಗತ್ಯ ಹೆಚ್ಚಿರುತ್ತದೆ. ನಿವೃತ್ತಿಯ ನಂತರ ಯಾವುದೇ ಸ್ಥಿರ ಆದಾಯವಿಲ್ಲದೇ ಹಣಕಾಸು ನಿರ್ವಹಣೆ ಮಾಡುವುದು ಕಷ್ಟವಾಗಬಹುದು.

ಹೀಗಾಗಿ ನೀವು ನಿಮ್ಮ ನಿವೃತ್ತಿಗಾಗಿ ಈಗಲೇ ಹಣವನ್ನ ಉಳಿತಾಯ ಮಾಡಲು ಆರಂಭ ಮಾಡುವುದು ಉತ್ತಮ. ಆದ್ರೆ ಹೇಗೆ ಆರಂಭ ಮಾಡುವುದು ಎಂಬ ಗೊಂದಲ ನಮಗೆ ಹೆಚ್ಚಿರುತ್ತದೆ. ಅದಕ್ಕಾಗಿ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ ಅವುಗಳು ಯಾವುವು ಎಂಬ ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯೋಣ ಬನ್ನಿ...

ಅನೇಕ ಜನರು ಈಗಾಗಲೇ ನಿವೃತ್ತಿಗಾಗಿ ಹಣವನ್ನು ಕೂಡಿಡಲು ಆರಂಭ ಮಾಡುತ್ತಿದ್ದಾರೆ. ಜೊತೆಗೆ ನಿವೃತ್ತಿಗಾಗಿ ತಯಾರಿಗಳನ್ನ ಕೂಡ ಮಾಡಿಕೊಳ್ಳುತ್ತಿದ್ದಾರೆ. ಇನ್ನು ಬ್ಯಾಂಕ್‌ಬಜಾರ್ ಮನಿಮೂಡ್ 2025ರ ಸಮೀಕ್ಷೆಯ ವರದಿ ಪ್ರಕಾರ ಈಗಾಗಲೇ ಶೇಕಡಾ 58 ರಷ್ಟು ಜನರು ನಿವೃತ್ತಿ ಕಾರ್ಪಸ್‌ ಅನ್ನು ಈಗಾಗಲೇ ಸಿದ್ಧಪಡಿಸಿದ್ದಾರೆ ಎಂದು ವರದಿ ತಿಳಿಸಿದೆ. ಅಲ್ಲದೆ ಇದು ಉತ್ತಮ ಸಭ್ಯಸವನ್ನ ಸೂಚಿಸುತ್ತದೆ. ಹಾಗೆ ಭಾರತದಲ್ಲಿ ಮೂರನೇ ಎರಡು ಭಾಗದಷ್ಟು ಜನರು ಸಧ್ಯದಲ್ಲೇ ನಿವೃತ್ತಯನ್ನ ಹೊಂದಲಿದ್ದಾರೆ ಎಂದು ವರದಿ ತಿಳಿಸಿದೆ. ಸಮಯ ಮತ್ತು ಹಣ ಮುಖ್ಯವಾಗುತ್ತದೆ ಈ ನಿವೃತ್ತಿ ಯೋಜನೆ ಎರಡು ಪ್ರಮುಖ ಅಂಶಗಳ ಮೇಲೆ ನಿಂತಿದೆ. ಒಂದು ಸಮಯ ಮತ್ತೊಂದು ಹಣ. ನಿವೃತ್ತಯ ವೇಳೆ ಉತ್ತಮ ಆಯೋಗ್ಯದ ಜೊತೆಜೊತೆಗೆ ಉತ್ತಮ ಆರ್ಥಿಕ ಸ್ಥಿರತೆಯನ್ನ ಕೂಡ ಕಾಪಾಡಿಕೊಳ್ಳಬೇಕು. ನಿವೃತ್ತಿಯ ಸಮಯದಲ್ಲಿ ನೆಮ್ಮದಿಯ ಜೀವನ ನಡೆಸಲು ನೀವು ನಿಮ್ಮ ಹಣವನ್ನ ಉಳಿತಾಯ ಮಾಡಲು ಬೇಗನೇ ಆರಂಭಿಸುವುದು ಮುಖ್ಯ.

ನಿಮ್ಮ ದಿನನಿತ್ಯದ ಜೀವನದಲ್ಲಿ ಸಾಕಷ್ಟು ತೊಂದರೆಗಳು ಎದುರಾಗಬಹುದು. ಅಲ್ಲದೆ ನಿಮ್ಮ ಖರ್ಚುಗಳು ಕೂಡ ಹೆಚ್ಚಾಗಬಹುದು. ಇದರಿಂದಾಗಿ ನೀವು ಹಣದುಬ್ಬರಕ್ಕೆ ತುತ್ತಾಗಬಹುದು. ಅಂತಹ ಸಮಯದಲ್ಲಿ ಜನರು ಸಾಲದ ಮೊರೆ ಹೋಗಬಹುದು. ಅಂತಹ ಪರಿಸ್ಥಿತಿಗಳನ್ನ ತಪ್ಪಿಸಲು ಸುರಕ್ಷಿತ ಭವಿಷ್ಯಕ್ಕಾಗಿ ಸರಿಯಾದ ಕ್ರಮಗಳನ್ನ ತೆಗೆದುಕೊಳ್ಳುವುದು ಬಹಳ ಮುಖ್ಯ. ಹೆಚ್ಚಿನ ಪ್ರಯೋಜನಗಳಿಗಾಗಿ ಬೇಗ ಆರಂಭಿಸಿ ನೀವು ನಿಮ್ಮ 20 ಮತ್ತು 30ರ ದಶಕದಲ್ಲಿ ನಿಮ್ಮ ನಿವೃತ್ತಿ ದೂರವಿದೆ ಎನ್ನಿಸಬಹುದು ಆದ್ರೂ ಕೂಡ ನೀವು ಆವಾಗ್ಲೆ ಆರಂಭ ಮಾಡುವುದು ಉತ್ತಮ. ಕೆಲವರು ನಿವೃತ್ತಿ ಉಳಿತಾಯವನ್ನ ವಿಳಂಬಗೊಳಿಸುತ್ತಾರೆ. ಆದ್ರೆ ನೀವು ಎಷ್ಟು ಬೇಗ ಆರಂಭ ಮಡುತ್ತೀರೋ ಅಷ್ಟು ಪ್ರಯೋಜನಗಳನ್ನ ಗಳಿಸಬಹುದು. ಬೇಗ ಆರಂಭ ಮಾಡುವ ಮೂಲಕ ನೀವು ಹೆಚ್ಚಿನ ಆದಾಯವನ್ನ ಕೂಡ ಗಳಿಸಬಹುದು.

ನಿವೃತ್ತಿಯ ಅಗತ್ಯಗಳನ್ನ ಅಂದಾಜಿಸಿ ನೀವು ನಿಮ್ಮ ನಿವೃತ್ತಿ ಹಣವನ್ನ ಉಳಿತಾಯ ಮಾಡುವ ಮೊದಲು ನಿಮ್ಮ ನಿವೃತ್ತಿಯ ಅಗತ್ಯಗಳ ಬಗ್ಗೆ ತಿಳಿಯಿರಿ. ಉತ್ತಮ ಜೀವನಶೈಲಿಗಾಗಿ ಬೇಕಾಗುವ ಕಾರ್ಪಸ್‌ ಅನ್ನು ಅಂದಾಜು ಮಾಡಿ. ನಂತರ ಹಣವನ್ನ ಉಳಿತಾಯ ಮಾಡಲು ಆರಂಭಿಸಿ. ವೈದ್ಯಕೀಯ ವೆಚ್ಚಗಳು, ಸಾಲಗಳು, ಹಣದುಬ್ಬರ ಸೇರಿದಂತೆ ಎಲ್ಲಾ ಅಂಶಗಳನ್ನ ಗಮನದಲ್ಲಿಟ್ಟುಕೊಂಡು ನಿವೃತ್ತಿಯ ಅಗತ್ಯಗಳನ್ನ ಅಂದಾಜಿಸಬೇಕು. ನಿಮಗೆ ಈಗ 30 ವರ್ಷ ಆಗಿದ್ದರೆ ನೀವು ಈಗ 50,000ಗಳನ್ನ ಖರ್ಚು ಮಾಡುತ್ತಿದ್ದರೆ, ನಿಮಗೆ 60 ವರ್ಷಗಳಾದ ಮೇಲೆ ಆ ಖರ್ಚು 2.22 ಲಕ್ಷಕ್ಕೆ ಏರಿಕೆಯಾಗಬಹುದು. ಅಲ್ಲದೆ ನಿಮ್ಮ ನಿವೃತ್ತಿಯ ನಂತರ ನಿಮ್ಮ ಅಗತ್ಯಗಳು ಹೆಚ್ಚಾಗಬಹುದು. ಹೀಗಾಗಿ ಸರಿಯಾಗಿ ಅಂದಾಜಿಸಿ ಉಳಿತಾಯವನ್ನ ಮಾಡಬೇಕು.

ಸರಿಯಾದ ಹೂಡಿಕೆ ಆಯ್ಕೆಯನ್ನ ಆರಿಸಿ ನಿವೃತ್ತಿಗಾಗಿ ನಿಧಿಯನ್ನ ನಿರ್ಮಿಸುವಾಗ ಹೂಡಿಕೆಗಳನ್ನ ಆಯ್ಕೆ ಮಾಡುವುದು ಉತ್ತಮ ಅದರಲ್ಲೂ ನೀವು ಎಲ್ಲಿ ಹೂಡಿಕೆ ಮಾಡುತ್ತೀರಿ ಎನ್ನುವುದು ಕೂಡ ಮುಖ್ಯವಾಗುತ್ತದೆ. ಭವಿಷ್ಯ ನಿಧಿ(PF): ಇದು ವಿಶ್ವಾಸಾರ್ಹ ಹೂಡಿಕೆ ಯೋಜನೆ ಇದಾಗಿದೆ. ಅಲ್ಲದೆ ದಿರ್ಘಕಾಲದ ಉಳಿತಾಯವನ್ನ ನೀಡುತ್ತದೆ. ಇಕ್ವಿಟಿ ಹೂಡಿಕೆಗಳು (ಸ್ಟಾಕ್‌ಗಳು ಅಥವಾ SIPಗಳು): ಇದು ಕೂಡ ಹೂಡಿಕೆಗೆ ಉತ್ತಮ ಆಯ್ಕೆಯಾಗಿದೆ. ಅಲ್ಲದೆ ಇದು ಸಮಯಕಳೆದಂತೆ ಉತ್ತಮ ಆದಾಯವನ್ನ ನೀಡುತ್ತದೆ.

ರಾಷ್ಟ್ರೀಯ ಪಿಂಚಣಿ ಯೋಜನೆ (NPS): ಇದು ಸುರಕ್ಷಿತ ಹೂಡಿಕೆ ಯೋಜನೆಗಳಲ್ಲಿ ಒಂದಾಗಿದೆ. ತೆರಿಗೆ ಪ್ರಯೋಜನಗಳ ಜೊತೆಗೆ ಸರ್ಕಾರ ಬೆಂಬಲಿತ ಆಯ್ಕೆ ಇದಾಗಿದೆ. ಸಾರ್ವಜನಿಕ ಭವಿಷ್ಯ ನಿಧಿ (PPF): ಸುರಕ್ಷಿತ ಹೂಡಿಕೆ ಆಯ್ಕೆ ಇದಾಗಿದೆ. ನಿವೃತ್ತಿಗಾಗಿ ಉಳಿತಾಯ ಮಾಡುವವರಿಗೆ ಉತ್ತಮ ಆಯ್ಕೆಯಾಗಿದೆ. ನೀವು ಹೂಡಿಕೆ ಮಾಡುವ ಮೂನ್ನ ತಿಳಿದ ತಜ್ಞರ ಸಲಹೆ ಪಡೆಯುವುದು ಉತ್ತಮ. ನಿಮ್ಮ ಹಣಕಾಸಿನ ಗುರಿಗಳಿಗೆ ತಕ್ಕಂತೆ ನಿಮಗೆ ಹೂಡಿಕೆ ಮಾಡಲು ಸಹಾಯವಾಗುತ್ತದೆ. ನಿಯಮಿತ ಮತ್ತು ಸ್ಥಿರವಾದ ಹೂಡಿಕೆ ಯೋಜನೆಗಳನ್ನ ಆಯ್ಕೆ ಮಾಡಿಕೊಂಡು ಹೂಡಿಕೆಯನ್ನ ಆರಂಭಿಸಬೇಕು.

ಇದು ನಿಮಗೆ ಸಮಯ ಕಳೆದಂತೆ ಗಣನೀಯ ಕಾರ್ಪಸ್‌ ಅನ್ನು ಗಳಿಸಲು ಸಹಾಯ ಮಾಡುತ್ತದೆ. ಉತ್ತಮ ಯೋಜನೆಯೊಂದಿಗೆ ನೀವು ನಿಮ್ಮ ನಿವೃತ್ತಿಗಾಗಿ ಹಣವನ್ನ ಕೂಡಿಡುವ ಮೂಲಕ ನೀವು ನಿವೃತ್ತಿ ಸಮಯದಲ್ಲಿ ನೆಮ್ಮದಿಯ ಜೀವನವನ್ನ ಕಟ್ಟಿಕೊಳ್ಳಬಹುದು.

ಈಗ ಜಾರಿಯಲ್ಲಿ ಇರುವ ಪಿಂಚಣಿ ಯೋಜನೆಗಳು

ಭಾರತದಲ್ಲಿ ಎನ್ ಪಿಎಸ್ ಯೋಜನೆ ಜಾರಿಯಲ್ಲಿದೆ. ಇದಲ್ಲದೆ ಅಸಂಘಟಿತ ವಲಯಕ್ಕಾಗಿ ಸರ್ಕಾರಿ ಪಿಂಚಣಿ ಯೋಜನೆ ಜಾರಿಯಲ್ಲಿವೆ. ಇವುಗಳಲ್ಲಿ ಒಂದು ಅಟಲ್ ಪಿಂಚಣಿ ಯೋಜನೆಯಾಗಿದೆ.

ಅಟಲ್ ಪಿಂಚಣಿ ಯೋಜನೆ ಎಂದರೇನು?

ಅಟಲ್ ಪಿಂಚಣಿ ಯೋಜನೆ (Atal Pension Yojana) ಅತ್ಯಂತ ಉತ್ತಮ ಆಯ್ಕೆ. ಅದರಲ್ಲೂ ವಿಶೇಷವಾಗಿ ನಿವೃತ್ತಿಯ ನಂತರ ಪಿಂಚಣಿ ಆವಶ್ಯಕತೆ ಇರುವವರಿಗೆ ಹೆಚ್ಚಿನ ಅನುಕೂಲವಿದೆ.60 ವರ್ಷ ತುಂಬಿದ ವ್ಯಕ್ತಿಗೆ ಪ್ರತಿ ತಿಂಗಳು 1,000 ರಿಂದ 5,000 ರೂ.ಗಳವರೆಗೆ ಪಿಂಚಣಿ ಸಿಗುತ್ತದೆ.ಆದರೆ ಈ ಯೋಜನೆಯಲ್ಲಿ ಪ್ರತಿ ತಿಂಗಳು 210 ರೂಪಾಯಿ ಠೇವಣಿ ಇಡಬೇಕಾಗುತ್ತದೆ.

ಶ್ರಮ ಯೋಗಿ ಮಾನ್ ಧನ್ ಯೋಜನೆ

ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್ ಧನ್ ಯೋಜನೆ (SYM) ದೇಶದ ಬೀದಿ ಬದಿ ವ್ಯಾಪಾರಿಗಳು, ಮನೆ ಕೆಲಸಗಾರರು ಮತ್ತು ಕಾರ್ಮಿಕರಿಗೆ ಆರ್ಥಿಕ ಸುರಕ್ಷತೆ ಒದಗಿಸಲು ಇರುವಂತಹ ಯೋಜನೆ. ಈ ಯೋಜನೆಯು ದೇಶದ ಅಸಂಗತಿತ ಕ್ಷೇತ್ರದ ಕಾರ್ಮಿಕರಿಗೆ, ವಿಶೇಷವಾಗಿ ಅವಶ್ಯಕತೆಯಲ್ಲಿರುವವರಿಗೆ ನಿವೃತ್ತಿ ನಂತರದ ಪಿಂಚಣಿಯನ್ನು ನೀಡುತ್ತದೆ.

ಕಿಸಾನ್ ಮಾನ್ ಧನ್ ಯೋಜನೆ

ಕಿಸಾನ್ ಮಾನ್ ಧನ್ ಯೋಜನೆ (Kisan Mandhan Yojana) ಕರ್ನಾಟಕ ಸೇರಿದಂತೆ ದೇಶಾದ್ಯಾಂತ ಕೃಷಿಕರಿಗೆ ಆರ್ಥಿಕತೆಯನ್ನು ಒದಗಿಸಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಯೋಜನೆ. ಈ ಯೋಜನೆಯು ಕೃಷಿಕರ ನಿವೃತ್ತಿ ನಂತರದ ಆರ್ಥಿಕ ಬೆಂಬಲ ನೀಡಿದ ಸಾಲದ ಭಾರವನ್ನು ಕಡಿಮೆ ಮಾಡಲು ಸಹಾಯಗವಾಗುತ್ತದೆ.

ಇದರಲ್ಲಿ, ಹೂಡಿಕೆದಾರರಿಗೆ 60 ವರ್ಷ ತುಂಬಿದ ನಂತರ, ಸರ್ಕಾರ ಪ್ರತಿ ತಿಂಗಳು 3000 ರೂಪಾಯಿ ಪಿಂಚಣಿ ನೀಡುತ್ತದೆ.

ಏಕೀಕೃತ ಪಿಂಚಣಿ ಯೋಜನೆ (ಯುಪಿಎಸ್)

ಏಕೀಕೃತ ಪಿಂಚಣಿ ಯೋಜನೆ (Unified Pension Scheme)ಯು ಏಪ್ರಿಲ್ 1, 2025 ರಿಂದ ಜಾರಿಗೆ ಬರಲಿರುವಂತಿದ್ದು, ಇದು ದೇಶಾದ್ಯಾಂತ ಉದ್ಯೋಗಿಗಳಿಗೆ ಪಿಂಚಣಿಯ ವ್ಯವಸ್ಥೆಯನ್ನು ಸುಧಾರಿಸಲು ಮತ್ತು ನಿವೃತ್ತಿ ನಂತರವೂ ಆರ್ಥಿಕ ಸುರಕ್ಷತೆ ಒದಗಿಸಲು ಮಹತ್ವದ ಯೋಜನೆ ಆಗಿದೆ. ಈ ಯೋಜನೆಯಡಿಯಲ್ಲಿ, ಒಬ್ಬ ಉದ್ಯೋಗಿ 25 ವರ್ಷಗಳ ಕಾಲ ಕೆಲಸ ಮಾಡಿದ್ದರೆ, ನಿವೃತ್ತಿಯ ಮೊದಲು, ಕೆಲಸದ ಕೊನೆಯ 12 ತಿಂಗಳ ಮೂಲ ವೇತನದ ಶೇಕಡಾ 50ರಷ್ಟು ಹಣ ಪಿಂಚಣಿ ರೂಪದಲ್ಲಿ ಅವರಿಗೆ ಸಿಗುತ್ತದೆ.

ಹೀಗೆ ಹಲವಾರು ಸರ್ಕಾರಿ ಪಿಂಚಣಿ ವ್ಯವಸ್ಥೆ ನಮ್ಮ ದೇಶದಲ್ಲಿ ಜಾರಿಯಲ್ಲಿ ಇವೆ. ಇದರಿಂದ ಕೋಟ್ಯಾಂತರ ಜನ ಇದರ ಅನುಕೂಲ ಪಡೆದುಕೊಂಡ ಆರ್ಥಿಕವಾಗಿ ಸಬಲರಾಗಿದ್ದಾರೆ.


NPS Calculator: ನಿವೃತ್ತಿ ನಂತರ ನೀವೆಷ್ಟು ಪೆನ್ಷನ್ ಪಡೆಯುತ್ತೀರಿ ಎಂದು ತಿಳಿಯಬೇಕೆ? ಈ ರೀತಿ ಲೆಕ್ಕ ಹಾಕಿ..!

NPS Calculator: ನಿವೃತ್ತಿ ನಂತರ ನೀವೆಷ್ಟು ಪೆನ್ಷನ್ ಪಡೆಯುತ್ತೀರಿ ಎಂದು ತಿಳಿಯಬೇಕೆ? ಈ ರೀತಿ ಲೆಕ್ಕ ಹಾಕಿ..!

ನ್ಯಾಷನಲ್ ಪೆನ್ಷನ್ ಸಿಸ್ಟಮ್‌ ಒಂದು ಮಹತ್ವದ ಯೋಜನೆಯಾಗಿದೆ. ಭಾರತ ಸರ್ಕಾರದಿಂದ ಪ್ರಾಯೋಜಿತವಾದ ಈ ಯೋಜನೆ, ನಿವೃತ್ತಿ ಹೂಡಿಕೆಯನ್ನು ಪ್ರತಿನಿಧಿಸುತ್ತದೆ. ನಿವೃತ್ತಿ ನಂತರದ ಬದುಕಿಗೆ ಇದೊಂದು ಉಪಯೋಗಕರ ಯೋಜನೆಯಾಗಿದ್ದು, ಇದರ ಮುಖ್ಯ ಉದ್ದೇಶ ನಿವೃತ್ತಿ ಬಳಿಕ ಹಣಕಾಸು ಭದ್ರತೆ ಒದಗಿಸುವುದಾಗಿದೆ.

ಅಲ್ಲದೇ ಇದೊಂದು ಕಾಂಟ್ರಿಬ್ಯೂಷನ್‌ ಆಧಾತಿತ ಯೋಜನೆಯಾಗಿದೆ. ಈಗ ಇಂತಿಷ್ಟು ಮೊತ್ತವನ್ನು ಹೂಡಿಕೆ ಮಾಡಿದರೆ, ಈ ಹೂಡಿಕೆಗೆ ಲಭ್ಯವಾಗುವ ಲಾಭದ ಆಧಾರದಲ್ಲಿ ನಿವೃತ್ತಿ ವೇಳೆಗೆ ಪೆನ್ಷನ್‌ ಲಭಿಸುವ ಒಂದು ಯೋಜನೆಯಾಗಿದೆ.

ನಿವೃತ್ತಿ ನಂತರದ ಬದುಕಿಗೆ ಆರ್ಥಿಕ ಭದ್ರತೆ ಒದಗಿಸುವ ಈ ಯೋಜನೆಯನ್ನು ಕ್ಯಾಲ್ಕುಲೇಟ್‌ ಮಾಡುವುದು ಉತ್ತಮ..ಅಂದರೆ ಎನ್‌ಪಿಎಸ್‌ ಕ್ಯಾಲ್ಕುಲೇಟರ್‍‌ ಮೂಲಕ ನಿಮ್ಮ ನಿವೃತ್ತಿ ನಂತರದ ಪೆನ್ಷನ್‌ ಲೆಕ್ಕಹಾಕುವುದು. ನೀವು ನಿವೃತ್ತಿ ಸಮಯದಲ್ಲಿ ಸಂಗ್ರಹಿಸಿಕೊಳ್ಳುವ ಒಟ್ಟು ಮೊತ್ತ, ಹಾಗೂ ಪ್ರ್‍ತಿ ಪ್ರತಿ ತಿಂಗಳ ಪೆನ್ಷನ್ ಎಷ್ಟು ಸಿಗಬಹುದು ಎಂಬುದರ ಅಂದಾಜು ಲಭಿಸುತ್ತದೆ. ನಿಮ್ಮ ನಿವೃತ್ತಿಯ ವೇಳೆಗೆ ಸಂಗ್ರಹಿಸಲಾದ ಮೊತ್ತವು ನಿಮ್ಮ ಹೂಡಿಕೆಯ ಮೊತ್ತ, ನಿಮ್ಮ ಹೂಡಿಕೆಯ ಅವಧಿ, ಯೋಜನೆಯಿಂದ ಲಭ್ಯವಿರುವ ವಾರ್ಷಿಕ ಲಾಭದ ಶೇಕಡ ಪ್ರಮಾಣದ ಮೇಲೆ ಅವಲಂಬಿತವಾಗಿರುತ್ತದೆ.

NPS ಕ್ಯಾಲ್ಕುಲೇಟರ್ ಹೇಗೆ ಕಾರ್ಯನಿರ್ವಹಿಸುತ್ತದೆ?

NPS ಕ್ಯಾಲ್ಕುಲೇಟರ್ ಚಕ್ರಬಡ್ಡಿ ಲೆಕ್ಕಾಚಾರದ ಆಧಾರದಲ್ಲಿ ನಿಮ್ಮ ಹೂಡಿಕೆ ಮೊತ್ತವನ್ನು ಲೆಕ್ಕ ಹಾಕುತ್ತದೆ. ಉದಾಹರಣೆಗೆ ಒಬ್ಬ ವ್ಯಕ್ತಿಯ ವಯಸ್ಸು 30 ವರ್ಷ ಆಗಿದ್ದರೆ, ನಿವೃತ್ತಿ ವಯಸ್ಸು 60 ವರ್ಷಕ್ಕೆ ಲೆಕ್ಕ ಹಾಕಬೇಕಾಗುತ್ತದೆ. ಆ ವ್ಯಕ್ತಿಯ ಮಾಸಿಕ ಹೂಡಿಕೆ ₹5,000 ಎಂದರೆ, ನಿರೀಕ್ಷಿತ ಲಾಭದ ಶೇಕಡ ಪ್ರಮಾಣ ವರ್ಷಕ್ಕೆ 10% ಆಗಿರುತ್ತದೆ. ಹಾಗೆಯೇ ಪೆನ್ಷನ್‌ ಪ್ಲಾನ್‌ಗೆ ಹೂಡಿಕೆ ಮಾಡಬೇಕಾದ ಶೇಕಡ ಪ್ರಮಾಣ 40% ಆಗಿರುತ್ತದೆ. ನಿರೀಕ್ಷಿತ ಆನುಯಿಟಿ ಲಾಭದ ಶೇಕಡ ಪ್ರಮಾಣ 6% ಆಗಿರುತ್ತದೆ. ನಿವೃತ್ತಿ ಸಮಯದಲ್ಲಿ ಸಿಗುವ ಒಟ್ಟು ಮೊತ್ತ ಸುಮಾರು ₹1.14 ಕೋಟಿಗಳಾಗಿದ್ದರೆ, ಪ್ರತಿ ತಿಂಗಳ ನಿರೀಕ್ಷಿತ ಪೆನ್ಷನ್ ಮೊತ್ತ ಸುಮಾರು ₹22,800 ಆಗಿರಬಹುದು ಎಂದು ಅಂದಾಜಿಸಬಹುದಾಗಿದೆ.

NPS ಕ್ಯಾಲ್ಕುಲೇಟರ್ ಬಳಸಲು ಏನು ಅರ್ಹತೆ ಇರಬೇಕು..?

ಎನ್‌ಪಿಎಸ್‌ ಕ್ಯಾಲ್ಕುಲೇಟರ್‍‌ನ ಯಾರು ಬೇಕಾದರೂ ಬಳಸಬಹುದು. ಆದರೆ ಈ ಯೋಜನೆಯಲ್ಲಿ ಹೂಡಿಕೆ ಮಾಡಬೇಕೆಂದರೆ ಒಂದಷ್ಟು ಅರ್ಹತೆಗಳಿರಬೇಕು. ಅಂದರೆ ಇಲ್ಲಿ ಹೂಡಿಕೆ ಮಾಡುವ ವ್ಯಕ್ತಿಯು ಭಾರತೀಯ ನಾಗರಿಕರಾಗಿರಬೇಕು. ಆ ವ್ಯಕ್ತಿಗೆ 18 ರಿಂದ 60 ವರ್ಷಗಳ ನಡುವೆ ವಯಸ್ಸು ಇರಬೇಕು. KYC ದಾಖಲೆಗಳ ಮಾನ್ಯತೆ ಇರಬೇಕು.

ಈ ಅರ್ಹತೆಗಳಿದ್ದರೆ ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ ನಿಮ್ಮ ಭವಿಷ್ಯದ ನಿವೃತ್ತಿ ಭದ್ರತೆಯನ್ನು ಸುಸ್ಥಿರಗೊಳಿಸಬಹುದು. ಹಾಗೂ ಎನ್‌ಪಿಎಸ್‌ ಉತ್ತಮ ಆಯ್ಕೆಯಾಗಿದ್ದು ಇದು ಉದ್ದೀರ್ಘ ಅವಧಿಯ ವೃದ್ಧಿಗೆ ಸಹಕಾರಿಯಾಗುತ್ತದೆ.

NPS ಕ್ಯಾಲ್ಕುಲೇಟರ್ ಬಳಸುವ ವಿಧಾನ:

ಎನ್‌ಪಿಎಸ್‌ ಕ್ಯಾಲ್ಕುಲೇಟರ್‍‌ ಬಳಸಲು ಒಂದಷ್ಟು ವಿವರಗಳನ್ನು ಒದಗಿಸಬೇಕಾಗುತ್ತದೆ. ಅವುಗಳಲ್ಲಿ ಪ್ರಮುಖವಾಗಿ..

- ನಿಮ್ಮ ಪ್ರಸ್ತುತ ವಯಸ್ಸು ಮತ್ತು ನಿವೃತ್ತಿ ವಯಸ್ಸು

- ನೀವು ಪ್ರತಿ ತಿಂಗಳು ಹೂಡಿಸುವ ಮೊತ್ತ

- NPS ಹೂಡಿಕೆಯಿಂದ ನೀವು ನಿರೀಕ್ಷಿಸುವ ವಾರ್ಷಿಕ ಲಾಭದ ಶೇಕಡ ಪ್ರಮಾಣ

- ನಿವೃತ್ತಿಯ ನಂತರ ನೀವು ಎಷ್ಟು ವರ್ಷ ಪೆನ್ಷನ್ ಪಡೆಯಲು ಬಯಸುತ್ತೀರಿ

- ನಿವೃತ್ತಿಯ ನಂತರ ನೀವು ಪೆನ್ಷನ್ ಯೋಜನೆಗೆ ಮರುಹೂಡಿಕೆ ಮಾಡುವ ಮೊತ್ತ

NPS ಕ್ಯಾಲ್ಕುಲೇಟರ್ ನಿಮಗೆ ಏನು ತೋರಿಸುತ್ತದೆ?

- ನೀವು ಹೂಡಿಕೆ ಮಾಡಿದ ಮೊತ್ತ ಮತ್ತು ಅದರಿಂದ ಬಂದ ಲಾಭ

- ನಿವೃತ್ತಿ ಸಮಯದಲ್ಲಿ ಒಟ್ಟು ಸಂಗ್ರಹಿಸಿದ ಮೊತ್ತ

- ಪೆನ್ಷನ್ ಪಡೆಯಲು ಮರುಹೂಡಿಕೆ ಮಾಡಿದ ಮೊತ್ತ

- ನೀವು ಪ್ರತಿಮಾಸ ಪಡೆಯುವ ಪೆನ್ಷನ್ ಮೊತ್ತ

ಹೀಗೆ ನಿವೃತ್ತಿ ಬಳಿಕ ನಿಮಗೆ ಸಿಗುವ ಮೊತ್ತ ಎಷ್ಟು ಎಂಬುದನ್ನು, ಈಗಿನಿಂದಲೇ ಲೆಕ್ಕ ಹಾಕಿ ಹೂಡಿಕೆ ಮಾಡಿದರೆ ಉತ್ತಮ. ಎಲ್ಲೋ ಹಣ ಪೋಲಾಗುವ ಬದಲು ಮುಂದೊಂದು ದಿನ ಒಟ್ಟು ದೊಡ್ಡ ಮೊತ್ತ ಸಿಗುತ್ತದೆ ಎಂದಾದರೂ, ಸ್ವಲ್ಪ ಹೆಚ್ಚು ಪ್ರಮಾಣದ ಹಣ ಹೂಡಿಕೆ ಮಾಡಬಹುದು. ಇಂದಿನ ಲೆಕ್ಕಾಚಾರ ಮುಂದಿನ ಭದ್ರತೆಯಾಗಿರುತ್ತದೆ.


state government employees insurance

ಮುಂದಿನ ಮೂರು ತಿಂಗಳ ಅವಧಿಯಲ್ಲಿ ಎಲ್ಲಾ ಸರ್ಕಾರಿ ನೌಕರರು ಈ ಯೋಜನೆಯ ಪ್ರಯೋಜನ ಪಡೆಯಲಿದ್ದಾರೆ ಎಂದು ಹೇಳಿದ್ದಾರೆ.

ವಿಧಾನಸಭೆಯಲ್ಲಿ ಕಾಗವಾಡ ಶಾಸಕ ಭರಮಗೌಡ ಅಲಗೌಡ ಕಾಗೆ ಕೇಳಿದ್ದ ಪ್ರಶ್ನೆಗೆ ಮುಖ್ಯಮಂತ್ರಿಗಳು ಉತ್ತರ ಕೊಟ್ಟಿದ್ದಾರೆ. ಶಾಸಕರು ರಾಜ್ಯದ ಸರ್ಕಾರಿ ನೌಕರರಿಗೆ ರೂ. 1 ಕೋಟಿಗಳ ಅಪಘಾತ ವಿಮೆಯನ್ನು ಮಾಡಲು ಸರ್ಕಾರ ಯೋಚಿಸಿದೆಯೇ?, ಹಾಗಿದ್ದಲ್ಲಿ, ಎಂದಿನಿಂದ ಜಾರಿಗೆ ತರಲಾಗುವುದು? ಎಂದು ಪ್ರಶ್ನಿಸಿದ್ದರು.

ಸಿದ್ದರಾಮಯ್ಯ ಉತ್ತರ: ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಉತ್ತರದಲ್ಲಿ ರಾಜ್ಯ ಸರ್ಕಾರಿ ನೌಕರರ ಸಾಮಾಜಿಕ ಭದ್ರತೆಯು ಸರ್ಕಾರದ ಪ್ರಮುಖ ವಿಷಯವಾಗಿರುವುದರಿಂದ ಸಾಮಾಜಿಕ ಭದ್ರತೆ ಇದ್ದಲ್ಲಿ, ನೌಕರರು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ, ಕಾರ್ಯನಿರ್ವಹಿಸುತ್ತಾರೆ ಎಂದು ಹೇಳಿದ್ದಾರೆ.

ಈಗಾಗಲೇ ಜಾರಿಯಲ್ಲಿರುವ ಸಾಮಾಜಿಕ ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಮತ್ತು ಸುಗಮಗೊಳಿಸಲು, ಈ ಕೆಳಕಂಡ ಅಂಶಗಳನ್ನು ಒಳಗೊಂಡ ಪ್ರಸ್ತಾವನೆಗೆ ಸಚಿವ ಸಂಪುಟ ಸಭೆಯು ದಿನಾಂಕ 30.01.2025ರಂದು ಈ ಕೆಳಗಿನಂತೆ ಆದೇಶಿಸಿದೆ ಎಂದು ಹೇಳಿದ್ದಾರೆ.

* ವಿವಿಧ ಬ್ಯಾಂಕುಗಳು ಒದಗಿಸುವ ಸಂಬಳ ಪ್ಯಾಕೇಜ್‌ಗಳ ಅಡಿಯಲ್ಲಿ ಎಲ್ಲಾ ನೌಕರರು. (ಖಾಯಂ/ ಗುತ್ತಿಗೆ/ ಹೊರಗುತ್ತಿಗೆ ಇತ್ಯಾದಿ) ಖಾತೆಗಳನ್ನು ತೆರೆಯಲು/ ಆಯ್ಕೆ ಮಾಡಿಕೊಳ್ಳಲು ಕಡ್ಡಾಯಗೊಳಿಸುವುದು.

* ಬ್ಯಾಂಕ್‌ಗಳು/ ಅಂಚೆ ಕಚೇರಿಗಳು ನೀಡುವ PMJJBY ಮತ್ತು PMSBY ಯೋಜನೆಗಳ ಅಡಿಯಲ್ಲಿ ಸ್ವಯಂಪ್ರೇರಿತವಾಗಿ ವಿಮಾ ರಕ್ಷಣೆಯನ್ನು ಪಡೆಯಲು ಉದ್ಯೋಗಿಗಳನ್ನು ಪ್ರೋತ್ಸಾಹಿಸುವುದು.

* ಬ್ಯಾಂಕ್‌ಗಳು ನೀಡುವ ವಿವಿಧ ಯೋಜನೆಗಳ ಅಡಿಯಲ್ಲಿ ಸ್ವಯಂ ಪ್ರೇರಿತವಾಗಿ ವೈಯಕ್ತಿಕ ಅಪಘಾತ ವಿಮಾ ರಕ್ಷಣೆಯನ್ನು ಪಡೆಯಲು ಉದ್ಯೋಗಿಗಳನ್ನು ಪ್ರೋತ್ಸಾಹಿಸುವುದು.

ಭಾರತೀಯ ಸ್ಟೇಟ್ ಬ್ಯಾಂಕ್‌ ರಾಜ್ಯ ಸರ್ಕಾರಿ ನೌಕರರಿಗೆ ಸಂಬಳ ಪ್ಯಾಕೇಜ್‌ನಲ್ಲಿ ರೂ. 10 ಸಾವಿರಕ್ಕಿಂತ ಮೇಲ್ಪಟ್ಟು ನಿವ್ವಳ ಸಂಬಳ ಪಡೆಯುತ್ತಿರುವ ಅಧಿಕಾರಿ/ ನೌಕರರಿಗೆ ರೂ. 1 ಕೋಟಿ ವೈಯಕ್ತಿಕ ಅಪಘಾತ ವಿಮೆಯನ್ನು ನೀಡುತ್ತದೆ ಹಾಗೂ ರೂ. 1,60 ಕೋಟಿ ವರೆಗೆ ವಿಮಾನ ಅಪಘಾತ ವಿಮೆ ರಕ್ಷಣೆಯನ್ನು ಪೂರಕ ಕೊಡುಗೆಯಾಗಿ ನೀಡುತ್ತದೆ.

ಅದೇ ರೀತಿ ಕೆನರಾ ಬ್ಯಾಂಕ್‌, ರಾಜ್ಯ ಸರ್ಕಾರಿ ನೌಕರರಿಗೆ ಸಂಬಳ ಪ್ಯಾಕೇಜ್‌ನಲ್ಲಿ ರೂ. 50 ಸಾವಿರದ ವರೆಗೆ ನಿವ್ವಳ ಸಂಬಳ ಪಡೆಯುತ್ತಿರುವ ಅಧಿಕಾರಿ/ ನೌಕರರಿಗೆ ರೂ. 50 ಲಕ್ಷಗಳ ವೈಯಕ್ತಿಕ ಅಪಘಾತ ವಿಮೆ ರಕ್ಷಣೆಯನ್ನು ಪೂರಕ ಕೊಡುಗೆಯಾಗಿ ನೀಡುತ್ತದೆ.

ಅಲ್ಲದೆ, ರೂ. 50 ಸಾವಿರಕ್ಕೆ ಮೆಲ್ಪಟ್ಟು ನಿವ್ವಳ ಸಂಬಳ ಪಡೆಯುತ್ತಿರುವ ಅಧಿಕಾರಿ/ ನೌಕರರಿಗೆ ರೂ. 1 ಕೋಟಿ ವೈಯಕ್ತಿಕ ಅಪಘಾತ ವಿಮೆ ರಕ್ಷಣೆಯನ್ನು ಪೂರಕ ಕೊಡುಗೆಯಾಗಿ ನೀಡುತ್ತದೆ.

ಅದೇ ರೀತಿ ವಿವಿಧ ಬ್ಯಾಂಕುಗಳು ತಮ್ಮ ಸಂಬಳ ಪ್ಯಾಕೇಜ್‌ಗಳಲ್ಲಿ ವಿವಿಧ ಮೊತ್ತದ ವೈಯಕ್ತಿಕ ಅಪಘಾತ ವಿಮೆ ರಕ್ಷಣೆಯ ಕೊಡುಗೆಯಾಗಿ ನೀಡುತ್ತಿವೆ. ಮುಂದಿನ ಮೂರು ತಿಂಗಳ ಅವಧಿಯಲ್ಲಿ ಅಧಿಕಾರಿಗಳು/ ನೌಕರರು ತಮ್ಮ ಇಚ್ಛಾನುಸಾರ ಯಾವುದೇ ಬ್ಯಾಂಕಿನ ಸಂಬಳ ಪ್ಯಾಕೇಜಿನಲ್ಲಿ ನೋಂದಾಯಿಸಿಕೊಳ್ಳಲು ಸರ್ಕಾರದ ಆದೇಶ ದಿನಾಂಕ 21/2/2025ರಲ್ಲಿ ಆದೇಶಿಸಲಾಗಿದೆ ಎಂದು ಹೇಳಿದ್ದಾರೆ.

ಶಾಸಕರು ಈ ಅಪಘಾತ ವಿಮೆ ಯೋಜನೆಯು ನಿಗಮ/ ಮಂಡಳಿಯ ನೌಕರರಿಗೂ ಅನ್ವವಾಗುವುದೇ? ಮತ್ತು ಈ ಯೋಜನೆಯು ಸರ್ಕಾರಿ ನೌಕರರು ಹಾಗೂ ಅಧಿಕಾರಿಗಳಿಗೂ ಅನ್ವಯವಾಗುತ್ತದೆಯೇ?, ವಿಮೆ ಯೋಜನೆಗೆ ಇರುವ ನಿಯಮಗಳೇನು? ಎಂದು ಪ್ರಶ್ನೆ ಮಾಡಿದ್ದರು.

ಸಿದ್ದರಾಮಯ್ಯ ಉತ್ತರದಲ್ಲಿ ವಿವಿಧ ಬ್ಯಾಂಕುಗಳು ತಮ್ಮ ಸಂಬಳ ಪ್ಯಾಕೇಜ್‌ಗಳಲ್ಲಿ ಪೂರಕ ಕೊಡುಗೆಯಾಗಿ ನೀಡುತ್ತಿರುವ ವೈಯಕ್ತಿಕ ಅಪಘಾತ ವಿಮೆ ರಕ್ಷಣೆ ಯೋಜನೆಗಳು ನಿಗಮ/ ಮಂಡಳಿ ನೌಕರರಿಗೂ ಅನ್ವಯವಾಗುತ್ತದೆ.

ವಿವಿಧ ಬ್ಯಾಂಕುಗಳು ತಮ್ಮ ಸಂಬಳ ಪ್ಯಾಕೇಜ್‌ಗಳಲ್ಲಿ ಪೂರಕವಾಗಿ ಕೊಡುಗೆಯಾಗಿ ನೀಡುತ್ತಿರುವ ವೈಯಕ್ತಿಕ ಅಪಘಾತ ವಿಮೆ ಯೋಜನೆಗಳು ಸರ್ಕಾರಿ ನೌಕರರು ಹಾಗೂ ಅಧಿಕಾರಿಗಳಿಗೂ ಅನ್ವಯವಾಗುತ್ತದೆ. ವಿಮೆ ಯೋಜನೆಗೆ ಇರುವ ನಿಯಮಗಳು ಬ್ಯಾಂಕಿನಿಂದ ಬ್ಯಾಂಕಿಗೆ ಭಿನ್ನವಾಗಿರುತ್ತವೆ. ಸದರಿ ವಿಮೆ ಯೋಜನೆಯ ನಿಯಮಗಳನ್ನು ಅಧಿಕಾರಿ/ ನೌಕರರು ಸಂಬಂಧಪಟ್ಟ ಬ್ಯಾಂಕಿನಿಂದ ಪಡೆಯಬಹುದಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ

ಶನಿವಾರ, ಫೆಬ್ರವರಿ 1, 2025

ಹೊಸ ತೆರಿಗೆ ಪದ್ಧತಿ ಸ್ಲ್ಯಾಬ್ ಹೀಗಿದೆ 2025/26

 ಹೊಸ ಆದಾಯ ತೆರಿಗೆ ಸ್ಲ್ಯಾಬ್‌ ಅಡಿಯಲ್ಲಿ ವಾರ್ಷಿಕ 12.75 ಲಕ್ಷ ರೂಪಾಯಿವರೆಗೆ ಆದಾಯ ಹೊಂದಿರುವವರು ಯಾವುದೇ ತೆರಿಗೆ ಪಾವತಿಸುವಂತಿಲ್ಲ ಎಂದು ಹೇಳಿದೆ. ಈ ಮೊದಲು ಇದು 7 ಲಕ್ಷ ರೂಪಾಯಿವರೆಗೆ ಇತ್ತು, ಈಗ ಅದನ್ನು 12 ಲಕ್ಷಕ್ಕೆ ಹೆಚ್ಚಿಸಲಾಗಿದೆ.


ಹೊಸ ತೆರಿಗೆ ಪದ್ಧತಿ ಸ್ಲ್ಯಾಬ್ ಹೀಗಿದೆ


₹ 4 ಲಕ್ಷದವರೆಗೆ ಆದಾಯ ಇದ್ದರೆ ಯಾವುದೇ ತೆರಿಗೆ ಇಲ್ಲ.

₹4 ರಿಂದ ₹8 ಲಕ್ಷ ಆದಾಯ ಹೊಂದಿದ್ದರೆ 5% ತೆರಿಗೆ

₹8 ರಿಂದ ₹12 ಲಕ್ಷ ಆದಾಯ ಹೊಂದಿದ್ದರೆ 10% ತೆರಿಗೆ

₹12 ರಿಂದ ₹16 ಲಕ್ಷ ಆದಾಯ ಹೊಂದಿದ್ದರೆ 20% ತೆರಿಗೆ

₹20 ರಿಂದ ₹24 ಲಕ್ಷ ಆದಾಯ ಹೊಂದಿದ್ದರೆ 25% ತೆರಿಗೆ

₹24 ಲಕ್ಷಕ್ಕಿಂತ ಹೆಚ್ಚು ಆದಾಯ ಹೊಂದಿದ್ದ- 30% ತೆರಿಗೆ

ಹೊಸ ಪದ್ಧತಿಯಿಂದ ಎಷ್ಟು ಉಳಿತಾಯ


12 ಲಕ್ಷ ರೂಪಾಯಿವರೆಗೆ ಆದಾಯ ಹೊಂದಿರುವವರಿಗೆ ತೆರಿಗೆ ವಿನಾಯಿತಿ ನೀಡಲಾಗುತ್ತದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದ್ದಾರೆ. ಹೊಸ ತೆರಿಗೆ ಪದ್ಧತಿಯಲ್ಲಿ 12 ಲಕ್ಷ ರೂ.ಗಳ ಆದಾಯ ಹೊಂದಿರುವ ತೆರಿಗೆದಾರರು 80,000 ರೂಪಾಯಿಗಳಷ್ಟು ತೆರಿಗೆ ಪ್ರಯೋಜನವನ್ನು ಪಡೆಯುತ್ತಾರೆ. ಅಂದರೆ ಬರೋಬ್ಬರಿ 80,000 ರೂಪಾಯಿ ತೆರಿಗೆ ಹಣ ಉಳಿತಾಯವಾಗಲಿದೆ.



₹18 ಲಕ್ಷ ಆದಾಯ ಹೊಂದಿರುವ ವ್ಯಕ್ತಿಯು ಹೊಸ ತೆರಿಗೆ ಸ್ಲ್ಯಾಬ್‌ನಿಂದಾಗಿ 70,000 ರೂ.ಗಳ ತೆರಿಗೆ ಉಳಿತಾಯ ಮಾಡುತ್ತಾರೆ. ₹25 ಲಕ್ಷ ರೂಪಾಯಿವರೆಗೆ ವಾರ್ಷಿಕ ಆದಾಯ ಹೊಂದಿರುವವರಿಗೆ ಹೊಸ ತೆರಿಗೆ ಸ್ಲ್ಯಾಬ್‌ನಿಂದಾಗಿ 1,10,000 ರೂ.ಗಳ ತೆರಿಗೆ ಉಳಿತಾಯವಾಗಲಿದೆ.


10 ಲಕ್ಷ ರೂಪಾಯಿವರೆಗಿನ ಆದಾಯಕ್ಕೆ ತೆರಿಗೆ ವಿನಾಯಿತಿ ನೀಡಬಹುದು ಎಂದು ನಿರೀಕ್ಷೆ ಮಾಡಲಾಗಿತ್ತಾದರೂ ಕೇಂದ್ರ ಸರ್ಕಾರ 12 ಲಕ್ಷ ರೂಪಾಯಿವರೆಗೆ ತೆರಿಗೆ ವಿನಾಯಿತಿ ಘೋಷಣೆ ಮಾಡುವ ಮೂಲಕ ಸಂಬಳದಾರರಿಗೆ, ನೌಕರರಿಗೆ, ಮಧ್ಯಮವರ್ಗದವರಿಗೆ ಭರ್ಜರಿ ಕೊಡುಗೆ ನೀಡಿದೆ.


Naveen Kumar N Oneindia

source: oneindia.com

ಮಂಗಳವಾರ, ಜನವರಿ 28, 2025

Upsc examination

 

ಕಳೆದ ವರ್ಷ ಒಟ್ಟು 1056 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿತ್ತು. ಈ ಬಾರಿ ಯುಪಿಎಸ್‌ಸಿ ಯಾವ ಹುದ್ದೆಗೆ ಎಷ್ಟು ನೇಮಕಾತಿ ನಡೆಯಲಿದೆ ಎಂಬ ವಿವರವನ್ನು ಬಿಡುಗಡೆ ಮಾಡಿಲ್ಲವಾದರೂ, ಈ ಬಾರಿ ಐಎಎಸ್, ಐಪಿಎಸ್ ಮತ್ತು ಐಆರ್‌ಎಸ್ (ಭಾರತೀಯ ವಿದೇಶಾಂಗ ಸೇವೆ) ಹುದ್ದೆಗಳೂ ಕಡಿಮೆಯಾಗಲಿವೆ ಎಂದು ಹೇಳಲಾಗುತ್ತಿದೆ.

ವಾಸ್ತವವಾಗಿ, UPSC ಒಟ್ಟು 23 ಸೇವೆಗಳಿಗೆ ನೇಮಕಾತಿ ಮಾಡಿಕೊಳ್ಳುತ್ತದೆ, ಇದರಲ್ಲಿ IAS (ಭಾರತೀಯ ಆಡಳಿತ ಸೇವೆ), IRS (ಭಾರತೀಯ ವಿದೇಶಾಂಗ ಸೇವೆ) ಮತ್ತು IPS (ಭಾರತೀಯ ಪೊಲೀಸ್ ಸೇವೆ) ಪ್ರಮುಖ ಹುದ್ದೆಗಳಾಗಿವೆ. ಇದರ ಹೊರತಾಗಿ, UPSC ಅಧಿಕಾರಿಗಳನ್ನು ನೇಮಕ ಮಾಡುವ ಸೇವೆಗಳ ಪಟ್ಟಿ ಇಲ್ಲಿದೆ.

ಭಾರತೀಯ ಲೆಕ್ಕಪರಿಶೋಧನೆ ಮತ್ತು ಖಾತೆಗಳ ಸೇವೆ (ಗುಂಪು A)
ಭಾರತೀಯ ನಾಗರಿಕ ಖಾತೆಗಳ ಸೇವೆ (ಗುಂಪು A)
ಭಾರತೀಯ ಕಾರ್ಪೊರೇಟ್ ಕಾನೂನು ಸೇವೆ (ಗುಂಪು A)
ಭಾರತೀಯ ರಕ್ಷಣಾ ಖಾತೆಗಳ ಸೇವೆ (ಗುಂಪು A)
ಭಾರತೀಯ ಮಾಹಿತಿ ಸೇವೆ (ಗುಂಪು A)
ಭಾರತೀಯ ಅಂಚೆ ಸೇವೆ (ಗುಂಪು A)
ಭಾರತೀಯ ಅಂಚೆ ಮತ್ತು ದೂರಸಂಪರ್ಕ ಖಾತೆಗಳು ಮತ್ತು ಹಣಕಾಸು ಸೇವೆ (ಗುಂಪು A)
ಭಾರತೀಯ ರೈಲ್ವೆ ನಿರ್ವಹಣಾ ಸೇವೆ- ಸಂಚಾರ (ಗುಂಪು A)
ಭಾರತೀಯ ರೈಲ್ವೆ ನಿರ್ವಹಣಾ ಸೇವೆ- ವೈಯಕ್ತಿಕ (ಗುಂಪು A)
ಭಾರತೀಯ ರೈಲ್ವೆ ನಿರ್ವಹಣಾ ಸೇವೆ- ಖಾತೆಗಳು (ಗುಂಪು A)
ಭಾರತೀಯ ರೈಲ್ವೆ ರಕ್ಷಣಾ ಪಡೆ ಸೇವೆ (ಗುಂಪು A)
ಭಾರತೀಯ ಕಂದಾಯ ಸೇವೆ- ಆದಾಯ ತೆರಿಗೆ (ಗುಂಪು A)
ಭಾರತೀಯ ವ್ಯಾಪಾರ ಸೇವೆ (ಗುಂಪು A- ಗ್ರೇಡ್ III)
ಸಶಸ್ತ್ರ ಪಡೆಗಳ ಪ್ರಧಾನ ಕಛೇರಿ ನಾಗರಿಕ ಸೇವೆ (ಗುಂಪು B- ವಿಭಾಗ ಅಧಿಕಾರಿ ದರ್ಜೆ)
ದೆಹಲಿ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಲಕ್ಷದ್ವೀಪ, ದಮನ್ ಮತ್ತು ದಿಯು ಮತ್ತು ದಾದ್ರಾ ಮತ್ತು ನಗರ ಹವೇಲಿ ನಾಗರಿಕ ಸೇವೆ (DANICS)- ಗುಂಪು B
ದೆಹಲಿ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಲಕ್ಷದ್ವೀಪ, ದಮನ್ ಮತ್ತು ದಿಯು ಮತ್ತು ದಾದ್ರಾ ಮತ್ತು ನಗರ ಹವೇಲಿ ನಾಗರಿಕ ಸೇವಾ ಪೊಲೀಸ್ ಸೇವೆ (DANICS)- ಗುಂಪು B
ಪಾಂಡಿಚೇರಿ ನಾಗರಿಕ ಸೇವೆ (PONDICS)- ಗುಂಪು ಬಿ
ಪಾಂಡಿಚೇರಿ ಪೊಲೀಸ್ ಸೇವೆ (PONDICS)- ಗುಂಪು B
UPSC ಪರೀಕ್ಷೆ ಯಾವಾಗ ನಡೆಯಲಿದೆ?

UPSC ನಾಗರಿಕ ಸೇವೆಗಳ ಪೂರ್ವಭಾವಿ ಪರೀಕ್ಷೆ 25 ಮೇ 2025 ರಂದು ನಡೆಸಲಾಗುವುದು, ಇದರಲ್ಲಿ ಎರಡು ವಸ್ತುನಿಷ್ಠ ಪ್ರಕಾರದ (ಬಹು ಆಯ್ಕೆಯ ಪ್ರಶ್ನೆಗಳು) ಪೇಪರ್‌ಗಳು ಜನರಲ್ ಸ್ಟಡೀಸ್ I ಮತ್ತು ಜನರಲ್ ಸ್ಟಡೀಸ್ II ಇರುತ್ತವೆ. ಒಟ್ಟು 400 ಅಂಕಗಳ ಈ ಪರೀಕ್ಷೆಯು ಕೇವಲ ಸ್ಕ್ರೀನಿಂಗ್ ಪರೀಕ್ಷೆಯಾಗಿದೆ, ಅಂದರೆ, ಈ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರವೇ ಅಭ್ಯರ್ಥಿಗಳು ಮುಖ್ಯ ಪರೀಕ್ಷೆಯಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ.

*Unified Pension Scheme (UPS) main points....*

 *Unified Pension Scheme (UPS) main points....* 



  ಕನ್ನಡದಲ್ಲಿ


1. ಉದ್ದೇಶ


ರಾಷ್ಟ್ರೀಯ ಪೆನ್ಷನ್ ವ್ಯವಸ್ಥೆ (NPS) ಅಡಿಯಲ್ಲಿ ಹೊಸ ಪೆನ್ಷನ್ ಯೋಜನೆ ಪರಿಚಯಿಸಲು, ಕೇಂದ್ರ ಸರ್ಕಾರಿ ನೌಕರರಿಗೆ ಸೇವಾ ಕೊಡುಗೆಗಳ ಮೇಲೆ ಖಚಿತ ಪಾವತಿ ಗ್ಯಾರಂಟಿ ನೀಡುವುದು.



2. ಮುಖ್ಯ ಲಕ್ಷಣಗಳು


ಅರ್ಹತೆ:


NPS ಅಡಿಯಲ್ಲಿ ಒಳಗೊಂಡಿರುವ ಸರ್ಕಾರಿ ನೌಕರರು.


ಈ ಯೋಜನೆ ಸ್ವಯಂಪ್ರೇರಿತ ಆಯ್ಕೆಯಾಗಿದೆ.


ಕನಿಷ್ಠ ಸೇವಾ ಅವಧಿ: 10 ವರ್ಷ (ನಿವೃತ್ತಿಗೆ).


25 ವರ್ಷಗಳ ಸೇವೆಯ ನಂತರ ಸ್ವಯಂ ನಿವೃತ್ತಿಗೆ ಅವಕಾಶ.



ಲಾಭಗಳು:


ಖಚಿತ ಪಾವತಿ:


ಕೊನೆಯ 12 ತಿಂಗಳ ಸರಾಸರಿ ವೇತನದ 50% (ಕನಿಷ್ಠ ₹10,000/ತಿಂಗಳು).



ಪರಿವಾರ ಪಾವತಿ:


ನಿವೃತ್ತಿ ನಂತರ ಉದ್ಯೋಗಿಯ ನಿಧನವಾದಲ್ಲಿ, ಪತ್ನಿಗೆ 60% ಪಾವತಿ ಲಭ್ಯ.



ಮೆಹಂಗಾಯಿ ಪರಿಹಾರ:


ಸೇವೆಯಲ್ಲಿರುವ ಉದ್ಯೋಗಿಗಳಿಗೆ ಅನ್ವಯವಾಗುವಂತೆಯೇ ಲೆಕ್ಕ ಹಾಕಲಾಗುತ್ತದೆ.



ಏಕಕಾಲದ ಪಾವತಿ:


ಸೇವೆಯ 6 ತಿಂಗಳಿಗೊಮ್ಮೆ ಸಂಬಳದ 10% ಲೆಕ್ಕದಲ್ಲಿ ಪಾವತಿಸಲಾಗುತ್ತದೆ.




ಅನ್ವಯವಾಗದ ವಿಷಯಗಳು:


ರಾಜೀನಾಮೆ, ವಜಾ, ಅಥವಾ ಸೇವೆಯಿಂದ ತೆರವುಗೊಳಿಸಿದವರು.


ಈ ಪ್ರಕರಣಗಳಲ್ಲಿ ಖಚಿತ ಪಾವತಿ ಅನ್ವಯವಾಗುವುದಿಲ್ಲ.




3. ನಿಧಿ ತಳಹದಿ:


ರಚನೆ:


ವೈಯಕ್ತಿಕ ನಿಧಿ:


ಉದ್ಯೋಗಿ ಮತ್ತು ಸರ್ಕಾರದಿಂದ (ಸಂಬಳ + DR 10% ತಲಾ ಕೊಡುಗೆ).



ಪೂಲ್ ನಿಧಿ:


ಕೇಂದ್ರ ಸರ್ಕಾರದಿಂದ ಹೆಚ್ಚುವರಿ 8.5% ಕೊಡುಗೆ.




ನಿವೇಶ ಆಯ್ಕೆಗಳು:


ವೈಯಕ್ತಿಕ ನಿಧಿಗೆ ಮಾತ್ರ ಆಯ್ಕೆ ಲಭ್ಯ.



ಪೆನ್ಷನ್ ನಿಧಿ ನಿಯಂತ್ರಣ ಪ್ರಾಧಿಕಾರದಿಂದ (PFRDA) ನಿಯಮಗಳು ಕಡ್ಡಾಯ.



4. ಪ್ರಸ್ತುತ ಮತ್ತು ನಿವೃತ್ತ ಉದ್ಯೋಗಿಗಳಿಗೆ ತಿದ್ದುಪಡಿ:


NPS ಅಡಿಯಲ್ಲಿ ಇರುವವರು ಹೊಸ UPS ಗೆ ಸ್ವಿಚ್ ಮಾಡಬಹುದು.


ನಿವೃತ್ತ ಉದ್ಯೋಗಿಗಳು ಈ ಯೋಜನೆಗೆ ಆಯ್ಕೆ ಮಾಡಬಹುದು; ಬಡ್ಡಿ ಸಮೇತ ಬಾಕಿ ಮೊತ್ತ ಪಾವತಿಸಲಾಗುತ್ತದೆ.



5. ಹೆಚ್ಚುವರಿ ನಿಯಮಗಳು:


ಆಯ್ಕೆ ಮಾಡಿದ ಮೇಲೆ ತಿದ್ದುಪಡಿ ಸಾಧ್ಯವಿಲ್ಲ.


ತೊಂದರೆಯೇನಾದರೂ ಕಂಡುಬಂದಲ್ಲಿ ನಿಗದಿತ ಪ್ರಮಾಣದಲ್ಲಿ ಪಾವತಿಯನ್ನು ಅನುಸರಿಸಲಾಗುತ್ತದೆ.



6. ಕಾರ್ಯದಕ್ಷ ದಿನಾಂಕ:


ಏಪ್ರಿಲ್ 1, 2025.



7. ಪಾವತಿ ಉದಾಹರಣೆಗಳು:


ಉದಾಹರಣೆ 1: 25 ವರ್ಷ ಸೇವೆ, ₹45,000 ವೇತನ:


ಖಚಿತ ಪಾವತಿ: ₹22,500/ತಿಂಗಳು + DR.



ಉದಾಹರಣೆ 2: 10 ವರ್ಷ ಸೇವೆ:


ಕನಿಷ್ಠ ಪಾವತಿ: ₹10,000/ತಿಂಗಳು + DR.



ಅನಿಯಮಿತ ಕೊಡುಗೆಗಳು:


ನಿಧಿ ಸಮತೋಲನವನ್ನು ಪರಿಗಣಿಸಿ, ಪಾಲು ಪಾವತಿ ಲಭ್ಯ.




8. ಏಕಕಾಲದ ಪಾವತಿ ಉದಾಹರಣೆ:


ಉದಾಹರಣೆ:


ಮೂಲ ವೇತನ: ₹45,000; DR: ₹23,850; ಒಟ್ಟು: ₹68,850.


25 ವರ್ಷಗಳ ಸೇವೆಗಾಗಿ:


₹344,250 ಏಕಕಾಲದ ಪಾವತಿಯಾಗುತ್ತದೆ.


ENGLISH


1. Purpose


To introduce a fund-based pension system under the National Pension System (NPS) for Central Government employees, ensuring a combination of employee contributions and assured payouts.



2. Key Features


Eligibility:


Employees covered under NPS.


Opting for UPS is voluntary.


Requires a minimum qualifying service of 10 years for superannuation.


Voluntary retirement allowed after 25 years of service.



Benefits:


Assured Payout:


50% of the last 12 months' average basic pay before retirement.


Minimum payout guaranteed: ₹10,000/month for employees with at least 10 years of qualifying service.



Family Payout:


On the employee's demise after retirement, the spouse will receive 60% of the assured payout.



Dearness Relief (DR):


Calculated similar to Dearness Allowance applicable to serving employees.



Lump-Sum Payment:


10% of monthly emoluments (basic pay + DR) for every 6 months of completed service.




Non-Applicability:


Not valid in cases of resignation, dismissal, or removal from service.


Assured payouts not applicable under these scenarios.




3. Fund Structure


Two components:


Individual Corpus:


Contributions from the employee and matching contributions by the Government (10% of basic pay + DR each).



Pool Corpus:


Additional 8.5% contribution by the Central Government to ensure payouts.




Employees can select investment choices for Individual Corpus only.


Pension Fund Regulatory and Development Authority (PFRDA) governs investment decisions.



4. Transition for Current and Retired Employees


Employees already under NPS can switch to UPS.


Retired employees may also opt for UPS, and arrears (with interest) will be provided based on Public Provident Fund (PPF) rates.


Outstanding NPS corpus of employees opting for UPS will be transferred to the Individual Corpus under the new scheme.



5. Additional Provisions


Once opted, the choice is final.


Strict rules apply in cases of incomplete contributions or discrepancies in fund deposits.


Benchmark corpus values are calculated to ensure payout alignment.



6. Effective Date


April 1, 2025.



7. Examples of Payout Scenarios:


Example 1: Employee with 25 years of service and ₹45,000 as average basic pay:


Assured payout: ₹22,500/month + DR.



Example 2: Employee with 10 years of service:


Minimum assured payout: ₹10,000/month + DR.



Example 3: If contributions were irregular or incomplete:


Proportionate assured payout based on corpus value.




8. Lump-Sum Payout (Illustrative)


Example:


Basic pay: ₹45,000; DR: ₹23,850; Total: ₹68,850.


For 25 years of service:


Lump-sum amount = ₹344,250.


👆🏼👆🏼👆🏼👆🏼👆🏼👆🏼👆🏼👆🏼👆🏼ಮಾಹಿತಿಗಾಗಿ ನೀಡಿದೆ

ಶನಿವಾರ, ಜನವರಿ 25, 2025

ಗಣರಾಜ್ಯೋತ್ಸವಕ್ಕೆ ಪ್ರಶ್ನೆ ಪತ್ರಿಕೆ

 ಇದು ಭಾರತವನ್ನು ಸಾರ್ವಭೌಮ, ಸಮಾಜವಾದಿ, ಜಾತ್ಯತೀತ ಮತ್ತು ಪ್ರಜಾಪ್ರಭುತ್ವ ಗಣರಾಜ್ಯವಾಗಿ ಬದಲಾಯಿಸಿತು. ಈ ದಿನದಂದು ಭಾರತದ ಸ್ವಾತಂತ್ರ್ಯವು ದೇಶದ ವಿಮೋಚನೆಯನ್ನು ಮಾತ್ರವಲ್ಲದೆ ಪ್ರಜಾಪ್ರಭುತ್ವದ ಆದರ್ಶಗಳು, ನ್ಯಾಯ ಮತ್ತು ಸಮಾನತೆಯ ಅನ್ವೇಷಣೆಯನ್ನೂ ಸಂಕೇತಿಸುತ್ತದೆ. ಈ ಗಣರಾಜ್ಯೋತ್ಸವ 2025ರಲ್ಲಿ ರಸಪ್ರಶ್ನೆಯೊಂದಿಗೆ ನಿಮ್ಮ ಜ್ಞಾನವನ್ನು ಪರೀಕ್ಷಿಸಿಕೊಳ್ಳಿ. ದೇಶದ ಬಗ್ಗೆ ದೇಶಕ್ಕಾಗಿ ಹೋರಾಡಿದವರ ಬಗ್ಗೆ ನಿಮಗೆಷ್ಟು ಗೊತ್ತಿದೆ ತಿಳಿದುಕೊಳ್ಳಿ.


1. ಭಾರತದ ಗಣರಾಜ್ಯೋತ್ಸವವನ್ನು ಯಾವಾಗ ಆಚರಿಸಲಾಗುತ್ತದೆ?

ಎ) ಜನವರಿ 1

ಬಿ) ಆಗಸ್ಟ್ 15

ಸಿ) ಜನವರಿ 26

ಡಿ) ಮೇ 26


2. 1950ರ ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ಮೊದಲ ಮುಖ್ಯ ಅತಿಥಿಯಾಗಿ ಭಾಗವಹಿಸಿದವರು ಯಾರು?

ಎ) ಜವಾಹರಲಾಲ್ ನೆಹರು

ಬಿ) ಸುಕರ್ಣೋ (ಇಂಡೋನೇಷ್ಯಾ)

ಸಿ) ರಾಣಿ ಎಲಿಜಬೆತ್ II

ಡಿ) ಮಹಾತ್ಮ ಗಾಂಧಿ


3. ಗಣರಾಜ್ಯೋತ್ಸವ ಮೆರವಣಿಗೆ ನಡೆಯುವ ಸಾಂಪ್ರದಾಯಿಕ ಸ್ಥಳ ಯಾವುದು?

ಎ) ಇಂಡಿಯಾ ಗೇಟ್

ಬಿ) ಕೆಂಪು ಕೋಟೆ

ಸಿ) ಕರ್ತವ್ಯಪಥ

ಡಿ) ರಾಷ್ಟ್ರಪತಿ ಭವನ


4. ಭಾರತ ಎಷ್ಟು ವರ್ಷಗಳಿಂದ ಗಣರಾಜ್ಯೋತ್ಸವವನ್ನು ಆಚರಿಸುತ್ತಿದೆ?

ಎ)60

ಬಿ)72

ಸಿ)75

ಡಿ)99


5. ಗಣರಾಜ್ಯೋತ್ಸವದಂದು ಯಾವ ಮಿಲಿಟರಿ ತುಕಡಿಯು ಪಥಸಂಚಲನವನ್ನು ಮುನ್ನಡೆಸುತ್ತದೆ?

ಎ)ಪದಾತಿ ದಳ

ಬಿ) ನೌಕಾಪಡೆ

ಸಿ) ವಾಯುಪಡೆ

ಡಿ) ವಿಶೇಷ ಪಡೆಗಳು


6. ಮೆರವಣಿಗೆಯಲ್ಲಿ ಪ್ರದರ್ಶನ ನೀಡುವ ವಿಮಾನ ಪ್ರದರ್ಶನ ತಂಡದ ಹೆಸರೇನು?

ಎ) ಸೂರ್ಯ ಕಿರಣ್

ಬಿ) ಸಾರಂಗ್

ಸಿ) ತೇಜಸ್

ಡಿ) ಗರುಡ


7. ಗಣರಾಜ್ಯೋತ್ಸವದಂದು ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಮೊದಲ ಪ್ರಧಾನಿ ಯಾರು?

ಎ)ನರೇಂದ್ರ ಮೋದಿ

ಬಿ) ಜವಾಹರಲಾಲ್ ನೆಹರು

ಸಿ) ಗುಲ್ಜಾರಿ ಲಾಲ್ ನಂದಾ

ಡಿ) ಇಂದಿರಾ ಗಾಂಧಿ


8. ಸಮಾರಂಭದಲ್ಲಿ 21-ಗನ್ ಸೆಲ್ಯೂಟ್‌ನ ಮಹತ್ವವೇನು?

ಅ) ಮುಖ್ಯ ಅತಿಥಿಗಳಿಗೆ ಸ್ವಾಗತ.

ಬಿ) ಹುತಾತ್ಮರಿಗೆ ಗೌರವ

ಸಿ) ರಾಷ್ಟ್ರಗೀತೆ ನುಡಿಸುವುದು

ಡಿ) ಮೆರವಣಿಗೆಯ ಆರಂಭ


9. ಆಚರಣೆಯ ಸಮಯದಲ್ಲಿ ಪ್ರಮುಖವಾಗಿ ಪ್ರದರ್ಶಿಸಲಾಗುವ ರಾಷ್ಟ್ರೀಯ ಹೂವಿನ ಹೆಸರೇನು?

ಎ) ಕಮಲ

ಬಿ) ಗುಲಾಬಿ

ಸಿ) ಮಲ್ಲಿಗೆ

ಡಿ) ಮಾರಿಗೋಲ್ಡ್


10. ಮೆರವಣಿಗೆಯಲ್ಲಿ ಈಶಾನ್ಯ ಭಾರತದ ಸಾಂಸ್ಕೃತಿಕ ತಂಡವು ಯಾವ ನೃತ್ಯ ಪ್ರಕಾರವನ್ನು ಪ್ರದರ್ಶಿಸುತ್ತದೆ?

ಎ) ಭರತನಾಟ್ಯ

ಬಿ) ಬಿಹು

ಸಿ) ಒಡಿಸ್ಸಿ

ಡಿ) ಕೂಚಿಪುಡಿ


11. ಜನವರಿ 29ರ ಸಂಜೆ ನಡೆದ ಬೀಟಿಂಗ್ ರಿಟ್ರೀಟ್ ಸಮಾರಂಭದ ಮಹತ್ವವೇನು?

ಎ)ಗಣರಾಜ್ಯೋತ್ಸವ ಆಚರಣೆಯ ಅಂತ್ಯ

ಬಿ) ಸಶಸ್ತ್ರ ಪಡೆಗಳಿಗೆ ಗೌರವ

ಸಿ) ಇಂಡಿಯಾ ಗೇಟ್‌ನ ಬೆಳಕು

ಡಿ) ರಾಷ್ಟ್ರಗೀತೆಯ ಪ್ರದರ್ಶನ


12. ಗಣರಾಜ್ಯೋತ್ಸವದಂದು ಆಚರಿಸಲಾಗುವ 9 ದಿನಗಳ ಹಬ್ಬ ಯಾವುದು?

ಎ) ದೇಶ್ ಪರ್ವ್

ಬಿ) ಭಾರತ್ ಪರ್ವ್

ಸಿ) ಭಾರತ್ ಉತ್ಸವ

ಡಿ) ದೇಶದ ಬಣ್ಣ


13. ಭಾರತ ಅಧಿಕೃತವಾಗಿ ಗಣರಾಜ್ಯವಾದದ್ದು ಯಾವಾಗ?

ಎ) 1947

ಬಿ) 1950

ಸಿ) 1962

ಡಿ) 1970


14. ಜನವರಿ 26, 1950ರಂದು ಸಂವಿಧಾನವನ್ನು ಅಂಗೀಕರಿಸಿದಾಗ ಭಾರತದ ರಾಷ್ಟ್ರಪತಿ ಯಾರಾಗಿದ್ದರು?

ಎ) ಡಾ.ರಾಜೇಂದ್ರ ಪ್ರಸಾದ್

ಬಿ) ಡಾ.ಸರ್ವಪಲ್ಲಿ ರಾಧಾಕೃಷ್ಣನ್

ಸಿ) ಡಾ. ಝಾಕಿರ್ ಹುಸೇನ್

ಡಿ) ಪ್ರಣಬ್ ಮುಖರ್ಜಿ


15. ಗಣರಾಜ್ಯೋತ್ಸವದ ಆಚರಣೆಗಳಲ್ಲಿ ಪ್ರಮುಖವಾಗಿ ಕಾಣಿಸಿಕೊಳ್ಳುವ ಭಾರತದ ರಾಷ್ಟ್ರೀಯ ಲಾಂಛನ ಯಾವುದು?

ಎ) ಸಿಂಹ

ಬಿ)ಆನೆ

ಸಿ) ಹುಲಿ

ಡಿ)ನವಿಲು


16. ಮೊದಲ ಗಣರಾಜ್ಯೋತ್ಸವ ಮೆರವಣಿಗೆ ಯಾವ ವರ್ಷದಲ್ಲಿ ನಡೆಯಿತು?

ಎ)1948

ಬಿ)1950

ಸಿ)1952

ಡಿ)1960


17. 2019ರ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಯಾವ ವಿದೇಶಿ ನಾಯಕರನ್ನು ಆಹ್ವಾನಿಸಲಾಯಿತು?

ಎ)ಡೊನಾಲ್ಡ್ ಟ್ರಂಪ್

ಬಿ) ವ್ಲಾಡಿಮಿರ್ ಪುಟಿನ್

ಸಿ) ಶಿಂಜೊ ಅಬೆ

ಡಿ) ಎಮ್ಯಾನುಯೆಲ್ ಮ್ಯಾಕ್ರನ್


18. ಗಣರಾಜ್ಯೋತ್ಸವದ ಮೆರವಣಿಗೆ ಏನನ್ನು ಪ್ರದರ್ಶಿಸುತ್ತದೆ?

ಎ) ಭಾರತದ ಮಿಲಿಟರಿ ಶಕ್ತಿ ಮಾತ್ರ

ಬಿ) ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ಮಿಲಿಟರಿ ಶಕ್ತಿ

ಸಿ) ರಾಜ್ಯ ಸರ್ಕಾರಗಳು ಮಾತ್ರ

ಡಿ)ನಾಗರಿಕ ಸಂಸ್ಥೆಗಳು


19. ದೆಹಲಿಯಲ್ಲಿ ಗಣರಾಜ್ಯೋತ್ಸವ ಮೆರವಣಿಗೆ ಎಲ್ಲಿ ನಡೆಯುತ್ತದೆ?

a) ಕನ್ನಾಟ್ ಪ್ಲೇಸ್

ಬಿ) ಇಂಡಿಯಾ ಗೇಟ್

ಸಿ) ಕರ್ತವ್ಯಪಥ (ರಾಜಪಥ)

ಡಿ) ರಾಷ್ಟ್ರಪತಿ ಭವನ


20. ಗಣರಾಜ್ಯೋತ್ಸವದಂದು ಧ್ವಜಾರೋಹಣ ಸಮಾರಂಭದ ನಂತರ ಭಾರತದ ರಾಷ್ಟ್ರಪತಿಗಳು ಏನು ಮಾಡುತ್ತಾರೆ?

ಎ)ಭಾಷಣ ಮಾಡುತ್ತಾರೆ.

ಬಿ) ರಾಷ್ಟ್ರೀಯ ಉಡುಪನ್ನು ಧರಿಸುತ್ತಾರೆ

ಸಿ) ಮೆರವಣಿಗೆಯನ್ನು ಮುನ್ನಡೆಸುತ್ತದೆ

ಡಿ) ಒಂದು ಆಚರಣೆಯನ್ನು ಮಾಡುತ್ತಾರೆ


21. 2020ರ ಗಣರಾಜ್ಯೋತ್ಸವದಲ್ಲಿ ಯಾವ ದೇಶವನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಲಾಯಿತು?

ಎ)ಅಮೇರಿಕ ಸಂಯುಕ್ತ ಸಂಸ್ಥಾನ

ಬಿ) ಫ್ರಾನ್ಸ್

ಸಿ) ಬ್ರೆಜಿಲ್

ಡಿ) ರಷ್ಯಾ


22. ಗಣರಾಜ್ಯೋತ್ಸವದಂದು ರಾಷ್ಟ್ರಪತಿಗಳ ಭಾಷಣದ ಮಹತ್ವವೇನು?

ಎ) ಸರ್ಕಾರಿ ನೀತಿಗಳನ್ನು ಘೋಷಿಸಲು

ಬಿ) ಗಣರಾಜ್ಯೋತ್ಸವದ ಮೆರವಣಿಗೆಯ ಆರಂಭವನ್ನು ಗುರುತಿಸಲು

ಸಿ) ರಾಷ್ಟ್ರದ ವರದಿ ಕಾರ್ಡ್ ನೀಡಲು

ಡಿ) ಭಾರತದ ಸಾಧನೆಗಳು ಮತ್ತು ಪ್ರಗತಿಯನ್ನು ಆಚರಿಸಲು


23. ಯಾವ ಸ್ವಾತಂತ್ರ್ಯ ಹೋರಾಟಗಾರನ ಜನ್ಮ ದಿನಾಚರಣೆಯು ಗಣರಾಜ್ಯೋತ್ಸವದ ಜೊತೆಗೆ ಬರುತ್ತದೆ?

a) ಸುಭಾಷ್ ಚಂದ್ರ ಬೋಸ್

b) ಭಗತ್ ಸಿಂಗ್

ಸಿ) ಲಾಲಾ ಲಜಪತ್ ರಾಯ್

d) ಚಂದ್ರಶೇಖರ್ ಆಜಾದ್


24. ಗಣರಾಜ್ಯೋತ್ಸವದಂದು ನೀಡಲಾಗುವ "ಶೌರ್ಯ ಪ್ರಶಸ್ತಿಗಳ" ಮಹತ್ವವೇನು?

a) ಕ್ರೀಡೆಯಲ್ಲಿ ಭಾರತದ ಸಾಧನೆಗಳನ್ನು ಗುರುತಿಸಲು

ಬಿ) ಆರ್ಥಿಕತೆಗೆ ನೀಡಿದ ಕೊಡುಗೆಗಳನ್ನು ಗೌರವಿಸಲು

ಸಿ) ಸಶಸ್ತ್ರ ಪಡೆಗಳು ಮತ್ತು ನಾಗರಿಕರ ಅಸಾಧಾರಣ ಧೈರ್ಯವನ್ನು ಗುರುತಿಸುವುದು

ಡಿ) ಶೈಕ್ಷಣಿಕ ಶ್ರೇಷ್ಠತೆಯನ್ನು ಪುರಸ್ಕರಿಸಲು


25. ಗಣರಾಜ್ಯೋತ್ಸವದಂದು ನೀಡಲಾಗುವ ಅತ್ಯುನ್ನತ ನಾಗರಿಕ ಪ್ರಶಸ್ತಿಯ ಹೆಸರೇನು?

ಎ) ಭಾರತ ರತ್ನ

ಬಿ) ಪದ್ಮಭೂಷಣ

ಸಿ) ಪದ್ಮವಿಭೂಷಣ

ಡಿ) ಶ್ರಮ ರತ್ನ



ಮೇಲಿನ ಪ್ರಶ್ನೆಗಳಿಗೆ ಉತ್ತರಗಳು


1. ಉತ್ತರ: ಸಿ) ಜನವರಿ 26,

2. ಉತ್ತರ: ಬಿ) ಇಂಡೋನೇಷ್ಯಾದ ಅಧ್ಯಕ್ಷ ಸುಕರ್ನೊ

3. ಉತ್ತರ: ಸಿ) ಕರ್ತವ್ಯಪಥ (ಹಿಂದೆ ರಾಜಪಥ ಎಂದು ಕರೆಯಲಾಗುತ್ತಿತ್ತು)

4. ಉತ್ತರ: ಡಿ) 75

5. ಉತ್ತರ: ಎ)ಪದಾತಿ ದಳ

6. ಉತ್ತರ: ಎ) ಸೂರ್ಯ ಕಿರಣ್

7. ಉತ್ತರ: ಬಿ) ಜವಾಹರಲಾಲ್ ನೆಹರು

8. ಉತ್ತರ: ಸಿ) ರಾಷ್ಟ್ರಗೀತೆ ನುಡಿಸುವುದು

9. ಉತ್ತರ: ಎ) ಕಮಲ

10. ಉತ್ತರ: ಬಿ) ಬಿಹು

11. ಉತ್ತರ: ಎ) ಗಣರಾಜ್ಯೋತ್ಸವ ಆಚರಣೆಯ ಅಂತ್ಯ

12. ಉತ್ತರ: ಬಿ)ಭಾರತ್ ಪರ್ವ್

13. ಉತ್ತರ: ಬಿ)1950

14. ಉತ್ತರ. ಎ) ಡಾ. ರಾಜೇಂದ್ರ ಪ್ರಸಾದ್

15. ಉತ್ತರ: ಎ) ಸಿಂಹ

16. ಉತ್ತರ: ಬಿ)1950

17. ಉತ್ತರ: ಸಿ) ಶಿಂಜೊ ಅಬೆ

18. ಉತ್ತರ: ಬಿ) ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ಮಿಲಿಟರಿ ಶಕ್ತಿ

19. ಉತ್ತರ. ಸಿ) ಕರ್ತವ್ಯಪಥ (ರಾಜ್‌ಪಥ)

20. ಉತ್ತರ: ಎ)ಭಾಷಣ ಮಾಡುತ್ತಾರೆ.

21. ಉತ್ತರ: ಸಿ) ಬ್ರೆಜಿಲ್

22. ಉತ್ತರ: ಡಿ) ಭಾರತದ ಸಾಧನೆಗಳು ಮತ್ತು ಪ್ರಗತಿಯನ್ನು ಆಚರಿಸಲು

23. ಉತ್ತರ: ಎ) ಸುಭಾಷ್ ಚಂದ್ರ ಬೋಸ್

24. ಉತ್ತರ: ಸಿ) ಸಶಸ್ತ್ರ ಪಡೆಗಳು ಮತ್ತು ನಾಗರಿಕರ ಅಸಾಧಾರಣ ಧೈರ್ಯವನ್ನು ಗುರುತಿಸುವುದು

25. ಉತ್ತರ: ಎ)ಭಾರತ ರತ್ನ





ಅರೋಗ್ಯ & ಜೀವನ ಶೈಲಿ

ಶುಕ್ರವಾರ, ಜನವರಿ 24, 2025

Upsc

 2025ನೇ ಸಾಲಿನ ನಾಗರಿಕ ಸೇವಾ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಫೆಬ್ರವರಿ 11 ಕೊನೆಯ ದಿನವಾಗಿದೆ.


ಯುಪಿಎಸ್ಸಿ ಅಧಿಕೃತ ವೆಬ್ಸೈಟ್ ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಮೊದಲು ಒನ್ ಟೈಮ್ ರಿಜಿಸ್ಟ್ರೇಷನ್ (OTR) ಪ್ರೊಫೈಲ್ ರಚಿಸಬೇಕಾಗುತ್ತದೆ. ಒಮ್ಮೆ ಒಟಿಆರ್ ಪ್ರೊಫೈಲ್ ರಚಿಸಿದರೆ ಅದು ಜೀವಿತಾವಧಿಯವರೆಗೆ ಮಾನ್ಯವಾಗಿರುತ್ತದೆ. ಈಗಾಗಲೇ ಪ್ರೊಫೈಲ್ ರಚಿಸಿದವರು ನೇರವಾಗಿ ಅರ್ಜಿ ನಮೂನೆಯನ್ನು ಭರ್ತಿ ಮಾಡಬಹುದು. ಈ ಪರೀಕ್ಷೆಯ ಮೂಲಕ ಭರ್ತಿ ಮಾಡಲಾಗುವ ಒಟ್ಟು ಹುದ್ದೆಗಳ ಪೈಕಿ 38 ಹುದ್ದೆಗಳನ್ನು ವಿಕಲಚೇತನ ಅಭ್ಯರ್ಥಿಗಳಿಗೆ ಮೀಸಲಿಡಲಾಗಿದೆ.


ಅರ್ಜಿ ಆರಂಭ, ಕೊನೆಯ ದಿನಾಂಕ


ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 22 ಜನವರಿ 2025


ಅಪ್ಲಿಕೇಶನ್ ಸಲ್ಲಿಸಲು ಕೊನೆಯ ದಿನಾಂಕ: 02 ಫೆಬ್ರವರಿ 2025


ಅಪ್ಲಿಕೇಶನ್‌ ತಿದ್ದುಪಡಿಗೆ ಅವಕಾಶ: 12 ಫೆಬ್ರವರಿ 2025 ರಿಂದ 18 ಫೆಬ್ರವರಿ 2025


ಯುಪಿಎಸ್‌ಸಿ ಪೂರ್ವಭಾವಿ ಪರೀಕ್ಷೆ ದಿನಾಂಕ: 25 ಮೇ 2025


ವೇತನ: 60000 to 80000 ರೂಪಾಯಿ (ತಿಂಗಳಿಗೆ)


ಯುಪಿಎಸ್ಸಿ ಸಿಎಸ್ಸಿ 2025ಗೆ ಅರ್ಜಿ ಸಲ್ಲಿಸುವುದು ಹೇಗೆ?


ಯುಪಿಎಸ್ಸಿ ಅಧಿಕೃತ ವೆಬ್‌ಸೈಟ್ upsc.gov.inಗೆ ಭೇಟಿ ನೀಡಿ.

ಮುಖಪುಟದಲ್ಲಿ "ಯುಪಿಎಸ್ಸಿ ನಾಗರಿಕ ಸೇವೆಗಳ ಅಧಿಸೂಚನೆ" ಲಿಂಕ್ ಅನ್ನು ಕ್ಲಿಕ್ ಮಾಡಿ.

ಜಾಹೀರಾತಿನಲ್ಲಿ ನೀಡಿರುವ ಎಲ್ಲಾ ಸೂಚನೆಗಳನ್ನು ಎಚ್ಚರಿಕೆಯಿಂದ ಓದಿ.

ಈಗ upsconline.nic.in ನಲ್ಲಿ ಲಭ್ಯವಿರುವ "ಒಂದು ಬಾರಿ ನೋಂದಣಿ (OTR) ಮತ್ತು ಯುಪಿಎಸ್ಸಿ ಪರೀಕ್ಷೆಗಾಗಿ ಆನ್‌ಲೈನ್ ಅಪ್ಲಿಕೇಶನ್" ಟ್ಯಾಬ್ ಅನ್ನು ಕ್ಲಿಕ್ ಮಾಡಿ.

ಒಟಿಆರ್ ಪ್ಲಾಟ್‌ಫಾರ್ಮ್ ಮೂಲಕ ನೋಂದಾಯಿಸಿಕೊಳ್ಳಿ.

ಯಶಸ್ವಿ ನೋಂದಣಿಯ ನಂತರ, ಅರ್ಜಿ ನಮೂನೆಯನ್ನು ಭರ್ತಿ ಮಾಡಿ.

ದಾಖಲೆಗಳನ್ನು ಅಪ್ಲೋಡ್ ಮಾಡಿ, ಅರ್ಜಿ ಶುಲ್ಕವನ್ನು ಪಾವತಿಸಿ ಮತ್ತು ಸಲ್ಲಿಸಿ.

ಅರ್ಜಿ ನಮೂನೆಯ ಮುದ್ರಣವನ್ನು ತೆಗೆದುಕೊಳ್ಳಿ.

ವಿದ್ಯಾರ್ಹತೆ


ಈ ಹುದ್ದೆಗಳಿಗೆ ಅಂಗೀಕೃತ ವಿಶ್ವವಿದ್ಯಾಲಯ ಅಥವಾ ಶಿಕ್ಷಣ ಸಂಸ್ಥೆಗಳಿಂದ ಯಾವುದೇ ವಿಷಯ ಅಥವಾ ವಿಭಾಗದಲ್ಲಿ ಪದವಿ ಪಾಸಾದವರು, ಪದವಿ ಅಂತಿಮ ವರ್ಷದಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಸಹ ಆನ್‌ಲೈನ್‌ ಮೂಲಕ ಅರ್ಜಿ ಹಾಕಬಹುದು. ಅರ್ಜಿ ಸಲ್ಲಿಸುವಾಗ ಪದವಿ ಪ್ರಮಾಣಪತ್ರ ಸಲ್ಲಿಸಬೇಕು.


ವಯೋಮಿತಿ


ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 21 ವರ್ಷ (ಆಗಸ್ಟ್ 1, 2025) ಆಗಿರಬೇಕು. ಗರಿಷ್ಠ 32 ವರ್ಷ ಮೀರಬಾರದು.

ಇತರೆ ಹಿಂದುಳಿದ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 3 ವರ್ಷ ವಯಸ್ಸಿನ ಸಡಿಲಿಕೆ ಇರಲಿದೆ.

ಎಸ್ಸಿ/ಎಸ್ಟಿ ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಐದು ವರ್ಷದ ವಯಸ್ಸಿನ ಸಡಿಲಿಕೆ ಇರುತ್ತದೆ.

ಕಾಯ್ದಿರಿಸದ ವರ್ಗದ ಅಭ್ಯರ್ಥಿಗಳು ಯುಪಿಎಸ್ಸಿ ಸಿಎಸ್‌ಇಗೆ 6 ಬಾರಿ ಪ್ರಯತ್ನಿಸಬಹುದು. ಒಬಿಸಿ ಅಭ್ಯರ್ಥಿಗಳು 9 ಬಾರಿ ಪರೀಕ್ಷೆ ತೆಗೆದುಕೊಳ್ಳಬಹುದು. ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ ಯಾವುದೇ ಮಿತಿ ಇಲ್ಲ.

:ಹೀರೋ ಎಕ್ಸ್‌ಟ್ರೀಮ್‌ 250ಆರ್‌ ಬೈಕ್‌ ಬುಕ್ಕಿಂಗ್‌ ಮುಂದಿನ ತಿಂಗಳು ಆರಂಭ, ಮಾರ್ಚ್‌ನಲ್ಲಿ ಡೆಲಿವರಿ, ಹೊಸ ಬೈಕ್‌ ಹೀಗಿದೆ ನೋಡಿ


ಅರ್ಜಿ ಶುಲ್ಕ


ಯುಪಿಎಸ್‌ಸಿ ಪೂರ್ವಭಾವಿ ಪರೀಕ್ಷೆ 2025 ರಿಜಿಸ್ಟ್ರೇಷನ್‌ ಶುಲ್ಕ ರೂಪಾಯಿ 100.


ಎಸ್ಸಿ/ಎಸ್ಟಿ/ಮಹಿಳೆಯರು/ಮಾಜಿ ಸೈನಿಕ, ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.


ಸಂಪರ್ಕ: ಯಾವುದೇ ಗೊಂದಲಗಳಿಗೆ ವೈಯಕ್ತಿಕ ಭೇಟಿ ನೀಡುವುದಿದ್ದರೆ, ಕ್ಯಾಂಪಸ್ನ ಗೇಟ್ 'ಸಿ' ಬಳಿಯ ಯುಪಿಎಸ್ಸಿ ಸೌಲಭ್ಯ ಕೌಂಟರ್ಗೆ ಭೇಟಿ ನೀಡಬಹುದು. ದೂರವಾಣಿ ಸಂಪರ್ಕ: 011-23385271/011-23381125/011-2309885.011.230.


UPSC CSE 2025 ಪರೀಕ್ಷೆಯನ್ನು ಈ ಕೆಳಗಿನ ಸೇವೆಗಳಿಗೆ ನಡೆಸಲಾಗುವುದು


ಭಾರತೀಯ ಆಡಳಿತ ಸೇವೆ

ಭಾರತೀಯ ವಿದೇಶಾಂಗ ಸೇವೆ

ಭಾರತೀಯ ಪೊಲೀಸ್ ಸೇವೆ

ಭಾರತೀಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಸೇವೆ, ಗ್ರೂಪ್ 'ಎ'

ಭಾರತೀಯ ನಾಗರಿಕ ಲೆಕ್ಕಪತ್ರ ಸೇವೆ, ಗ್ರೂಪ್ 'ಎ'

ಭಾರತೀಯ ಕಾರ್ಪೊರೇಟ್ ಕಾನೂನು ಸೇವೆ, ಗ್ರೂಪ್ 'ಎ'

ಭಾರತೀಯ ರಕ್ಷಣಾ ಖಾತೆಗಳ ಸೇವೆ, ಗ್ರೂಪ್ 'ಎ'

ಭಾರತೀಯ ರಕ್ಷಣಾ ಎಸ್ಟೇಟ್ ಸೇವೆಗಳು, ಗ್ರೂಪ್ 'ಎ'

ಭಾರತೀಯ ಮಾಹಿತಿ ಸೇವೆ, ಗ್ರೂಪ್ 'ಎ'

ಭಾರತೀಯ ಅಂಚೆ ಸೇವೆ, ಗ್ರೂಪ್ 'ಎ'

ಭಾರತೀಯ ಅಂಚೆ ಮತ್ತು ದೂರಸಂಪರ್ಕ ಖಾತೆಗಳು ಮತ್ತು ಹಣಕಾಸು ಸೇವೆಗಳು, ಗ್ರೂಪ್ 'ಎ'

ಭಾರತೀಯ ರೈಲ್ವೆ ನಿರ್ವಹಣಾ ಸೇವೆ (ಸಂಚಾರ), ಗ್ರೂಪ್ 'ಎ'

ಭಾರತೀಯ ರೈಲ್ವೆ ನಿರ್ವಹಣಾ ಸೇವೆ (ಸಿಬ್ಬಂದಿ), ಗ್ರೂಪ್ 'ಎ'

ಭಾರತೀಯ ರೈಲ್ವೆ ನಿರ್ವಹಣಾ ಸೇವೆ (ಖಾತೆಗಳು), ಗ್ರೂಪ್ 'ಎ'

ಭಾರತೀಯ ರೈಲ್ವೆ ರಕ್ಷಣಾ ಪಡೆ ಸೇವೆಗಳು, ಗ್ರೂಪ್ 'ಎ'

ಭಾರತೀಯ ಕಂದಾಯ ಸೇವೆ (ಕಸ್ಟಮ್ಸ್ ಮತ್ತು ಪರೋಕ್ಷ ತೆರಿಗೆಗಳು) ಗುಂಪು 'ಎ'

ಭಾರತೀಯ ಕಂದಾಯ ಸೇವೆ (ಆದಾಯ ತೆರಿಗೆ) ಗುಂಪು 'ಎ'

ಭಾರತೀಯ ವ್ಯಾಪಾರ ಸೇವೆ, ಗುಂಪು 'ಎ' (ಗ್ರೇಡ್ 3)

ಸಶಸ್ತ್ರ ಪಡೆಗಳ ಪ್ರಧಾನ ಕಚೇರಿ ನಾಗರಿಕ ಸೇವೆ, ಗುಂಪು 'ಬಿ' (ವಿಭಾಗ ಅಧಿಕಾರಿ ದರ್ಜೆ)

ದೆಹಲಿ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಲಕ್ಷದ್ವೀಪ, ದಮನ್ ಮತ್ತು ಡಿಯು, ದಾದ್ರಾ ಮತ್ತು ನಗರ ಹವೇಲಿ ನಾಗರಿಕ ಸೇವೆಗಳು (DANICS), ಗ್ರೂಪ್ 'ಬಿ'

ದೆಹಲಿ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಲಕ್ಷದ್ವೀಪ, ದಮನ್ ಮತ್ತು ಡಿಯು, ದಾದ್ರಾ ಮತ್ತು ನಗರ ಹವೇಲಿ ಪೊಲೀಸ್ ಸೇವೆ (DANIPS), ಗ್ರೂಪ್ 'ಬಿ'

ಪಾಂಡಿಚೇರಿ ನಾಗರಿಕ ಸೇವೆಗಳು (PDICS), ಗ್ರೂಪ್ 'ಬಿ'

ಪಾಂಡಿಚೇರಿ ಪೊಲೀಸ್ ಸೇವೆ (ಪಂಡಿತರು), ಗ್ರೂಪ್ 'ಬಿ'

ಮಂಗಳವಾರ, ಜನವರಿ 21, 2025

ಕೇಂದ್ರ ಸರ್ಕಾರ ನೌಕರರಿಗೆ 8ನೇ ವೇತನ ಆಯೋಗ

 ಕೇಂದ್ರ ಸರ್ಕಾರಿ ನೌಕರರ ಮೂಲ ವೇತನವು ತಿಂಗಳಿಗೆ 18,000 ರೂ.ನಿಂದ 51,480 ರೂ.ಗೆ ಏರಿಕೆಯಾಗುವ ನಿರೀಕ್ಷೆಯಿದೆ ಎಂದು ವರದಿಗಳು ಸೂಚಿಸುತ್ತವೆ. ಈ ಹೊಂದಾಣಿಕೆಗಳು ಯಾವಾಗ ಜಾರಿಗೆ ಬರುತ್ತವೆ ಎಂಬ ನಿರೀಕ್ಷೆ ಸರ್ಕಾರಿ ಸಿಬ್ಬಂದಿಯಲ್ಲಿ ಮೂಡುತ್ತಿದೆ.


ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅಶ್ವಿನಿ ವೈಷ್ಣವ್ ಅವರು 2025 ರಲ್ಲಿ 8 ನೇ ವೇತನ ಆಯೋಗದ ಸ್ಥಾಪನೆಯ ಬಗ್ಗೆ ಘೋಷಣೆ ಮಾಡಿದರು, 7 ನೇ ವೇತನ ಆಯೋಗದ ಅವಧಿ ಮುಗಿಯುವ ಮೊದಲು ಶಿಫಾರಸುಗಳನ್ನು ಜಾರಿಗೆ ತರಲು ಸಾಕಷ್ಟು ಸಮಯ ಲಭ್ಯವಿದೆ ಎಂದು ಒತ್ತಿ ಹೇಳಿದರು. ಈ ಕಾರ್ಯತಂತ್ರದ ಸಮಯವು ಜನವರಿ 1, 2026 ರಂದು ಜಾರಿಗೆ ಬರಲಿರುವ ಹೊಸ ವೇತನ ರಚನೆಗೆ ತಡೆರಹಿತ ಪರಿವರ್ತನೆಯನ್ನು ಖಚಿತಪಡಿಸುತ್ತದೆ. ಇದರರ್ಥ ಫೆಬ್ರವರಿ 2026 ರಿಂದ, ಕೇಂದ್ರ ಸರ್ಕಾರಿ ನೌಕರರು ಜನವರಿ 2026 ರ ವೇತನಕ್ಕೆ ಅನುಗುಣವಾಗಿ ತಮ್ಮ ವರ್ಧಿತ ವೇತನವನ್ನು ಪಡೆಯಲು ಎದುರುನೋಡಬಹುದು. ಹೆಚ್ಚುವರಿಯಾಗಿ, ಕೇಂದ್ರ ಸರ್ಕಾರದ ಪಿಂಚಣಿದಾರರು ತಮ್ಮ ಪಿಂಚಣಿಗಳ ಹೆಚ್ಚಳದಿಂದ ಜನವರಿ 2026 ರಿಂದ ಪ್ರಯೋಜನ ಪಡೆಯುತ್ತಾರೆ.


ಪ್ರಸ್ತುತ ಜಾರಿಯಲ್ಲಿರುವ 7 ನೇ ವೇತನ ಆಯೋಗವನ್ನು 2014 ರಲ್ಲಿ ಸ್ಥಾಪಿಸಲಾಯಿತು ಮತ್ತು ಅದರ ಶಿಫಾರಸುಗಳನ್ನು ಜನವರಿ 1, 2016 ರಿಂದ ಪ್ರಾಯೋಗಿಕವಾಗಿ ಜಾರಿಗೆ ತರಲಾಯಿತು. ಇದು ಹತ್ತು ವರ್ಷಗಳ ಚಕ್ರವನ್ನು ಅನುಸರಿಸಿ, 6 ನೇ ವೇತನ ಆಯೋಗದ ಅನುಷ್ಠಾನದಿಂದ ಮುಂದುವರೆಯಿತು, ಇದು ಪ್ರಾರಂಭವಾಯಿತು. ಜನವರಿ 1, 2006. ಹತ್ತು ವರ್ಷಗಳ ಮಧ್ಯಂತರದಲ್ಲಿ ವೇತನ ಆಯೋಗಗಳ ರಚನೆಯು ತನ್ನ ಉದ್ಯೋಗಿಗಳ ವೇತನ ರಚನೆಗಳನ್ನು ನಿಯತಕಾಲಿಕವಾಗಿ ಪರಿಶೀಲಿಸಲು ಮತ್ತು ನವೀಕರಿಸಲು ಕೇಂದ್ರ ಸರ್ಕಾರವು ಪ್ರಮಾಣಿತ ಅಭ್ಯಾಸವಾಗಿದೆ.


8ನೇ ವೇತನ ಆಯೋಗದ ಅಧ್ಯಕ್ಷರು ಮತ್ತು ಇತರ ಇಬ್ಬರು ಸದಸ್ಯರು ಸೇರಿದಂತೆ ಸದಸ್ಯರ ನೇಮಕಾತಿ ಬಾಕಿಯಿರುವುದರಿಂದ ಇನ್ನೂ ತನ್ನ ಕಾರ್ಯಗಳನ್ನು ಪ್ರಾರಂಭಿಸಿಲ್ಲ. ಈ ನೇಮಕಾತಿಗಳನ್ನು ಶೀಘ್ರದಲ್ಲೇ ಅಂತಿಮಗೊಳಿಸಲಾಗುವುದು ಎಂದು ಸಚಿವ ಅಶ್ವಿನಿ ವೈಷ್ಣವ್ ಇತ್ತೀಚೆಗೆ ಸೂಚಿಸಿದ್ದು, ಆಯೋಗವು ತನ್ನ ಕೆಲಸವನ್ನು ಪ್ರಾರಂಭಿಸಲು ವೇದಿಕೆಯನ್ನು ಸಿದ್ಧಪಡಿಸಿದೆ. ಆಯೋಗದ ಶಿಫಾರಸುಗಳು ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ವೇತನಗಳು ಮತ್ತು ಪಿಂಚಣಿಗಳ ಮೇಲೆ ನೇರವಾಗಿ ಪರಿಣಾಮ ಬೀರುತ್ತವೆ, ಇದು ಸರ್ಕಾರದ ಪರಿಹಾರ ನೀತಿಗಳಲ್ಲಿ ಗಮನಾರ್ಹ ಬೆಳವಣಿಗೆಯನ್ನು ಗುರುತಿಸುತ್ತದೆ.


ವೇತನ ಆಯೋಗವು ಶಿಫಾರಸು ಮಾಡಿರುವ ವೇತನ ಪರಿಷ್ಕರಣೆಯಿಂದ ತಮಗೂ ಪ್ರಯೋಜನವಾಗಲಿದೆಯೇ ಎಂದು ರಾಜ್ಯ ಸರ್ಕಾರಿ ನೌಕರರು ಆಗಾಗ್ಗೆ ಆಶ್ಚರ್ಯ ಪಡುತ್ತಾರೆ. ಕೇಂದ್ರ ಸರ್ಕಾರಿ ನೌಕರರಂತೆ, ರಾಜ್ಯ ನೌಕರರಿಗೆ ವೇತನ ಆಯೋಗದ ಶಿಫಾರಸುಗಳ ಅನುಷ್ಠಾನವು ಸ್ವಯಂಚಾಲಿತವಾಗಿಲ್ಲ. ಪ್ರತಿಯೊಂದು ರಾಜ್ಯ ಸರ್ಕಾರವು ಈ ಶಿಫಾರಸುಗಳನ್ನು ಅಳವಡಿಸಿಕೊಳ್ಳುವ ವಿವೇಚನೆಯನ್ನು ಹೊಂದಿದೆ, ಮತ್ತು ಕೆಲವು ರಾಜ್ಯಗಳು ಅವುಗಳನ್ನು ಒದಗಿಸಿದಂತೆ ಕಾರ್ಯಗತಗೊಳಿಸಲು ಆಯ್ಕೆ ಮಾಡಬಹುದು, ಇತರರು ಮಾರ್ಪಾಡುಗಳನ್ನು ಪರಿಚಯಿಸಬಹುದು ಅಥವಾ ಅನುಷ್ಠಾನವನ್ನು ವಿಳಂಬಗೊಳಿಸಬಹುದು. 7 ನೇ ವೇತನ ಆಯೋಗದ ನಂತರ, ಮಹಾರಾಷ್ಟ್ರ ಮತ್ತು ತಮಿಳುನಾಡಿನಂತಹ ರಾಜ್ಯಗಳು ಕೆಲವು ಬದಲಾವಣೆಗಳೊಂದಿಗೆ ಶಿಫಾರಸುಗಳನ್ನು ಅಳವಡಿಸಿಕೊಂಡವು, ರಾಜ್ಯಗಳಾದ್ಯಂತ ವಿಭಿನ್ನ ವಿಧಾನವನ್ನು ಪ್ರದರ್ಶಿಸುತ್ತವೆ. ಆದಾಗ್ಯೂ, ಹೆಚ್ಚಿನ ರಾಜ್ಯಗಳು ಅಂತಿಮವಾಗಿ ಕೇಂದ್ರ ಸರ್ಕಾರದ ವೇತನ ಆಯೋಗದ ಶಿಫಾರಸುಗಳೊಂದಿಗೆ ಹೊಂದಿಕೆಯಾಗುತ್ತವೆ ಎಂದು ಇತಿಹಾಸವು ಸೂಚಿಸುತ್ತದೆ.


8ನೇ ವೇತನ ಆಯೋಗದ ಅಡಿಯಲ್ಲಿ ನಿರೀಕ್ಷಿತ ವೇತನ ಹೆಚ್ಚಳ ಗಣನೀಯವಾಗಿದೆ. 7 ನೇ ವೇತನ ಆಯೋಗದ ಅಡಿಯಲ್ಲಿ, ಪ್ರಸ್ತುತ ವೇತನವನ್ನು ಆಧರಿಸಿ ಹೊಸ ಮೂಲ ವೇತನವನ್ನು ಲೆಕ್ಕಾಚಾರ ಮಾಡಲು ಗುಣಕವಾದ ಫಿಟ್‌ಮೆಂಟ್ ಅಂಶವನ್ನು 2.57 ಕ್ಕೆ ನಿಗದಿಪಡಿಸಲಾಗಿದೆ. ಈ ಹೊಂದಾಣಿಕೆಯು ಕನಿಷ್ಠ ಮೂಲ ವೇತನವನ್ನು 7,000 ರೂ.ಗಳಿಂದ 18,000 ರೂ. 8 ನೇ ವೇತನ ಆಯೋಗದೊಂದಿಗೆ, ಫಿಟ್‌ಮೆಂಟ್ ಅಂಶವು 2.86 ಕ್ಕೆ ಹೆಚ್ಚಾಗುತ್ತದೆ ಎಂದು ನಿರೀಕ್ಷಿಸಲಾಗಿದೆ. ಈ ಹೊಂದಾಣಿಕೆಯು ಕನಿಷ್ಟ ಮೂಲ ವೇತನವನ್ನು ರೂ. 51,480 ಕ್ಕೆ ಏರಿಸಲು ಯೋಜಿಸಲಾಗಿದೆ, ಇದು ಪ್ರಸ್ತುತ ಮೂಲ ವೇತನ ರೂ 18,000 ದಿಂದ ಪ್ರಭಾವಶಾಲಿ 186 ಪ್ರತಿಶತ ಹೆಚ್ಚಳವನ್ನು ಸೂಚಿಸುತ್ತದೆ.


ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರ ಹೇಳಿಕೆಯು 8ನೇ ವೇತನ ಆಯೋಗದ ಶಿಫಾರಸುಗಳನ್ನು ಸಮಯೋಚಿತವಾಗಿ ಜಾರಿಗೊಳಿಸುವುದನ್ನು ಖಾತ್ರಿಪಡಿಸುವ ಸರ್ಕಾರದ ಬದ್ಧತೆಯನ್ನು ಒತ್ತಿಹೇಳುತ್ತದೆ, ಇದು ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಸಮಾನವಾಗಿ ಪ್ರಯೋಜನಕಾರಿಯಾಗಿದೆ. "2025 ರಲ್ಲಿ 8 ನೇ ವೇತನ ಆಯೋಗದ ಸ್ಥಾಪನೆಯು 7 ನೇ ವೇತನ ಆಯೋಗದ ಅವಧಿ ಮುಗಿಯುವ ಮೊದಲು ಶಿಫಾರಸುಗಳನ್ನು ಜಾರಿಗೆ ತರಲು ಸಾಕಷ್ಟು ಸಮಯವನ್ನು ಖಚಿತಪಡಿಸುತ್ತದೆ."


ಕೊನೆಯಲ್ಲಿ, 8 ನೇ ವೇತನ ಆಯೋಗದ ಸ್ಥಾಪನೆಯು ಕೇಂದ್ರ ಸರ್ಕಾರಿ ನೌಕರರಿಗೆ ಗಮನಾರ್ಹವಾದ ವೇತನ ಪರಿಷ್ಕರಣೆಯನ್ನು ಸೂಚಿಸುತ್ತದೆ, ಹೆಚ್ಚಳದ ಮೊತ್ತ ಮತ್ತು ಅನುಷ್ಠಾನದ ಸಮಯಾವಧಿಗೆ ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿಸಲಾಗಿದೆ. 2025 ರಲ್ಲಿ ಆಯೋಗದ ರಚನೆಯು, 7 ನೇ ವೇತನ ಆಯೋಗದ ಅಧಿಕಾರಾವಧಿಯ ತೀರ್ಮಾನಕ್ಕೆ ಮುಂಚಿತವಾಗಿ, ಹೊಸ ವೇತನ ರಚನೆಗೆ ಸುಗಮ ಪರಿವರ್ತನೆಯನ್ನು ಖಾತ್ರಿಪಡಿಸುವ ಕಾರ್ಯತಂತ್ರದ ವಿಧಾನವನ್ನು ಪ್ರತಿಬಿಂಬಿಸುತ್ತದೆ. ನೇಮಕಾತಿಗಳು ಅಂತಿಮಗೊಂಡಂತೆ ಮತ್ತು ಆಯೋಗವು ತನ್ನ ಕೆಲಸವನ್ನು ಪ್ರಾರಂಭಿಸಿದಾಗ, ಭಾರತದಾದ್ಯಂತ ಸರ್ಕಾರಿ ನೌಕರರು ತಮ್ಮ ಪರಿಹಾರದ ಧನಾತ್ಮಕ ಬದಲಾವಣೆಗಳನ್ನು ಕುತೂಹಲದಿಂದ ಕಾಯುತ್ತಿದ್ದಾರೆ.

ಶನಿವಾರ, ಜನವರಿ 18, 2025

ಗಳಿಕೆ ರಜೆ ಅಧ್ಯರ್ಪಿಸಿ ನಗದೀಕರಣ ಪಡೆಯಲು ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಯ ನಿಯಮ 118(2)(i) ರನ್ವಯ ಅವಕಾಶ ಕಲ್ಪಿಸಲಾಗಿತ್ತು.

 

ಈ ಸಂಬಂಧ ಆರ್ಥಿಕ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದ್ದು, 2024 ನೇ ಸಾಲಿನ ಬ್ಲಾಕ್ ಅವಧಿಗೆ ಸರ್ಕಾರಿ ಅಧಿಕಾರಿ/ನೌಕರರು ಹಾಗೂ ಸರ್ಕಾರದಿಂದ ಸಹಾಯಾನುದಾನ/ಅನುದಾನ ಪಡೆಯುವ ಅಥವಾ ಪಡೆಯದಿರುವ ಕರ್ನಾಟಕ ಸರ್ಕಾರದ ಎಲ್ಲಾ ಸಂಸ್ಥೆಗಳ/ಉದ್ಯಮಗಳ ನೌಕರರಿಗೂ ಸಂಬಂಧಿತ ಸಂಸ್ಥೆ/ಉದ್ಯಮಗಳ ಆರ್ಥಿಕ ಸ್ಥಿತಿಗತಿಗಳಿಗೊಳಪಟ್ಟು ಗಳಿಕೆ ರಜೆ ಅಧ್ಯರ್ಪಿಸಿ ನಗದೀಕರಣ ಪಡೆಯಲು ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಯ ನಿಯಮ 118(2)(i) ರನ್ವಯ ಅವಕಾಶ ಕಲ್ಪಿಸಲಾಗಿತ್ತು.


ಸದರಿ ಬ್ಲಾಕ್ ಅವಧಿಯು ದಿನಾಂಕ:31/12/2024 ರಂದು ಮುಕ್ತಾಯಗೊಳ್ಳುವ ಹಿನ್ನೆಲೆಯಲ್ಲಿ ಸರ್ಕಾರವು 2025 ನೇ ಸಾಲಿನ ಬ್ಲಾಕ್ ಅವಧಿಯಲ್ಲಿ 15 ದಿನ ಗಳಿಕೆ ರಜೆಯನ್ನು ಅಧ್ಯರ್ಪಿಸಿ ರಜೆ ವೇತನಕ್ಕೆ ಸಮಾನವಾಗಿ ಸರ್ಕಾರಿ ಅವಕಾಶವನ್ನು
ನಗದೀಕರಣ ಪಡೆಯುವ ನೌಕರರಿಗೆ ಹಾಗೂ ಸರ್ಕಾರದಿಂದ ಸಹಾಯಾನುದಾನ/ಅನುದಾನ ಪಡೆಯುವ ಅಥವಾ ಪಡೆಯದಿರುವ ಕರ್ನಾಟಕ ಸರ್ಕಾರದ ಅಧೀನದ ಎಲ್ಲಾ ಸಂಸ್ಥೆಗಳ/ಉದ್ಯಮಗಳ ನೌಕರರಿಗೂ ಸಂಬಂಧಿಸಿದ ಸಂಸ್ಥೆ/ಉದ್ಯಮಗಳ ಆರ್ಥಿಕ ಸ್ಥಿತಿಗೊಳಪಟ್ಟು ನಿಯತಗೊಳಿಸಲು ಅವಕಾಶವನ್ನು ಕಲ್ಪಿಸಲು ತೀರ್ಮಾನಿಸಿದೆ ಎಂದಿದ್ದಾರೆ.

2025 ನೇ ಸಾಲಿನ ಬ್ಲಾಕ್ ಅವಧಿಗೆ ಎಲ್ಲಾ ವೃಂದದ ರಾಜ್ಯ ಸರ್ಕಾರಿ ಅಧಿಕಾರಿ/ನೌಕರರಿಗೆ ಹಾಗೂ ಸರ್ಕಾರದಿಂದ ಸಹಾಯಾನುದಾನ/ಅನುದಾನ ಪಡೆಯುವ ಅಥವಾ ಪಡೆಯದಿರುವ ಕರ್ನಾಟಕ ಸರ್ಕಾರದ ನೌಕರರಿಗೂ ಸಂಬಂಧಿತ ಸಂಸ್ಥೆ/ಉದ್ಯಮಗಳ ಆರ್ಥಿಕ ಸಂಸ್ಥೆಗಳ/ಉದ್ಯಮಗಳ ಎಲ್ಲಾ ಸ್ಥಿತಿಗತಿಗಳಿಗೊಳಪಟ್ಟು ಗರಿಷ್ಟ 15 ದಿನಗಳಿಗೆ ಮೀರದಂತೆ ಗಳಿಕೆ ರಜೆಯನ್ನು ಅಧ್ಯರ್ಪಿಸಿ ರಜಾ ವೇತನಕ್ಕೆ ಸಮನಾದ ನಗದೀಕರಣ ಸೌಲಭ್ಯವನ್ನು ಜಾರಿಗೊಳಿಸಿ ಆದೇಶಿಸಿದ್ದಾರೆ.

ಈ ಸೌಲಭ್ಯವು ದಿನಾಂಕ:1/1/2025 ರಿಂದ 31/12/2025 ರ ವರೆಗೆ ಜಾರಿಯಲ್ಲಿರುತ್ತದೆ. ಈ ಸೌಲಭ್ಯವನ್ನು ಎಲ್ಲಾ ವೃಂದದ ಅರ್ಹ ಸರ್ಕಾರಿ ಅಧಿಕಾರಿ/ನೌಕರರು ಒಂದು ತಿಂಗಳ ಮುಂಚಿತವಾಗಿ ಮನವಿ ನೀಡಿ ಅವರ ಇಚ್ಛೆಯ ಯಾವುದೇ ತಿಂಗಳಿನಲ್ಲಿ ಗಳಿಕೆ ರಜೆ ನಗದೀಕರಣ ಸೌಲಭ್ಯ ಪಡೆಯಬಹುದಾಗಿದೆ ಎಂದಿದ್ದಾರೆ.

ಗೆಜೆಟೆಡ್ ಅಧಿಕಾರಿಗಳ ಸಂಬಂಧದಲ್ಲಿ 2025 ನೇ ಸಾಲಿನ ಗಳಿಕೆ ರಜೆ ನಗದೀಕರಣ ಸೌಲಭ್ಯ ಮಂಜೂರಾತಿ ಉದ್ದೇಶಕ್ಕಾಗಿ ಮಾತ್ರ ಹೆಚ್‌ಆರ್‌ಎಂಎಸ್‌ನಲ್ಲಿ ಲಭ್ಯವಿರುವಂತೆ ಅಧಿಕಾರಿಗಳ ಗಳಿಕೆ ರಜೆ ಲೆಕ್ಕಾಚಾರದ ಆಧಾರದ ಮೇಲೆ ನಗದೀಕರಣವನ್ನು ಮಂಜೂರು ಮಾಡಲು ಸಕ್ಷಮ ರಜೆ ಮಂಜೂರಾತಿ ಪ್ರಾಧಿಕಾರಿಗಳು ಕ್ರಮವಹಿಸತಕ್ಕದ್ದು ಮತ್ತು ಮಹಾಲೇಖಪಾಲರು ಲೆಕ್ಕಾಚಾರದ ಬಗ್ಗೆ ಯಾವುದೇ ವ್ಯತ್ಯಾಸವನ್ನು ತಿಳಿಸಿದಲ್ಲಿ ಅದನ್ನು ಸರಿಪಡಿಸುವ ಮತ್ತು ಅದರನ್ವಯದ ಆರ್ಥಿಕ ಸೌಲಭ್ಯಗಳಿಗೆ ಮಾತ್ರ ಅರ್ಹವಾಗುವ ಷರತ್ತಿಗೊಳಪಡಿಸಿ ಮಂಜೂರು ಮಾಡತಕ್ಕದ್ದು ಎಂದಿದ್ದಾರೆ.

ಮುಂದುವರೆದು ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಯ ನಿಯಮ 118 ರಲ್ಲಿ ನಿಗದಿಪಡಿಸಿರುವ ಗಳಿಕೆ ರಜೆ ನಗದೀಕರಣ ನಿಯಂತ್ರಣಕ್ಕೆ ಸಂಬಂಧಿಸಿದ ಇತರ ಷರತ್ತುಗಳು ಅನ್ವಯವಾಗುತ್ತವೆ ಎಂಬುದಾಗಿ ತಿಳಿಸಿದ್ದಾರೆ.

 

 


ಶುಕ್ರವಾರ, ಜನವರಿ 17, 2025

8ನೇ ವೇತನ ಆಯೋಗ: ಹಂತ ಹಂತದ ಮಾರ್ಗದರ್ಶಿ

 ಸಂಬಳಗಳನ್ನು ಸರಿಹೊಂದಿಸುವ ನಿಟ್ಟಿನಲ್ಲಿ ಫಿಟ್‌ಮೆಟ್‌ ಅಂಶವೇ ಪ್ರಮುಖವಾಗಿದೆ ಎಂದು ವರದಿ ತಿಳಿಸಿದೆ.


8ನೇ ವೇತನ ಆಯೋಗ: ಹಂತ ಹಂತದ ಮಾರ್ಗದರ್ಶಿ 


ಈ ವೇತನ ಹೆಚ್ಚಳವನ್ನು ಲೆಕ್ಕಾಚಾರ ಮಾಡುವ ಪ್ರಕ್ರಿಯೆಯನ್ನು ಸರಳ ರೀತಿಯಲ್ಲಿ ವಿಭಜಿಸೋಣ:


ಹಂತ 1: ಫಿಟ್‌ಮೆಂಟ್ ಫ್ಯಾಕ್ಟರ್ ಅನ್ನು ಅರ್ಥಮಾಡಿಕೊಳ್ಳುವುದು


8ನೇ ವೇತನ ಆಯೋಗದ ಅಡಿಯಲ್ಲಿ ಅವರ ಹೊಸ ಮೂಲ ವೇತನವನ್ನು ಪಡೆಯಲು 7ನೇ ವೇತನ ಆಯೋಗದ ಅಡಿಯಲ್ಲಿ ಉದ್ಯೋಗಿಯ ಪ್ರಸ್ತುತ ಮೂಲ ವೇತನವನ್ನು ಗುಣಿಸಲು ಫಿಟ್‌ಮೆಂಟ್ ಅಂಶವನ್ನು ಬಳಸಲಾಗುವ ಒಂದು ಸಂಖ್ಯೆ.


ಉದಾಹರಣೆಗೆ, 8ನೇ ವೇತನ ಆಯೋಗಕ್ಕೆ ಪ್ರಸ್ತಾಪಿಸಲಾದ ಫಿಟ್‌ಮೆಂಟ್ ಅಂಶವು 2.28 ಆಗಿದೆ. ಇದರರ್ಥ ನೌಕರರ ಹೊಸ ವೇತನವನ್ನು ಲೆಕ್ಕಹಾಕಲು ಅವರ ಸಂಬಳವನ್ನು 2.28 ರಿಂದ ಗುಣಿಸಲಾಗುತ್ತದೆ.


ಹಂತ 2: ಲೆಕ್ಕಾಚಾರ ಪ್ರಕ್ರಿಯೆ

ಹೊಸ ಸಂಬಳವನ್ನು ಲೆಕ್ಕಾಚಾರ ಮಾಡಲು, ಉದ್ಯೋಗಿಯ ಪ್ರಸ್ತುತ ಸಂಬಳವನ್ನು ಫಿಟ್‌ಮೆಂಟ್ ಅಂಶದಿಂದ ಗುಣಿಸಿ.


ಸೂತ್ರ:


ಹೊಸ ಸಂಬಳ = ಪ್ರಸ್ತುತ ಸಂಬಳ x ಫಿಟ್‌ಮೆಂಟ್ ಅಂಶ


ಇದು ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಒಂದು ಉದಾಹರಣೆಯನ್ನು ನೋಡೋಣ:


ಉದಾಹರಣೆ 1: ಎ ಲೆವೆಲ್ 1 ಉದ್ಯೋಗಿ 


ಪ್ರಸ್ತುತ ಸಂಬಳ (7ನೇ ವೇತನ ಆಯೋಗ): ₹18,000 


ಫಿಟ್‌ಮೆಂಟ್ ಅಂಶ: 2.28


ಲೆಕ್ಕಾಚಾರ

ಹೊಸ ವೇತನ= 18,000 x 2.28 


ಹೊಸ ಸಂಬಳ = ₹40,944


ಇದರ ಪ್ರಕಾರ, 8 ನೇ ವೇತನ ಆಯೋಗದ ಅಡಿಯಲ್ಲಿ, ಈ ಉದ್ಯೋಗಿಯ ವೇತನವು ಸುಮಾರು ₹41,000 ಕ್ಕೆ ಹೆಚ್ಚಾಗುತ್ತದೆ (ಹತ್ತಿರದ ನೂರಕ್ಕೆ ಪೂರ್ಣಾಂಕ ನೀಡಲಾಗುತ್ತದೆ)


ಉದಾಹರಣೆ 2: ಲೆವೆಲ್ 2 ಉದ್ಯೋಗಿ

ಪ್ರಸ್ತುತ ಸಂಬಳ (7ನೇ ವೇತನ ಆಯೋಗ): ₹19,900 

ಫಿಟ್‌ಮೆಂಟ್ ಅಂಶ: 2.28 


ಲೆಕ್ಕಾಚಾರ: 

ಹೊಸ ಸಂಬಳ = ₹19,900 x 2.28 

ಹೊಸ ಸಂಬಳ = ₹45,372 


ಇದರ ಆಧಾರದ ಮೇಲೆ ಲೆವೆಲ್ 2 ಉದ್ಯೋಗಿಯ ಸಂಬಳ ₹45,400 (ಹತ್ತಿರದ ನೂರಕ್ಕೆ ಪೂರ್ಣಾಂಕ ನೀಡಲಾಗುತ್ತದೆ) ಕ್ಕೆ ಹೆಚ್ಚಾಗುತ್ತದೆ.


ಹಂತ 3: ತುಟ್ಟಿಭತ್ಯೆಯಲ್ಲಿ (DA) ಬದಲಾಗುವ ಅಂಶ


ತುಟ್ಟಿಭತ್ಯೆ (DA) ಹಣದುಬ್ಬರದ ಪರಿಣಾಮವನ್ನು ಸರಿದೂಗಿಸಲು ಉದ್ಯೋಗಿಗಳಿಗೆ ಒದಗಿಸಲಾಗುವ ಹೆಚ್ಚುವರಿ ಮೊತ್ತವಾಗಿದೆ. ತುಟ್ಟಿಭತ್ಯೆಯನ್ನು ಮೂಲ ವೇತನಕ್ಕೆ ಸೇರಿಸಲಾಗುತ್ತದೆ ಮತ್ತು 8 ನೇ ವೇತನ ಆಯೋಗದ ಅಡಿಯಲ್ಲಿ ಹೊಸ ವೇತನ ರಚನೆಯಲ್ಲಿಯೂ ಸೇರಿಸಲಾಗುತ್ತದೆ.


ಈ ಸಂದರ್ಭದಲ್ಲಿ, 2026 ರ ವೇಳೆಗೆ ತುಟ್ಟಿಭತ್ಯೆ 70% ತಲುಪುವ ನಿರೀಕ್ಷೆಯಿದೆ. ಆದ್ದರಿಂದ, ಹೊಸ ಮೂಲ ವೇತನಕ್ಕೆ ತುಟ್ಟಿಭತ್ಯೆಯನ್ನು ಕೂಡ ಸೇರಿಸಲಾಗುತ್ತದೆ.


ಉದಾಹರಣೆ 3: ಡಿಎ ಸೇರಿದಂತೆ


1 ನೇ ಹಂತದ ಉದ್ಯೋಗಿಯ ಹೊಸ ಮೂಲ ವೇತನ ₹40,944 ರ ಉದಾಹರಣೆಯನ್ನು ತೆಗೆದುಕೊಳ್ಳೋಣ.


ಹೊಸ ಮೂಲ ವೇತನ: ₹40,944 ನಿರೀಕ್ಷಿತ ಡಿಎ (70%): ₹40,944 ರಲ್ಲಿ 70% = ₹28,660.80


ಒಟ್ಟು ಸಂಬಳ (ಮೂಲ + ಡಿಎ) = ₹40,944 + ₹28,660.80 = ₹69,604.80


ಆದ್ದರಿಂದ, ಈ ಉದ್ಯೋಗಿಯ ಒಟ್ಟು ವೇತನ ₹69,600 (ಹತ್ತಿರದ ನೂರಕ್ಕೆ ಪೂರ್ಣಾಂಕ ನೀಡಲಾಗುತ್ತದೆ) ಆಗಿರುತ್ತದೆ.


ಹಂತ 4: ಪೇ ಮ್ಯಾಟ್ರಿಕ್ಸ್ ಅನ್ನು ಬಳಸಿಕೊಳ್ಳೋದು ಹೇಗೆ?


ಪೇ ಮ್ಯಾಟ್ರಿಕ್ಸ್ ಎನ್ನುವುದು 8 ನೇ ವೇತನ ಆಯೋಗದಲ್ಲಿ ಪ್ರತಿ ಹಂತಕ್ಕೂ ವೇತನವನ್ನು ಫಿಟ್‌ಮೆಂಟ್ ಅಂಶದ ಆಧಾರದ ಮೇಲೆ ತೋರಿಸುವ ಕೋಷ್ಟಕವಾಗಿದೆ. ಇದು ಲೆಕ್ಕಾಚಾರ ಪ್ರಕ್ರಿಯೆಯನ್ನು ಸರಳಗೊಳಿಸುತ್ತದೆ, ಏಕೆಂದರೆ ಪ್ರತಿ ಹಂತಕ್ಕೂ ಹೊಸ ವೇತನವನ್ನು ಈಗಾಗಲೇ ಪೇ ಮ್ಯಾಟ್ರಿಕ್ಸ್‌ನಲ್ಲಿ ಮೊದಲೇ ಲೆಕ್ಕಹಾಕಲಾಗಿರುತ್ತದೆ.


ಉದಾಹರಣೆಗೆ, ಲೆವೆಲ್ 1 ಉದ್ಯೋಗಿಯ ವೇತನವು ₹18,000 ರಿಂದ ₹21,600 ಕ್ಕೆ ಹೋಗುತ್ತದೆ, ಆದರೆ ಲೆವೆಲ್ 13 ಉದ್ಯೋಗಿಯ ವೇತನವು ₹1,23,100 ರಿಂದ ₹1,47,720 ಕ್ಕೆ ಹೋಗುತ್ತದೆ.


ಸಂಬಳ ಲೆಕ್ಕಾಚಾರದ ಸಾರಾಂಶ: 8ನೇ ವೇತನ ಆಯೋಗ


* ಹೊಸ ಮೂಲ ವೇತನವನ್ನು ಲೆಕ್ಕಹಾಕಲು ಪ್ರಸ್ತುತ ವೇತನವನ್ನು ಫಿಟ್‌ಮೆಂಟ್ ಅಂಶದಿಂದ (2.28) ಗುಣಿಸಿ.


*ಒಟ್ಟು ವೇತನಕ್ಕಾಗಿ ಹೊಸ ಮೂಲ ವೇತನಕ್ಕೆ 70% ತಲುಪುವ ನಿರೀಕ್ಷೆಯಿರುವ ತುಟ್ಟಿ ಭತ್ಯೆ (DA) ಅನ್ನು ಸೇರಿಸಿ.


*ನಿಮ್ಮ ಹುದ್ದೆಗೆ ನಿಖರವಾದ ವೇತನವನ್ನು ನೋಡಲು ಪ್ರತಿ ಹಂತಕ್ಕೂ ಪೇ ಮ್ಯಾಟ್ರಿಕ್ಸ್ ಅನ್ನು ಗಮನಿಸಿ.


Breaking: ಉದ್ಯೋಗಿಗಳಿಗೆ ಬಂಪರ್‌; 8ನೇ ವೇತನ ಆಯೋಗಕ್ಕೆ ಕೇಂದ್ರ ಒಪ್ಪಿಗೆ, ಇವರಿಗೆ 2026ರಿಂದ ವೇತನ ಹೆಚ್ಚಳ!


ಪ್ರಕ್ರಿಯೆಯನ್ನು ಅನುಸರಿಸುವುದರಿಂದ, ಸರ್ಕಾರಿ ನೌಕರರು 2026 ಜನವರಿ 1 ರಿಂದ ತಮ್ಮ ಸಂಬಳದಲ್ಲಿ ಗಮನಾರ್ಹ ಹೆಚ್ಚಳವನ್ನು ಕಾಣಲಿದ್ದಾರೆ, ಕನಿಷ್ಠ ವೇತನ ₹18,000 ರಿಂದ ₹41,000 ಕ್ಕೆ ಏರಿಕೆಯಾಗಲಿದೆ.


EPFO ಕನಿಷ್ಠ ಪಿಂಚಣಿ 1 ಸಾವಿರದಿಂದ 5 ಸಾವಿರಕ್ಕೆ ಏರಿಕೆ? 


ತೀರ್ಮಾನ: ಫಿಟ್‌ಮೆಂಟ್ ಫ್ಯಾಕ್ಟರ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ನೀವು ಅರ್ಥಮಾಡಿಕೊಂಡ ನಂತರ 8 ನೇ ವೇತನ ಆಯೋಗದ ಅಡಿಯಲ್ಲಿ ಸಂಬಳದ ಲೆಕ್ಕಾಚಾರವು ತುಂಬಾ ಸರಳವಾಗಿದೆ. ಪ್ರಸ್ತುತ ಸಂಬಳವನ್ನು 2.28 ರಿಂದ ಗುಣಿಸಿ ಮತ್ತು ತುಟ್ಟಿ ಭತ್ಯೆಯನ್ನು ಅಪವರ್ತಿಸುವ ಮೂಲಕ, ನೌಕರರು ತಮ್ಮ ಗಳಿಕೆಯಲ್ಲಿ ಗಮನಾರ್ಹ ಹೆಚ್ಚಳವನ್ನು ನೋಡುತ್ತಾರೆ, ಹಣದುಬ್ಬರ ಮತ್ತು ಜೀವನ ವೆಚ್ಚಗಳು ಹೆಚ್ಚುತ್ತಲೇ ಇರುವುದರಿಂದ ಅವರ ಆರ್ಥಿಕ ಯೋಗಕ್ಷೇಮವನ್ನು ಸುಧಾರಿಸುತ್ತಾರೆ.

ಪ್ರೊಮೋಷನರಿ ನೌಕರರಿಗೂ ಗಳಿಕೆ ರಜೆ

 ಪ್ರೊಮೋಷನರಿ ನೌಕರರಿಗೂ ಗಳಿಕೆ ರಜೆ

ನಾನು ಅನುಕಂಪದ ಮೇರೆಗೆ ನೇಮಕವಾಗಿ 2023ರ ಜನೆವರಿ ಮೂರರಂದು ಕರ್ತವ್ಯಕ್ಕೆ ಹಾಜರಾಗಿದ್ದೇನೆ ನನ್ನ ರಜೆ ಖಾತೆಯಲ್ಲಿ 30 ದಿನಗಳ ಕಲಿಕೆ ರಜೆ ಇದ್ದು. 2024ರ ನವಂಬರ್ ನಲ್ಲಿ 15 ದಿನಗಳ ಗಳಿಕೆ ರಜೆ ನಗದಿಕರಣಕ್ಕೆ ಅರ್ಜಿ ಸಲ್ಲಿಸಿದ್ದೇನೆ. ಆದರೆ ನಮ್ಮ ವೇತನ ಅಧಿಕಾರಿಗಳು ನಿಮಗೆ ಖಾಯಂ ಪೂರ್ವ ಅವಧಿ (ಪ್ರೊಫೆಷನಲ್) ಘೋಷಣೆಯಾಗುವವರೆಗೆ ರಜೆ ನಿಗದಿಕರಣ ಮಂಜೂರಿಗೆ ಅವಕಾಶವಿಲ್ಲ ಎಂದು ಮೌಕಿಕವಾಗಿ ತಿಳಿಸಿದ್ದಾರೆ ಇದು ಸರಿಯೇ?


ಕರ್ನಾಟಕ ಸರ್ಕಾರಿ ಸೇವಾ ನಿಯಮಗಳ ನಿಯಮ 145 ರಂತೆ ಪಕ್ಷಾರ್ಥಿ ಸರ್ಕಾರಿ ನೌಕರನ್ನು ಹಂಗಾಮಿ ನೌಕರನಾಗಿದ್ದು ಎಲ್ಲಾ ಬಗೆಯ ರಜೆ ಸೌಲಭ್ಯಗಳಿಗೂ ಬರನಾಗಿರುತ್ತಾನೆ. ಗಳಿಕೆ ರಜೆ ನೆಗಡಿ ಕನ್ನಡ ಕೋ ಮತ್ತು ಪರೀಕ್ಷಾರ್ಥಿ ಅವಧಿ ಘೋಷಣೆಗೂ ಯಾವುದೇ ಸಂಬಂಧವಿಲ್ಲ. ನಿಮ್ಮ 118 ರಂತೆ ಗಳಿಕೆ ರಜೆ ನಗರೀಕರಣ ಮಂಜೂರಿಗೆ ಪುನಃ ಮನವಿಯನ್ನು ನಿಮ್ಮ ವೇತನ ಅಧಿಕಾರಿಗಳಿಗೆ ಸಲ್ಲಿಸಿ. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಆರ್ಥಿಕ ಸೌಲಭ್ಯಗಳ ಕೈಪಿಡಿ ಪುಸ್ತಕ ನೋಡಬಹುದು. 

Email.raghavendra13532@gmail.com

ಬುಧವಾರ, ಜನವರಿ 8, 2025

ರಕ್ಷಣಾ ಸಚಿವಾಲಯದಲ್ಲಿ ಉದ್ಯೋಗಾವಕಾಶ; 113 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಈ ಪೋಸ್ಟ್‌ಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 6 ಫೆಬ್ರವರಿ ಆಗಿದೆ. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಳು ಈ ಕೆಳಗಿನಂತಿವೆ.

ಅಕೌಂಟೆಂಟ್‌, ಸ್ಟೆನೋಗ್ರಾಫರ್‌ ಗ್ರೇಡ್‌-I, ಲೋಬರ್‌ ಡಿವಿಷನ್‌ ಕ್ಲರ್ಕ್‌ ಸೇರಿದಂತೆ ಒಟ್ಟು 113 ಹುದ್ದೆಗಳು ಖಾಲಿ ಇದ್ದು, ಈ ನೇಮಕಾತಿ ಗೆ ಸಂಬಂಧಿಸಿದ ಇತರ ಪ್ರಮುಖ ಮಾಹಿತಿಗಳಾದ ಅರ್ಜಿ ಪ್ರಕ್ರಿಯೆ,ವಿದ್ಯಾರ್ಹತೆ, ವೇತನಗಳು, ಆಯ್ಕೆ ವಿಧಾನ ಇತ್ಯಾದಿಗಳ ಮಾಹಿತಿ ಈ ಕೆಳಗಿನಂತಿವೆ.

ವಿದ್ಯಾರ್ಹತೆ

ಅಧಿಸೂಚನೆಯ ಪ್ರಕಾರ 10ನೇ ತರಗತಿ, ದ್ವಿತೀಯ ಪಿಯುಸಿ ತೇರ್ಗಡೆಯಾದವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

ವಯೋಮಿತಿ

ವಿವಿಧ ಹುದ್ದೆಗಳಿಗೆ ಅನುಗುಣವಾಗಿ 18ರಿಂದ 30 ವರ್ಷದೊಳಗಿನವರು ಅರ್ಜಿ ಸಲ್ಲಿಸಬಹುದು. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಪಿಎಚ್‌ ಅಭ್ಯರ್ಥಿಗಳಿಗೆ 10 ವರ್ಷಗಳ ರಿಯಾಯಿತಿ ಇದೆ.

ಅರ್ಜಿ ಶುಲ್ಕ

ಯಾವುದೇ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಪಾವತಿಸಬೇಕಾಗಿಲ್ಲ.

ಆಯ್ಕೆ ವಿಧಾನ

ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ.

ವೇತನ

ಅಧಿಸೂಚನೆಯ ಪ್ರಕಾರ ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗಳಿಗೆ ಅನುಗುಣವಾಗಿ 18,000 ರೂ. - 92,300 ರೂ. ಮಾಸಿಕ ವೇತನ ನಿಗದಿ ಮಾಡಲಾಗಿದೆ.

ಅರ್ಜಿ ಸಲ್ಲಿಸುವ ವಿಧಾನ

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ (https://mod.gov.in/)
ಹೆಸರು ನೋಂದಾಯಿಸಿ.
ಎಚ್ಚರಿಕೆಯಿಂದ ಅಪ್ಲಿಕೇಷನ್‌ ಫಾರಂ ಭರ್ತಿ ಮಾಡಿ.
ಅಗತ್ಯ ಡಾಕ್ಯುಮೆಂಟ್‌, ಸರಿಯಾದ ಅಳತೆಯಲ್ಲಿ ಫೋಟೊ ಅಪ್‌ಲೋಡ್‌ ಮಾಡಿ.
ಭರ್ತಿ ಮಾಡಿದ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ ಎಲ್ಲವೂ ಸರಿ ಇದ್ದರೆ Submit ಬಟನ್‌ ಕ್ಲಿಕ್‌ ಮಾಡಿ.
ಭವಿಷ್ಯದ ಅಗತ್ಯಗಳಿಗಾಗಿ ಅಪ್ಲಿಕೇಷನ್‌ ಫಾರಂ ಡೌನ್‌ಲೋಡ್‌ ಮಾಡಿಟ್ಟುಕೊಳ್ಳಿ.
ಅರೋಗ್ಯ & ಜೀವನ ಶೈಲಿ

ಮಂಗಳವಾರ, ಜನವರಿ 7, 2025

ಮಾಹಿತಿಗಾಗಿ

*ಮಾಹಿತಿಗಾಗಿ*

*ಈ ವರ್ಷದ ತೆರಿಗೆ ( ಟ್ಯಾಕ್ಸ್) ವಿಚಾರವಾಗಿ ನೀವು ತಿಳಿದುಕೊಂಡಿರಬೇಕಾದ ಕೆಲವು ಅಂಶಗಳು : -*

*ಈವರ್ಷ ಸುಮಾರು ಶೇ 95%* ಜನ ಶಿಕ್ಷಕರು ತೆರಿಗೆಗೆ ಒಳಪಡುತ್ತಾರೆ.*. ಏಕೆಂದರೆ ನಾವು ಎಲ್ಲರೂ 7ನೇ ವೇತನ ಪಡಿಯುತ್ತಿದ್ದು ಅದರ ಜೊತೆಗೆ ವಾರ್ಷಿಕ ಬಡ್ತಿ.ಕಾಲಮಿತಿ ಬಡ್ತಿ. ಪಡೆದಿರುವುದರಿಂದ ತೆರಿಗೆಯನ್ನು ಭರಿಸಬೇಕಾಗುವದು*


*ಕಳೆದ ವರ್ಷದ ಹಾಗೆ ಈ ವರ್ಷವೂ ಸಹ ಎರಡು ರೀತಿಯ ತೆರಿಗೆ ಲೆಕ್ಕಾಚಾರವಿದೆ.(Old regime.New regime)*


*New Tax Regime* 

*👉ಹೊಸ ತೆರಿಗೆಯಲ್ಲಿ ಯಾವದೇ ಉಳಿತಾಯ ಮಾಡಲು ಬರುವುದಿಲ್ಲ.*

*👉ಒಟ್ಟು ವೇತನ 7 ಲಕ್ಷ ಮತ್ತು 75000 Standard deduction=775000 ರೂ ಆದಾಯ ಇದ್ದರೆ ತೆರಿಗೆ ಬರುವುದಿಲ್ಲ.*

*👉7.75000 ಕ್ಕಿಂತ ಅಧಿಕ ವೇತನ ಪಡೆಯುತ್ತಿದ್ದರೆ ಈ ಕೆಳಗಿನಂತೆ ಆದಾಯ ತೆರಿಗೆಗೆ ಒಳಪಡುತ್ತೀರಿ*

*👉೦-3 ಲಕ್ಷಕ್ಕೆ ತೆರಿಗೆ ಇಲ್ಲ*

*👉3-7 ಲಕ್ಷಕ್ಕೆ 5%. ಅಂದರೆ 20000 ರೂ.ತೆರಿಗೆ ಭರಿಸಬೇಕು.*

*👉7-10 ಲಕ್ಷಕ್ಕೆ 20000+10% (30000) =50000.ರೂ ತೆರಿಗೆ ಭರಿಸಬೇಕು*

 *👉ತೆರಿಗೆ.10-12 ಲಕ್ಷಕ್ಕೆ 50000+ 15% ತೆರಿಗೆ (30000) = 80000 ರೂ ತೆರಿಗೆ ಭರಿಸಬೇಕು.*

*👉12- 15ಲಕ್ಷಕ್ಕೆ 80000ರೂ +20% ತೆರಿಗೆ (60000) =140000 ರೂ ತೆರಿಗೆ ಭರಿಸಬೇಕು*


*Old Tax Regi‍me*

*🙏ಶಿಕ್ಷಕ ಬಂಧುಗಳ ಆದಾಯ ತೆರಿಗೆ ಲೆಕ್ಕಾಚಾರ ಸರಳಗೊಳಿಸಲು ಸೂಚನೆಗಳು:🙏*


* *ಇದರಲ್ಲಿ 5 ಲಕ್ಷ ಒಳಗಿನ ಆದಾಯಕ್ಕೆ ತೆರಿಗೆ ಬರುವದಿಲ್ಲ.*

* *5-1೦ ಲಕ್ಷ ವರೆಗಿನ ಅದಾಯಕ್ಕೆ 125೦೦+20%(100000)= 112500 ತೆರಿಗೆ ಭರಿಸಬೇಕು*

* *1೦ ಲಕ್ಷ ಮೇಲ್ಪಟ್ಟ ಆದಾಯಕ್ಕೆ 112500+3೦% ರಷ್ಟು ಕಟ್ಟಬೇಕಾಗುವದು.*

 *ಹಳೆ ಪದ್ದತಿಯಲ್ಲಿ ಉಳಿತಾಯ ಮಾಡಲು ಈ ಕೆಳಗಿನಂತಿವೆ*

* *80C:- (ಈಗಾಗಲೇ ವೇತನದಲ್ಲೇ ಕಟಾವಣೆಗಳ ಒಟ್ಟು ಮೊತ್ತ ರೂ 1,50,000 ಮೀರಿದವರಿಗೆ ಈ ಕೆಳಗಿನವುಗಳು ಅನ್ವಯಿಸುವುದಿಲ್ಲ)*
* 1) ಮಕ್ಕಳ ಟ್ಯೂಷನ್ ಫೀ ರಸೀದಿ
* 2) PLI ತುಂಬಿದ ದಾಖಲೆ
* 3) ಕೈಯಿಂದ ತುಂಬುವ LIC ಕಂತು
* 4) NSC
* 5) ಸುಕನ್ಯಾ ಸಮೃದ್ಧಿ
* 6) ವಾಪಸ್ಸು ತುಂಬಿದ ಗೃಹ ಸಾಲದ ಅಸಲು
• 7) ಇತರೆ

* *80 ಸಿ ಅಡಿ ರೂ. 1,50,000 ಮೀರಿದ್ದರೂ ನೇರವಾಗಿ ಆದಾಯದಲ್ಲಿ ಕಟಾವಣೆಗೆ ಇರುವ ಅವಕಾಶಗಳು*

* *ಗೃಹ ಸಾಲದ ಬಡ್ಡಿ ತುಂಬುತ್ತಿರುವವರು ಬ್ಯಾಂಕ್ ನಿಂದ 'Provisional Interest Certificate' ಅಂತಾ ಕೇಳಿ (ಸ್ಟೇಟ್ ಮೆಂಟ್ ಅಂತಾ ಕೇಳಿ ತರಬೇಡಿರಿ) ಪಡೆದುಕೊಂಡು ಪೂರೈಸಿರಿ.*

* *80 D:- ಆರೋಗ್ಯ ವಿಮೆ ಸ್ವಂತ ಹಾಗೂ ಅವಲಂಬಿತರ ಹೆಸರಿನಲ್ಲಿ ಆರೋಗ್ಯ ವಿಮೆ ಮಾಡಿಸಲು ತುಂಬಿದ ಪ್ರೀಮಿಯಂ ಗೆ ಗರಿಷ್ಟ 25000 ವರೆಗೆ ಆದಾಯದಲ್ಲಿ ವಿನಾಯಿತಿ ಸಿಗುತ್ತದೆ.,*

* *80 DD:- ವಿಕಲಚೇತನ ಅವಲಂಬಿತರ ವೈದ್ಯಕೀಯ ವೆಚ್ಚ ಅವಲಂಬಿತರು ವಿಕಲಚೇತನರಾಗಿದ್ದಲ್ಲಿ ಅವರ ವೈಕಲ್ಯ ಪ್ರಮಾಣ ಶೇ 40-79 ಇದ್ದಲ್ಲಿ ಗರಿಷ್ಠ ರೂ 75,000 ಅಥವಾ ಶೇ 80 ಕ್ಕಿಂತ ಹೆಚ್ಚಿದ್ದಲ್ಲಿ ಗರಿಷ್ಠ ರೂ 1,25,000 ಆದಾಯದಿಂದ ಕಳೆಯಲ್ಪಡುತ್ತದೆ.*

* *80 DDB:- ನಿರ್ಧಾರಿತ ಖಾಯಿಲೆಗಳಿಗೆ ಚಿಕಿತ್ಸಾ ವೆಚ್ಚ ವಿನಾಯಿತಿ ಆದಾಯ ತೆರಿಗೆ ಇಲಾಖೆಯು ಕೆಲವು ನಿರ್ಧಾರಿತ ರೋಗಗಳಿಗೆ ಮಾಡುವ ವೆಚ್ಚಕ್ಕೆ ವಿನಾಯಿತಿ ನೀಡುತ್ತದೆ. ತಾವು ಅಥವಾ ತಮ್ಮಅವಲಂಬಿತರು ಅಂತಹ ರೋಗಗಳಿಗೆ ಚಿಕಿತ್ಸೆ ಪಡೆದಿದ್ದಲ್ಲಿ ರಸೀದಿಗಳು ಹಾಗೂ ಹಾಗೂ ಎಂ.ಡಿ ಅಥವಾ ಎಂ.ಎಸ್ ಪದವಿ ಹೊಂದಿದ ವೈದ್ಯರಿಂದ '10 - I' ಪ್ರ.ಪತ್ರ ಪಡೆದು ಸಲ್ಲಿಸಬೇಕು. ಆ ನಿರ್ಧಾರಿತ ರೋಗಗಳ ಪಟ್ಟಿ ಈ ಕೆಳಗಿನಂತೆ ಇದೆ, ಇದನ್ನು ಸಕ್ಷಮ ವೈದ್ಯರೇ ನಿರ್ಧರಿಸಿ ಪ್ರಮಾಣ ಪತ್ರ ನೀಡಬೇಕಾಗುತ್ತದೆ. ಈ ಕೆಳಗಿನ ಚಿಕಿತ್ಸೆ ಗೆ ಮಾತ್ರ*

* (i) Neurological Diseases where the disability level has been certified to be of 40% and above,—
* (a) Dementia ;
* (b) Dystonia Musculorum Deformans ;
* (c) Motor Neuron Disease ;
* (d) Ataxia ;
* (e) Chorea ;
* (f) Hemiballismus ;
* (g) Aphasia ;
* (h) Parkinsons Disease ;
* (ii) Malignant Cancers ;
* (iii) Full Blown Acquired Immuno-Deficiency Syndrome (AIDS) ;
* (iv) Chronic Renal failure ;
* (v) Hematological disorders :
* (i) Hemophilia ;
* (ii) Thalassaemia.

* *80 CCD 1(B):- NPS ಗೆ ಹೆಚ್ಚುವರಿಯಾಗಿ ಸಂದಾಯ ಮಾಡಿದ ಮೊತ್ತ. ವೇತನದಲ್ಲಿ ಕಟಾವಣೆಯಾಗುವ ಮೊತ್ತವಲ್ಲದೇ ಎನ್.ಪಿ.ಎಸ್ ಗೆ ಹೆಚ್ಚುವರಿಯಾಗಿ ಹಣ ತುಂಬಿದ್ದರೆ ಗರಿಷ್ಠ ರೂ 50000 ವರೆಗೆ ವಿನಾಯಿತಿ ಇದೆ.*

* *80 E:- ಶಿಕ್ಷಣ ಸಾಲದ ಬಡ್ಡಿ ನೌಕರನು ತನ್ನ ಹಾಗೂ ಅವಲಂಬಿತರ ಶಿಕ್ಷಣ ಸಾಲದ ಬಡ್ಡಿ ತುಂಬಿದ್ದರೆ ಅದಕ್ಕೆ ವಿನಾಯಿತಿ ಸಿಗುತ್ತದೆ.* 

* *80 G:- ದೇಣಿಗೆ/ದಾನ ಕ್ಕೆ ವಿನಾಯಿತಿ. ಆದಾಯ ಇಲಾಖೆಯಲ್ಲಿ 80ಜಿ ಅಡಿ ನೋಂದಣಿ ಮಾಡಿಕೊಂಡು ಚಾಲ್ತಿ ಪ್ರಮಾಣಪತ್ರ ಹೊಂದಿರುವ ಟ್ರಸ್ಟ್ / ಸಂಸ್ಥೆಗಳಿಗೆ ದಾನ ನೀಡಿದ್ದರೆ ಗರಿಷ್ಟ ಒಟ್ಟು ವೇತನದ ಶೇ 10 ಕ್ಕೆ ವಿನಾಯಿತಿ ಸಿಗುತ್ತದೆ.*
* *ಸರಕಾರೇತರ ಟ್ರಸ್ಟ್ ಗಳಿಗೆ ನೀಡಿರುವ ದೇಣಿಗೆಯ ಶೇ 50 ರಷ್ಟು ಮಾತ್ರ ನಿಮ್ಮ ಆದಾಯದಿಂದ ಕಳೆಯಲ್ಪಡುತ್ತದೆ.*
* *ಸರಕಾರಿ ನಿಧಿಗಳಾಗಿದ್ದಲ್ಲಿ ನೀಡಿರುವ ದೇಣಿಗೆಯ ಶೇ 100 ರಷ್ಟು ಮಾತ್ರ ನಿಮ್ಮ ಆದಾಯದಿಂದ ಕಳೆಯಲ್ಪಡುತ್ತದೆ.*  
* *ರೂ 2000 ಕ್ಕಿಂತ ಹೆಚ್ಚಿಗೆ ದೇಣಿಗೆ ನೀಡುವವರು ಕಡ್ಡಾಯವಾಗಿ ತಮ್ಮ ಬ್ಯಾಂಕ್ ಖಾತೆಯಿಂದ ಚೆಕ್/ಡಿ.ಡಿ/NEFT/RTGS ವಿಧಾನದ ಮುಖಾಂತರವೇ ಹಣ ಸಂದಾಯ ಮಾಡಿರಬೇಕಾಗುತ್ತದೆ** 
* *80 U:- ಸ್ವತಃ ನೌಕರನೇ ವಿಕಲಚೇತನರಾಗಿದ್ದಲ್ಲಿ ಪ್ರಮಾಣ ಪತ್ರ ಪೂರೈಸಿರಿ.*

* *HRA ಮನೆ ಬಾಡಿಗೆ ತೆಗೆದುಕೊಳ್ಳಬಹುದು.ಆದರೆ ಈ ವರ್ಷ ಹಳೆ ಪದ್ಧತಿಯಲ್ಲಿ ಹೆಚ್ಚು ತೆರಿಗೆ ಬರುವುದರಿಂದ ಹೆಚ್ಚಿನವರಿಗೆ ಮನೆ ಬಾಡಿಗೆ (HRA) ಉಪಯೋಗವಾಗುವು ದಿಲ್ಲ.*

Tax-free Income Sources: ಈ ರೀತಿ ಹಣ ಗಳಿಸಿದ್ರೆ ಟ್ಯಾಕ್ಸ್ ಕಟ್ಬೇಕಾಗಿಲ್ಲ, ತೆರಿಗೆ ಮುಕ್ತ ಆದಾಯದ ಮೂಲಗಳಿವು

ಕೆಲ ಆದಾಯಗಳು ತೆರಿಗೆ ಮುಕ್ತವಾಗಿವೆ. ತೆರಿಗೆ ಪಾವತಿಗೆ ಮುನ್ನ ಯಾವೆಲ್ಲ ಆದಾಯ, ತೆರಿಗೆ ಮುಕ್ತವಾಗಿದೆ ಎಂಬುದನ್ನು ತಿಳಿದುಕೊಳ್ಳಿ. ಯಾವ ಆದಾಯ ತೆರಿಗೆ ಮುಕ್ತ? : ಕೃಷಿ ...