ಶುಕ್ರವಾರ, ಸೆಪ್ಟೆಂಬರ್ 27, 2024
ಕೇಂದ್ರ ಸರ್ಕಾರದಿಂದ `2025 ನೇ ಸಾಲಿನ `ಸಾರ್ವತ್ರಿಕ ರಜೆ ದಿನ'ಗಳ ಪಟ್ಟಿ ಬಿಡುಗಡೆ : ಇಲ್ಲಿದೆ ಸಂಪೂರ್ಣ ಪಟ್ಟಿ | Public Holiday
ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವವವರಿಗೆ ಗುಡ್ ನ್ಯೂಸ್ :ಗ್ರಾಮ ಪಂಚಾಯಿತಿ ಗ್ರಂಥಾಲಯಗಳಲ್ಲಿ ಖಾಲಿ ಇರುವ ಹೊಸ ಹುದ್ದೆಗಳ ನೇಮಕಾತಿ
ಕಾರ್ಮಿಕರಿಗೆ ಬಿಗ್ ಗಿಫ್ಟ್ ; 'ಕನಿಷ್ಠ ವೇತನ ದರ' ಹೆಚ್ಚಿಸಿ 'ಕೇಂದ್ರ ಸರ್ಕಾರ' ಮಹತ್ವದ ಆದೇಶ |Increases minimum wage rates
ಗುರುವಾರ, ಸೆಪ್ಟೆಂಬರ್ 26, 2024
employees group insurence scheme (EGIS)
ಬುಧವಾರ, ಸೆಪ್ಟೆಂಬರ್ 25, 2024
ರಾಜ್ಯ ಸರ್ಕಾರಿ ನೌಕರರೇ ಗಮನಿಸಿ : `ವೇತನ ಚೀಟಿ, ರಜೆ ಬಾಕಿ' ಸೇರಿ ವಿವಿಧ ಸೌಲಭ್ಯಗಳು ಪಡೆಯಲು ತಪ್ಪದೇ ಈ ಕೆಲಸ ಮಾಡಿ!
ರಾಜ್ಯ ಸರ್ಕಾರಿ ನೌಕರರೇ 'ನಿವೃತ್ತಿ ವೇತನ'ಕ್ಕೆ ಅರ್ಜಿ ಸಲ್ಲಿಸಲು ಈ ದಾಖಲೆಗಳು ಕಡ್ಡಾಯ.
ಮಂಗಳವಾರ, ಸೆಪ್ಟೆಂಬರ್ 24, 2024
pension scheme ಪಿಂಚಣಿ ಯೋಜನೆ
ಸೋಮವಾರ, ಸೆಪ್ಟೆಂಬರ್ 23, 2024
ಕರ್ನಾಟಕ ಲೋಕ ಸೇವಾ ಆಯೋಗ (ಕೆಪಿಎಸ್ಸಿ)
ಕರ್ನಾಟಕ ಲೋಕ ಸೇವಾ ಆಯೋಗ (ಕೆಪಿಎಸ್ಸಿ)ವು ಕೃಷಿ ಇಲಾಖೆಯ ಹುದ್ದೆಗಳನ್ನು ಭರ್ತಿ ಮಾಡುತ್ತಿದ್ದು, ಈ ಸಂಬಂಧ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನ ಮಾಡಿದೆ. 20/09/2024ರಂದು ಕೃಷಿ ಇಲಾಖೆ ಈ ಹುದ್ದೆಗಳಿಗೆ ಸಂಬಂಧಿಸಿದಂತೆ ನೋಟಿಫಿಕೇಶನ್ ಹೊರಡಿಸಿದೆ. ಹೊಸ ವಿಧಾನದಂತೆ ಇಲಾಖೆಯು 945 ಗ್ರೂಪ್ ಬಿ ಹುದ್ದೆಗಳು ಎಒ (ಅಗ್ರಿಕಲ್ಚರಲ್ ಆಫೀಸರ್) ಎಎಒ (ಅಸಿಸ್ಟೆಂಟ್ ಅಗ್ರಿಕಲ್ಚರಲ್ ಆಫೀಸರ್) ಹುದ್ದೆಗಳನ್ನ ತುಂಬುತ್ತಿದೆ.
ಗ್ರೂಪ್ ಬಿ ಹುದ್ದೆಗಳು (ಉಳಿಕೆ ಮೂಲವೃಂದ), ಅಗ್ರಿಕಲ್ಚರಲ್ ಆಫೀಸರ್- 86, ಅಸಿಸ್ಟೆಂಟ್ ಅಗ್ರಿಕಲ್ಚರಲ್ ಆಫೀಸರ್- 586. ಹೈದರಾಬಾದ್ ಕರ್ನಾಟಕ ವೃಂದ ಅಗ್ರಿಕಲ್ಚರಲ್ ಆಫೀಸರ್ 42, ಅಸಿಸ್ಟೆಂಟ್ ಅಗ್ರಿಕಲ್ಚರಲ್ ಆಫೀಸರ್- 231. ವೇತನ ಶ್ರೇಣಿ 43,100 ರಿಂದ 83,900 ರೂಪಾಯಿಗಳು. ವಿದ್ಯಾರ್ಹತೆ ಬಿಎಸ್ಸಿ, ಬಿಎಸ್ಸಿ ಆನರ್ಸ್, ಬಿಟೆಕ್ . ವಯೋಮಿತಿ 18 ರಿಂದ 43 ವರ್ಷಗಳು,
ಸಾಮಾನ್ಯ ಅರ್ಹತೆ ಅಭ್ಯರ್ಥಿಗಳು 38 ವರ್ಷಗಳು, ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳು 41 ವರ್ಷಗಳು, ಎಸ್ಸಿ, ಎಸ್ಟಿ, ಪ್ರವರ್ಗ 1, ವಿಶೇಷ ಚೇತನರು 43 ವರ್ಷಗಳು. ಅರ್ಜಿ ಶುಲ್ಕ ಇರುತ್ತದೆ. ಸಾಮಾನ್ಯ ಅರ್ಹತೆ ಅಭ್ಯರ್ಥಿಗಳಿಗೆ- 600 ರೂ.ಗಳು ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳು- 300 ರೂ.ಗಳು, ಮಾಜಿ ಸೈನಿಕರಿಗೆ- 50 ರೂಪಾಯಿಗಳು, ಎಸ್ಸಿ, ಎಸ್ಟಿ, ಪ್ರವರ್ಗ-1, ವಿಶೇಷ ಚೇತನರು- ಶುಲ್ಕ ವಿನಾಯತಿ ಇದೆ.
ಆಯ್ಕೆ ಪ್ರಕ್ರಿಯೆ : 300 ಅಂಕಗಳಿಗೆ ಪೇಪರ್-1 ಸಾಮಾನ್ಯ ಪರೀಕ್ಷೆ- ಒಂದೂವರೆ ಗಂಟೆ, 300 ಅಂಕಗಳಿಗೆ ಪೇಪರ್-2 ನಿರ್ದಿಷ್ಟ ಪರೀಕ್ಷೆ- 2 ಗಂಟೆ, 4 ಉತ್ತರ ತಪ್ಪು ಆದ್ರೆ 1 ಅಂಕ ಕಡಿತ ಇರುತ್ತದೆ. ಸಂದರ್ಶನ ಇರುವುದಿಲ್ಲ. ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಕನ್ನಡ ಭಾಷಾ ಪರೀಕ್ಷೆ ಇರುತ್ತದೆ- 450 ಅಂಕಗಳು, ಅರ್ಜಿ ಸಲ್ಲಿಕೆ ಮಾಡಲು ಆರಂಭದ ದಿನಾಂಕ- 7-10-2024. ಅರ್ಜಿ ಸಲ್ಲಿಕೆಮಾಡಲು 7-11-2024 ಕೊನೆ ದಿನಾಂಕವಾಗಿದೆ.
ಗುರುವಾರ, ಸೆಪ್ಟೆಂಬರ್ 19, 2024
ರಾಜ್ಯದ ಆರೋಗ್ಯ ಇಲಾಖೆಯ 'NHM ನೌಕರ'ರಿಗೆ ಮಹತ್ವದ ಮಾಹಿತಿ: ಹೀಗಿವೆ ನಿಮಗೆ ಸಿಗುವ 'ರಜಾ ಸೌಲಭ್ಯ'ಗಳು
7th Pay Commission: ಸರ್ಕಾರಿ ನೌಕರರ ರಜೆ ಸೌಲಭ್ಯಗಳ ಶಿಫಾರಸುಗಳು
7th Pay Commission: ಸರ್ಕಾರಿ ನೌಕರರ ರಜೆ ಸೌಲಭ್ಯಗಳ ಶಿಫಾರಸುಗಳು
ರಾಜ್ಯ ಸರ್ಕಾರಿ ನೌಕರರಿಗೆ ಪ್ರತಿ ವರ್ಷ 30 ದಿನಗಳ ಗಳಿಕೆ ರಜೆಯನ್ನು ಮಂಜೂರು ಮಾಡಲಾಗುತ್ತದೆ. ಅವರು ಪ್ರತಿ ವರ್ಷವೂ 15 ದಿನಗಳ ಗಳಿಕೆ ರಜೆ ನಗದೀಕರಣವನ್ನು ಪಡೆಯಬಹುದು ಮತ್ತು ನಿವೃತ್ತಿಯವರೆಗೆ 300 ದಿನಗಳ ಗಳಿಕೆ ರಜೆಯನ್ನು ಸಂಗ್ರಹಿಸಿಕೊಳ್ಳಬಹುದು. ಪ್ರಸಕ್ತದಲ್ಲಿರುವ, ವರ್ಷಕ್ಕೆ 15 ದಿನಗಳ ಗಳಿಕೆ ರಜೆ ನಗದೀಕರಣ ಸೌಲಭ್ಯದ ಬದಲಾಗಿ 30 ದಿನಗಳಿಗೆ ಮತ್ತು 300 ದಿನಗಳ ಗಳಿಕೆ ರಜೆಯ ಸಂಗ್ರಹಣೆಯನ್ನು 400 ದಿನಗಳಿಗೆ ಹೆಚ್ಚಿಸುವಂತೆ ಹಲವು ನೌಕರರ ಸಂಘಗಳು ಮತ್ತು ವೈಯಕ್ತಿಕವಾಗಿ ನೌಕರರಿಂದ ಮನವಿಗಳನ್ನು ಆಯೋಗವು ಸ್ವೀಕರಿಸಿರುತ್ತದೆ.
ಗಳಿಕೆ ರಜೆ ನಗದೀಕರಣ ಮಾಡಬಹುದಾದ ಭಾಗದಲ್ಲಿ ಮತ್ತಷ್ಟು ಕಡಿತಗೊಳಿಸುವುದರಿಂದ, ಗಳಿಕೆ ರಜೆಯ ಉದ್ದೇಶಕ್ಕೆ ವಿರುದ್ಧವಾಗಲಿದೆ ಎಂಬುದು ಆಯೋಗದ ಅಭಿಪ್ರಾಯವಾಗಿದೆ. ಆದ್ದರಿಂದ, ಪ್ರಸ್ತುತ ಜಾರಿಯಲ್ಲಿರುವ ಗಳಿಕೆ ರಜೆ ನಗದೀಕರಣದಲ್ಲಿ ಮತ್ತು ಗಳಿಕೆ ರಜೆ ಸಂಗ್ರಹಣೆ ಮಿತಿಯಲ್ಲಿ ಯಾವುದೇ ಬದಲಾವಣೆಯನ್ನು ಆಯೋಗವು ಶಿಫಾರಸು, ಮಾಡುವುದಿಲ್ಲ, 300 ದಿನಗಳ ಸಂಗ್ರಹಣೆಯ ಮಿತಿ ಮತ್ತು ವರ್ಷಕ್ಕೊಮ್ಮೆ 15 ದಿನಗಳ ಗಳಿಕೆ ರಜೆ ನಗದೀಕರಣ ಪದ್ಧತಿಯು ಇತರೆ ಬಹುತೇಕ ನರೆ ರಾಜ್ಯಗಳಲ್ಲಿ ಜಾರಿಯಲ್ಲಿರುವ ಮಾದರಿಯಲ್ಲಿಯೇ ಇದೆ ಎಂಬುದನ್ನು ಇಲ್ಲಿ ಗಮನಿಸಬಹುದು ಎಂದು ಆಯೋಗ ಹೇಳಿದೆ.
ಬಿಡುವಿನ ರಜೆ ಇರುವ ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ರಾಜ್ಯ ಸರ್ಕಾರದ ಶಿಕ್ಷಕರು ಮತ್ತು ಉಪನ್ಯಾಸಕರು ತಮ್ಮನ್ನು ಬಿಡುವಿನ ರಜೆ ಇಲ್ಲದ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ ಸಮವಾಗಿ ಪರಿಗಣಿಸುವಂತೆ ಮತ್ತು ತಾವು ಬಿಡುವಿನ ರಜೆಯಲ್ಲಿಯೂ ಸಂವೀಕ್ಷಣೆ ಮತ್ತು ಪರೀಕ್ಷಾ ಪತ್ರಿಕೆಗಳ ಮೌಲ್ಯಮಾಪನ ಒಳಗೊಂಡಂತೆ ವಿವಿಧ ಕರ್ತವ್ಯಗಳನ್ನು ನಿರ್ವಹಿಸುತ್ತಿದ್ದು, ಬಿಡುವಿನ ರಜೆಯ ಸೌಲಭ್ಯಗಳಿಂದ ವಂಚಿತರಾಗುವುದರಿಂದ ಬಿಡುವಿನ ರಜೆ ಇಲ್ಲದ ಸಿಬ್ಬಂದಿಗೆ ಲಭ್ಯವಿರುವ ಎಲ್ಲಾ ರಜೆ ಸೌಲಭ್ಯಗಳನ್ನು ನೀಡುವಂತೆ ಕೋರಿರುತ್ತಾರೆ. ಆಯೋಗವು ಈ ಬೇಡಿಕೆಯನ್ನು ಪರಿಶೀಲಿಸಿದ್ದು, ಬಿಡುವಿನ ರಜೆ ಪ್ರವರ್ಗದ ನೌಕರರಿಗೆ ಬಿಡುವಿನ ರಜೆ ಅವಧಿಯಲ್ಲಿ ಮಾಡುವ ಹೆಚ್ಚಿನ ಕೆಲಸಗಳಿಗೆ ಸೂಕ್ತ ಪರಿಹಾರ ದೊರೆಯುತ್ತಿರುವುದರಿಂದ ಅವರ ಈ ಬೇಡಿಕೆಯನ್ನು ಒಪ್ಪಲು ಸಾಧ್ಯವಿಲ್ಲ ಎಂದು ಅಭಿಪ್ರಾಯ ಪಡುತ್ತದೆ.
ರಜಾ ಪ್ರಯಾಣ ರಿಯಾಯಿತಿ (ಎಟಿಸಿ): ಪ್ರಸ್ತುತ ಸರ್ಕಾರಿ ನೌಕರರಿಗೆ ತಮ್ಮ ಸೇವಾವಧಿಯಲ್ಲಿ ಎರಡು ಬಾರಿ, ಭಾರತದಲ್ಲಿನ ಯಾವುದೇ ಸ್ಥಳಕ್ಕೆ ಪ್ರವಾಸವನ್ನು ಕೈಗೊಳ್ಳಲು ರಜಾ ಪ್ರಯಾಣ ರಿಯಾಯಿತಿ ಸೌಲಭ್ಯವು ಲಭ್ಯವಿರುತ್ತದೆ. ಇದರ ಮೊದಲ ಬ್ಲಾಕ್ 1ನೇ ವರ್ಷದಿಂದ 15 ವರ್ಷಗಳ ಸೇವಾವಧಿಯವರೆಗೆ ಮತ್ತು ಎರಡನೇ ಬ್ಲಾಕ್ 16ನೇ ವರ್ಷದ ಸೇವೆಯಿಂದ ವಯೋನಿವೃತ್ತಿ ಅಥವಾ ಸೇವೆ ಕೊನೆಗೊಳ್ಳುವ ದಿನಾಂಕದವರೆಗೆ ಇರುತ್ತದೆ.
ರಜಾ ಪ್ರಯಾಣ ರಿಯಾಯಿತಿ ಸೌಲಭ್ಯವನ್ನು ಇಡೀ ಸೇವಾವಧಿಯಲ್ಲಿ ಎರಡು ಬಾರಿಗೆ ಬದಲು ನಾಲ್ಕು ವರ್ಷಗಳಲ್ಲಿ ಒಂದು ಬಾರಿಗೆ ಹೆಚ್ಚಿಸಲು ಮತ್ತು ಪ್ರವಾಸದ ಮೇಲೆ ಹೋಗುವ ನೌಕರರಿಗೆ ಮಂಜೂರು ಮಾಡುವ ರೀತಿಯಲ್ಲಿ ದಿನಭತ್ಯೆಯನ್ನು ಸಹ ನೀಡಬೇಕೆಂದು ಹಲವು ನೌಕರರ ಸಂಘಗಳು ಮತ್ತು ನೌಕರರಿಂದ ಮನವಿಗಳನ್ನು ಆಯೋಗಕ್ಕೆ ಬಂದಿದೆ
ನೌಕರರು ರಜಾ ಪ್ರಯಾಣ ರಿಯಾಯಿತಿ ಸೌಲಭ್ಯವನ್ನು ಬಳಸಿಕೊಳ್ಳುವುದನ್ನು ಪ್ರೋತ್ಸಾಹಿಸಬೇಕು ಎಂಬುದನ್ನು ಆಯೋಗವು ಒಪ್ಪುತ್ತದೆ. ಆದ್ದರಿಂದ, ರಜಾ ಪ್ರಯಾಣ ರಿಯಾಯಿತಿ ಸೌಲಭ್ಯವನ್ನು ಸೇವೆಯಲ್ಲಿ 2 ಬಾರಿಯಿಂದ 3 ಬಾರಿಗೆ ಹೆಚ್ಚಿಸಲು, ಮೊದಲನೇ ಬ್ಲಾಕ್ ಅವಧಿಯು 1ನೇ ವರ್ಷದಿಂದ 10ನೇ ವರ್ಷದ ಸೇವಾವಧಿಯವರೆಗೆ, ಎರಡನೇ ಬ್ಲಾಕ್ ಅವಧಿಯು 11ನೇ ವರ್ಷದ ಸೇವೆಯಿಂದ 20ನೇ ವರ್ಷದ ಸೇವಾವಧಿಯವರೆಗೆ ಮತ್ತು ಮೂರನೇ ಬ್ಲಾಕ್ ಅವಧಿಯು 21ನೇ ವರ್ಷದ ಸೇವೆಯಿಂದ ಅವರ ನಿವೃತ್ತಿ ಅಥವಾ ಸೇವೆ ಕೊನೆಗೊಳ್ಳುವ ದಿನಾಂಕದವರೆಗೆ ಹೆಚ್ಚಿಸಲು ಆಯೋಗವು ಶಿಫಾರಸು ಮಾಡಿದೆ.
ನೌಕರರು ಕರ್ತವ್ಯ ನಿರ್ವಹಣೆಯ ಅವಧಿಯಲ್ಲಿ ಕೆಲಸದ ಸ್ಥಳದಿಂದ ಹೊರಗೆ ಕರ್ತವ್ಯ ನಿರ್ವಹಿಸುವ ಅವಧಿಗೆ ಮಾತ್ರ ದಿನ ಭತ್ಯೆಯನ್ನು ನೀಡಲಾಗುತ್ತಿದ್ದು, ರಜಾ ಪ್ರಯಾಣ ರಿಯಾಯಿತಿ (LTC) ಅವಧಿಯನ್ನು ಕರ್ತವ್ಯದ ಅವಧಿಗೆ ಸಮವಾಗಿ ಪರಿಗಣಿಸಲು ಸಾಧ್ಯವಿಲ್ಲದಿರುವುದರಿಂದ, ದಿನಭತ್ಯೆ ನೀಡಬೇಕೆಂಬ ಬೇಡಿಕೆಯಲ್ಲಿ ಯಾವುದೇ ಸಮರ್ಥನೆಯು ಕಂಡುಬರುತ್ತಿಲ್ಲ. ಇಂತಹ ಭತ್ಯೆಯು ಭಾರತ ಸರ್ಕಾರದಲ್ಲಾಗಲಿ ಅಥವಾ ಇತರೆ ಯಾವುದೇ ರಾಜ್ಯಗಳಲ್ಲಾಗಲಿ ಜಾರಿಯಲ್ಲಿರುವುದಿಲ್ಲ ಎಂದು ಆಯೋಗ ಹೇಳಿದೆ.
ಬುಧವಾರ, ಸೆಪ್ಟೆಂಬರ್ 18, 2024
PPF Calculator: ಪ್ರತಿ ತಿಂಗಳು 2000, 3000, 4000 ಮತ್ತು 5000 ರೂ. ಹೂಡಿಕೆ ಮಾಡಿದ್ರೆ 15 ವರ್ಷಕ್ಕೆ ಎಷ್ಟು ಹಣ ನಿಮ್ಮ ಕೈ ಸೇರುತ್ತೆ ನೋಡಿ..
PPF Calculator: ಪ್ರತಿ ತಿಂಗಳು 2000, 3000, 4000 ಮತ್ತು 5000 ರೂ. ಹೂಡಿಕೆ ಮಾಡಿದ್ರೆ 15 ವರ್ಷಕ್ಕೆ ಎಷ್ಟು ಹಣ ನಿಮ್ಮ ಕೈ ಸೇರುತ್ತೆ ನೋಡಿ..
ಈ ಪೈಕಿ ಸಾರ್ವಜನಿಕ ಭವಿಷ್ಯ ನಿಧಿ (PPF) ಹೂಡಿಕೆದಾರರು ತಮ್ಮ ಹಣದ ಸುರಕ್ಷತೆ, ತೆರಿಗೆ ಪ್ರಯೋಜನಗಳು ಮತ್ತು ಯೋಗ್ಯವಾದ ಲಾಭವನ್ನು ಹುಡುಕುವ ಜನಪ್ರಿಯ ಹೂಡಿಕೆ ಆಯ್ಕೆಗಳಲ್ಲಿ ಒಂದಾಗಿದೆ.
ಪ್ರಸ್ತುತ, PPF ವಾರ್ಷಿಕ 7.1% ಬಡ್ಡಿ ದರವನ್ನು ನೀಡುತ್ತದೆ. ಅಂದರೆ, ಇದು ಮಾರುಕಟ್ಟೆ-ಸಂಯೋಜಿತ ಉತ್ಪನ್ನಗಳಾದ ಮ್ಯೂಚುವಲ್ ಫಂಡ್ಗಳು ಅಥವಾ ಸ್ಟಾಕ್ಗಳಂತೆ ಹೆಚ್ಚಿನ ಆದಾಯವನ್ನು ನೀಡುತ್ತದೆ. ಆದರೆ PPF ಹೂಡಿಕೆದಾರರಿಗೆ ಯಾವುದೇ ಅಪಾಯವಿಲ್ಲದೆ ಖಾತರಿಯ ಲಾಭವನ್ನು ನೀಡುತ್ತದೆ.
ಖಾತರಿಯ ಆದಾಯದೊಂದಿಗೆ ದೀರ್ಘಾವಧಿಯ ಬೆಳವಣಿಗೆಯನ್ನು ಬಯಸುವ ಸಂಪ್ರದಾಯವಾದಿ ಹೂಡಿಕೆದಾರರಲ್ಲಿ PPF ಜನಪ್ರಿಯವಾಗಿದೆ, ಆದರೆ ಅಪಾಯಗಳನ್ನು ತೆಗೆದುಕೊಳ್ಳಲು ಸಿದ್ಧರಿರುವವರು ಹೆಚ್ಚಿನ ಲಾಭಗಳನ್ನು ನೀಡುವುದರಿಂದ ಮಾರುಕಟ್ಟೆ-ಸಂಯೋಜಿತ ಹೂಡಿಕೆಗಳಿಗೆ ಆದ್ಯತೆ ನೀಡಬಹುದು.
ಹೂಡಿಕೆದಾರರಾಗಿ, ನೀವು ಉತ್ತಮ ಆದಾಯದೊಂದಿಗೆ ಕಡಿಮೆ-ಅಪಾಯದ ಹೂಡಿಕೆಯನ್ನು ಹುಡುಕುತ್ತಿದ್ದರೆ, PPF ಉತ್ತಮ ಆಯ್ಕೆಯಾಗಿದೆ. PPF ಯಾವುದೇ ಭಾರತೀಯ ಪ್ರಜೆಗೆ ಮುಕ್ತವಾಗಿದ್ದು, ಕನಿಷ್ಠ 500 ರೂಪಾಯಿಗಳ ಠೇವಣಿಯೊಂದಿಗೆ ವರ್ಷಕ್ಕೆ 1.5 ಲಕ್ಷದವರೆಗೆ ಹೂಡಿಕೆ ಮಾಡಲು ನಿಮಗೆ ಅನುಮತಿಸುತ್ತದೆ. PPF 15 ವರ್ಷಗಳ ಅವಧಿಯನ್ನು ಹೊಂದಿದೆ ಮತ್ತು ಕಾಂಪೌಂಡ್ ಬಡ್ಡಿಯ ಲಾಭವನ್ನು ನೀಡುತ್ತದೆ.
PPF ನಲ್ಲಿನ ಮಾಸಿಕ ಹೂಡಿಕೆಯಿಂದ ನೀವು ನಿರೀಕ್ಷಿಸಬಹುದಾದ ಆದಾಯದ ವಿವರ ಇಲ್ಲಿದೆ:
* ತಿಂಗಳಿಗೆ 2000 ರೂ. ಹೂಡಿಕೆಯೊಂದಿಗೆ ಪಿಪಿಎಫ್ ನಿಧಿ
ವಾರ್ಷಿಕ ಹೂಡಿಕೆ: 24,000 ರೂ
15 ವರ್ಷಗಳ ಮೇಲಿನ ಒಟ್ಟು ಹೂಡಿಕೆ: ರೂ 3,60,000
ಗಳಿಸಿದ ಬಡ್ಡಿ: 2,90,913 ರೂ
ಮೆಚ್ಯೂರಿಟಿ ಮೊತ್ತ: 6,50,913 ರೂ
* ತಿಂಗಳಿಗೆ 3000 ರೂ. ಹೂಡಿಕೆಯೊಂದಿಗೆ ಪಿಪಿಎಫ್ ನಿಧಿ
ವಾರ್ಷಿಕ ಹೂಡಿಕೆ: 36,000 ರೂ
15 ವರ್ಷಗಳ ಮೇಲಿನ ಒಟ್ಟು ಹೂಡಿಕೆ: ರೂ 5,40,000
ಗಳಿಸಿದ ಬಡ್ಡಿ: 4,36,370 ರೂ
ಮೆಚ್ಯೂರಿಟಿ ಮೊತ್ತ: 9,76,370 ರೂ.
* ತಿಂಗಳಿಗೆ 4000 ರೂ. ಹೂಡಿಕೆಯೊಂದಿಗೆ ಪಿಪಿಎಫ್ ನಿಧಿ
ವಾರ್ಷಿಕ ಹೂಡಿಕೆ: 48,000 ರೂ
15 ವರ್ಷಗಳ ಮೇಲಿನ ಒಟ್ಟು ಹೂಡಿಕೆ: ರೂ 7,20,000
ಗಳಿಸಿದ ಬಡ್ಡಿ: 5,81,827 ರೂ
ಮೆಚ್ಯೂರಿಟಿ ಮೊತ್ತ: 13,01,827 ರೂ
ತಿಂಗಳಿಗೆ 5000 ರೂ. ಹೂಡಿಕೆಯೊಂದಿಗೆ ಪಿಪಿಎಫ್ ನಿಧಿ
ವಾರ್ಷಿಕ ಹೂಡಿಕೆ: 60,000 ರೂ
15 ವರ್ಷಗಳ ಮೇಲಿನ ಒಟ್ಟು ಹೂಡಿಕೆ: 9,00,000 ರೂ.
ಗಳಿಸಿದ ಬಡ್ಡಿ: 7,27,284 ರೂ
ಮೆಚ್ಯೂರಿಟಿ ಮೊತ್ತ: 16,27,284 ರೂ
ಈ ಲೆಕ್ಕಾಚಾರಗಳು ನಿಮ್ಮ PPF ಹೂಡಿಕೆಯ ಮೇಲಿನ ಸಂಭಾವ್ಯ ಆದಾಯದ ಕಲ್ಪನೆಯನ್ನು ನೀಡುತ್ತದೆ ಎಂಬುದನ್ನು ಹೂಡಿಕೆದಾರರು ಗಮನಿಸಬೇಕು.
ರಾಜ್ಯ ಸರ್ಕಾರಿ ನೌಕರರಿಗೆ `ವೇತನ ಚೀಟಿ, ರಜೆ ಬಾಕಿ' ಸೇರಿ ವಿವಿಧ ಸೌಲಭ್ಯಗಳು : ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ
ರಾಜ್ಯ ಸರ್ಕಾರಿ ನೌಕರರಿಗೆ `ವೇತನ ಚೀಟಿ, ರಜೆ ಬಾಕಿ' ಸೇರಿ ವಿವಿಧ ಸೌಲಭ್ಯಗಳು : ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ
ರಾಜ್ಯ ಸರ್ಕಾರದ ಎಲ್ಲಾ ಅಧಿಕಾರಿ/ನೌಕರರು ಕಡ್ಡಾಯವಾಗಿ ಹೆಚ್ಆರ್ಎಂಎಸ್ನ ನೌಕರರ ಸ್ವಯಂ ಸೇವೆ (Employee Self Service-ESS) ಪೋರ್ಟಲ್ನಲ್ಲಿ ನೋಂದಣಿ ಮಾಡಿಕೊಳ್ಳುವ ಬಗ್ಗೆ ರಾಜ್ಯ ಸರ್ಕಾರವು ಮಹತ್ವದ ಸುತ್ತೋಲೆ ಹೊರಡಿಸಿದೆ.
ಸದರಿ ಪೋರ್ಟಲ್ ಬಳಕೆದಾರರ ಸ್ನೇಹಿಯಾಗಿದ್ದು, ಈ ಕೆಳಕಂಡಂತೆ ಹಲವು ರೀತಿಯ ಸೌಲಭ್ಯಗಳನ್ನು ಪಡೆಯಬಹುದಾಗಿದೆ.
1) ವೇತನ ಚೀಟಿ (Pay Slip) ಸರ್ಕಾರಿ ನೌಕರರು ತಮ್ಮ ಕೆಜಿಐಡಿ ಸಂಖ್ಯೆಯ ಮೂಲಕ ನೋಂದಣಿಯಾಗಿ ನೇರವಾಗಿ ತಮ್ಮ ವೇತನ ಚೀಟಿಯನ್ನು (Pay Slip) ಅನ್ನು ಪಡೆಯಬಹುದು.
2) ರಜೆ ಬಾಕಿ (Leave Balance) ನೌಕರರು ತಮ್ಮ ರಜೆ ಬಾಕಿಯನ್ನು ವೀಕ್ಷಿಸಬಹುದು.
3) ಸಾಲ/ಮುಂಗಡ (Loan/Advance) ನೌಕರರು ಸಾಲ/ಮುಂಗಡದ ವಿವರಗಳನ್ನು ವೀಕ್ಷಿಸಬಹುದು.
4) ಕಡಿತದ ವಿವರಗಳು (Deduction Details) ನೌಕರರು ತಮ್ಮ ಕಡಿತಗಳಾದ ಆದಾಯ ತೆರಿಗೆ (IT), ಕೆಜಿಐಡಿ, ಸಾಮಾನ್ಯ ಭವಿಷ್ಯ ನಿಧಿ (GPF), ಎನ್ಪಿಎಸ್, ಮುಂತಾದವುಗಳನ್ನು ವೀಕ್ಷಿಸಬಹುದು.
5) ವಿಮೆ (Insurance) ನೌಕರರು ತಮ್ಮ ವಿಮೆಗಳಾದ ಕೆಜಿಐಡಿ, ಜಿಪಿಎಪ್ ಮುಂತಾದ ವಿವರಗಳನ್ನು ಸಹ ವೀಕ್ಷಿಸಬಹುದು.
6) ಇ-ಸೇವಾ ಪುಸ್ತಕ (Service Register Book) ನೌಕರರ ಸೇವಾ ವಹಿಯನ್ನು ವಿದ್ಯುನ್ಮಾನ ಸೇವಾ ವಹಿ (ESR) ಯಲ್ಲಿ ಅಪ್ಲೋಡ್ ಮಾಡಿ ಪಬ್ಲಿಷ್ ಮಾಡಿದ ಇ-ಸೇವಾ ಪುಸ್ತಕವನ್ನು ಈ ಪರದೆಯಲ್ಲಿ ವೀಕ್ಷಿಸಬಹುದು.
7) ಹೆಚ್ಆರ್ಎಂಎಸ್ ಟಿಕೆಟ್ (Ticket Status) ನೌಕರರು ಹೆಚ್ಆರ್ಎಂಎಸ್ನಲ್ಲಿ ಸೃಜಿಸಿದ ಟಿಕೇಟ್ನ ವಿವರಗಳನ್ನು ವೀಕ್ಷಿಸಬಹುದು.
8) ಪ್ರಧಾನ ಮಂತ್ರಿ ಜೀವನ ಜ್ಯೋತಿ ಬೀಮ ಯೋಜನೆ (ಪಿಎಂಜೆಜೆಬಿವೈ) ಪಿ ಎಂ ಜೆ ಜೆ ಬಿ ವೈ ಮತ್ತು ಪಿ ಎಂ ಎಸ್ ಬಿ ವೈ ಯೋಜನೆಗಳಲ್ಲಿ ಸಿಬ್ಬಂದಿಗಳು ನೋಂದಣಿಯಾದ ವಿವರಗಳನ್ನು ವೀಕ್ಷಿಸಬಹುದು ಹಾಗೂ ಮುದ್ರಿಸಬಹುದು.
9) ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (ಪಿಎಂಎಸ್ ಬಿವೈ)
> ಪ್ರತಿ ಸಿಬ್ಬಂದಿಗಳು ಹಾಗೂ ಡಿಡಿಓಗಳು ಈ ಯೋಜನೆಯನ್ನು ಖಚಿತವಾಗಿ ಪಡೆದುಕೊಳ್ಳುವುದು ಹಾಗು ಇಎಸ್ಎಸ್ ಪೋರ್ಟಲ್ನಲ್ಲಿ ಈ ದಾಖಲೆಯನ್ನು ನವೀಕರಿಸುವುದು ಅವರ ಜವಾಬ್ದಾರಿಯಾಗಿರುತ್ತದೆ
ದಯವಿಟ್ಟು ತಮ್ಮ ನಗದು ರಹಿತ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯ ಫಲಾನುಭವಿಗಳನ್ನು ಅಪ್ಡೇಟ್ ಮಾಡಿದ್ದಲ್ಲಿ ಮಾತ್ರ ಯೋಜನೆಯ ಸದುಪಯೋಗವನ್ನು ಸಿಬ್ಬಂದಿಗಳು ಹಾಗೂ ಅವರ ಕುಟುಂಬವು ಪಡೆಯಬಹುದು
10) ಕೆಜಿಐಡಿ ವಿಮಾ ಪತ್ರಗಳ ಪರಿಶೀಲನೆ
ಈ ಪರದೆಯಲ್ಲಿ ಸಿಬ್ಬಂದಿಗಳು ತಮ್ಮ ಕೆಜಿಐಡಿ ವಿಮಾ ಪತ್ರಗಳ ಹೆಚ್ಆರ್ಎಂಎಸ್ ನಲ್ಲಿನ | ಮಾಹಿತಿ ಹಾಗೂ ಕೆಜಿಐಡಿಯಲ್ಲಿನ ಮಾಹಿತಿಯನ್ನು ವೀಕ್ಷಿಸಬಹುದು. ಸಿಬ್ಬಂದಿಗಳು ಎರಡು ಅಂಕಣಗಳನ್ನು ಪರಿಶೀಲಿಸಿ ತಾಳ ಮಾಡಿ ಸರಿಯಾಗಿದ್ದಲ್ಲಿ ಸರಿಯಾಗಿ ಕಂಡು ಬಂದಿದೆ ಎಂಬ ಚೆಕ್ ಬಾಕ್ಸ್ ಅನ್ನು ಕ್ಲಿಕ್ ಮಾಡಿ ಉಳಿಸಬೇಕು (Save). ಒಂದು ವೇಳೆ ಯಾವುದಾದರೂ ವಿಮಾ ಮಾಹಿತಿಯು ತಪ್ಪಾಗಿದ್ದಲ್ಲಿ ಅದನ್ನು ಸೂಚಿಸಬಹುದಾಗಿದೆ. ಅದಲ್ಲದೇ ಯಾವುದಾದರೂ ವಿಮಾ ವಿವರಗಳು ಬಿಟ್ಟುಹೋದಲ್ಲಿ ಅದನ್ನು ಸೇರಿಸಬಹುದು. ಕೊನೆಯದಾಗಿ ಎಲ್ಲಾ ಮಾಹಿತಿಯನ್ನು ಪರಿಶೀಲಿಸಿದ ನಂತರ ಇ-ಸಹಿ ಯನ್ನು ಮಾಡಬೇಕು.
11) ಪ್ರಮುಖ ಲಿಂಕ್ಗಳು
ರಾಜ್ಯ ಸರ್ಕಾರದ ಪ್ರಮುಖ ಜಾಲತಾಣವಾದ ಕೆಜಿಐಡಿ, ಮಹಾಲೇಖಪಾಲರು-ಸಾಭನಿ, ಖಜಾನೆ-2, ಎನ್ಎಸ್ಡಿಎಲ್, ಮಹಾಲೇಖಪಾಲರು-ಜಿಇ, ಹೆಚ್ಆರ್ಎಂಎಸ್ ಅಪ್ಲಿಕೇಷನ್ ಗಳ ಪ್ರಮುಖ ಲಿಂಕ್ಗಳನ್ನು ಒದಗಿಸಲಾಗಿದೆ.
ಮುಂದುವರೆದು, ಉಲ್ಲೇಖಿತ ಸರ್ಕಾರಿ ಆದೇಶದಲ್ಲಿ, ರಾಜ್ಯ ಸರ್ಕಾರದ ಸೇವೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಅಧಿಕಾರಿ/ಸಿಬ್ಬಂದಿ ವರ್ಗದವರು ಪ್ರಧಾನ ಮಂತ್ರಿ ಜನ ಸುರಕ್ಷಾ ಯೋಜನೆಯ ವ್ಯಾಪ್ತಿಗೆ ಬರುವ ಪ್ರಧಾನಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ (ಪಿಎಂಜೆಜೆಬಿವೈ), ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆ (ಪಿಎಂಎಸ್ಬಿವೈ) ಯೋಜನೆಗಳಡಿ ಮಾಡಿಸಿದ ವಿಮಾ ಪಾಲಿಸಿಗಳ ಮಾಹಿತಿಯನ್ನು HRMS-ESS Login ನಲ್ಲಿ ಭರ್ತಿ ಮಾಡಲು ಸಹ ಈಗಾಗಲೇ ತಿಳಿಸಿರುತ್ತಾರೆ.
ಆದುದರಿಂದ ರಾಜ್ಯ ಸರ್ಕಾರದ ಪ್ರತಿ ಸಿಬ್ಬಂದಿಗಳ ತಮ್ಮದೇ ಆದ ವೇತನ ಚೀಟಿ, ರಜೆ ವಿವರಗಳು ಮತ್ತು ಕಡಿತದ ಸಾರಾಂಶವನ್ನು ಡೌನ್ಲೋಡ್ ಮಾಡಿಕೊಳ್ಳುವ ಸದುಪಯೋಗವನ್ನು ಪಡೆದುಕೊಳ್ಳಲು HRMSESS Login (https://hrmsess.karnataka.gov.in) ដ មួយ ជ. ಹಾಗೂ ಪ್ರತಿ ಸಿಬ್ಬಂದಿಗಳು ESS ಪೋರ್ಟಲ್ನಲ್ಲಿ ನೋಂದಾಯಿಸಿಕೊಂಡು, ಸದರಿ ಸೌಲಭ್ಯವನ್ನು ಪಡೆಯುತ್ತಿರುವ ಬಗ್ಗೆ ಡಿಡಿಓರವರು ಖಚಿತಪಡಿಸಿಕೊಳ್ಳಲು ಈ ಮೂಲಕ ತಿಳಿಸಿದೆ. ಹಾಗೂ ತಮ್ಮ ಎಲ್ಲಾ ಉದ್ಯೋಗಿಗಳು ಮೇ-2024 ರ ಮೊದಲು ಈ ಪೋರ್ಟಲ್ನಲ್ಲಿ ನೋಂದಾಯಿಸಲು ಅನುವು ಮಾಡಿಕೊಡುವ ಜವಾಬ್ದಾರಿ ಡಿಡಿಓರವರದಾಗಿರುತ್ತದೆ.
ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ)
ಸೋಮವಾರ, ಸೆಪ್ಟೆಂಬರ್ 16, 2024
7th Pay Commission: ಸರ್ಕಾರಿ ನೌಕರರ ಸಾಮೂಹಿಕ ವಿಮಾ ಯೋಜನೆ ಎಷ್ಟು ಏರಿಕೆ
ಆಯೋಗ ತನ್ನ ವರದಿಯಲ್ಲಿ ನೌಕರರಿಗೆ ಸಾಮೂಹಿಕ ವಿಮಾ ಯೋಜನೆ (ಜಿಐಎಸ್) ಎಂದು ಉಲ್ಲೇಖಿಸಿ ವಿವರಣೆ ನೀಡಿದೆ. ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯ (ಕೆಜಿಐಡಿ) ಮೂಲಕ ಕರ್ನಾಟಕ ಸರ್ಕಾರವು, ತನ್ನ ನೌಕರರಿಗೆ ಸಾಮೂಹಿಕ ವಿಮಾ ಯೋಜನೆಯನ್ನು ನಿರ್ವಹಿಸುತ್ತಿದೆ. ಈ ಯೋಜನೆಯು ಉಳಿತಾಯಗಳು ಮತ್ತು ವಿಮಾ ಸೌಲಭ್ಯಗಳೆರಡನ್ನೂ ಹೊಂದಿದ್ದು, ಗ್ರೂಪ್-ಡಿ, ಗ್ರೂಪ್-ಸಿ ಮತ್ತು ಗ್ರೂಪ್-ಬಿ ಮತ್ತು ಗ್ರೂಪ್-ಎ ನೌಕರರು ಪ್ರತಿ ತಿಂಗಳು ಕ್ರಮವಾಗಿ ರೂ.120, ರೂ. 240, ರೂ. 360 ಮತ್ತು ರೂ. 480ಗಳ ವಂತಿಗೆ ನೀಡುವ ಅಗತ್ಯವಿದೆ ಎಂದು ಹೇಳಿದೆ.
ವಿಮಾ ರಕ್ಷಣೆಯ ಅಡಿಯಲ್ಲಿ ವಂತಿಗೆಯ ಒಂದು ಭಾಗವನ್ನು (ಪ್ರಸ್ತುತ ಶೇ.25ರಷ್ಟು) ವಿಮಾ ನಿಧಿಯಾಗಿ ತೆಗೆದುಕೊಳ್ಳಲಾಗುತ್ತದೆ. ಸೇವೆ ಸಲ್ಲಿಸುತ್ತಿರುವ ನೌಕರನು ನಿಧನ ಹೊಂದಿದ ಪಕ್ಷದಲ್ಲಿ ರೂ. 1,20,000, ರೂ. 2,40,000, ರೂ. 3,60,000 ಮತ್ತು ರೂ. 4,80,000 ಗಳ ಮೊತ್ತವನ್ನು ಕ್ರಮವಾಗಿ ಗ್ರೂಪ್-ಡಿ, ಗ್ರೂಪ್-ಸಿ ಗ್ರೂಪ್-ಬಿ ಮತ್ತು ಗ್ರೂಪ್-ಎ ನೌಕರರ ನಾಮ ನಿರ್ದೇಶಿತರಿಗೆ ಸಂದಾಯ ಮಾಡಲಾಗುತ್ತದೆ. ಉಳಿದ ವಂತಿಗೆಯನ್ನು (ಶೇ.75 ರಷ್ಟು) ಕಾಲ ಕಾಲಕ್ಕೆ ವಿಧಿಸಲಾಗುವ ಬಡ್ಡಿಯನ್ನು ಗಳಿಸುವ ಉಳಿತಾಯ ನಿಧಿ ಯಾಗಿ ಪರಿಗಣಿಸಲಾಗುತ್ತದೆ.
ಸಂಗ್ರಹವಾದ ಈ ಉಳಿತಾಯ ನಿಧಿಯ ಜೊತೆಗೆ ಬಡ್ಡಿಯನ್ನು ಸೇರಿಸಿ ನೌಕರನು ಸೇವೆಯಲ್ಲಿದ್ದಾಗ ನಿಧನ ಹೊಂದಿದಲ್ಲಿ ಅಥವಾ ನಿವೃತ್ತಿ ಸಂದರ್ಭದಲ್ಲಿ ಇದನ್ನು ಆತ ಅಥವಾ ಆಕೆಗೆ ಸಂದಾಯ ಮಾಡಲಾಗುತ್ತದೆ. ಕೆಎಸ್ಜಿಇಎ, ನೌಕರರ ವಂತಿಗೆಯಲ್ಲಿ ಹತ್ತು ಪಟ್ಟು ಪರಿಷ್ಕರಣೆಯನ್ನು (ಪ್ರಸ್ತುತ ವಂತಿಗೆಯ 10 ರಷ್ಟು) ಕೋರಿದ್ದು, ಇದರ ಪರಿಣಾಮವಾಗಿ ಸೇವೆಯಲ್ಲಿರುವಾಗ ನಿಧನ ಹೊಂದಿದ ಸಂದರ್ಭದಲ್ಲಿ ಪಾವತಿಸಬಹುದಾದ ವಿಮೆ ಹಣವು ಹತ್ತು ಪಟ್ಟು ಹೆಚ್ಚಾಗುವುದಕ್ಕೆ ಕಾರಣವಾಗುತ್ತದೆ.
ನೌಕರರ ಉಳಿತಾಯ ನಿಧಿಗಳ ಮೇಲೆ ಪ್ರಸ್ತುತ ವಾರ್ಷಿಕ ಶೇ.7.10 ರಷ್ಟು ಬಡ್ಡಿಯನ್ನು ಗಳಿಸಲಾಗುತ್ತಿದೆ ಎಂದು ಆಯೋಗಕ್ಕೆ ಮಾಹಿತಿ ನೀಡಲಾಗಿದೆ. ಈ ಯೋಜನೆಯು ಸರ್ಕಾರಿ ನೌಕರರಲ್ಲಿ ಉಳಿತಾಯವನ್ನು ಪ್ರೋತ್ಸಾಹಿಸುವುದಲ್ಲದೆ, ಸೇವೆಯನ್ನು ಸಲ್ಲಿಸುವ ನೌಕರರ ಜೀವಕ್ಕೆ ಪರಿಣಾಮಕಾರಿ ರಕ್ಷಣೆಯನ್ನು ಒದಗಿಸುತ್ತದೆ ಎಂದು ಆಯೋಗವು ಅಭಿಪ್ರಾಯ ಪಡುತ್ತದೆ. ಹಾಗೆಯೇ, ಇದು ವಂತಿಗೆ ಆಧಾರಿತ ಯೋಜನೆಯಾಗಿರುವುದರಿಂದ, ರಾಜ್ಯ ಸರ್ಕಾರವು ಅದರ ಬಡ್ಡಿ ಬಾಧ್ಯತೆಯನ್ನು ನೀಗಿಸಲು ಗಮನಾರ್ಹ ಆಯವ್ಯಯ ಅವಕಾಶ ಕಲ್ಪಿಸುವ ಅವಶ್ಯಕತೆ ಇರುವುದಿಲ್ಲ.
ಆಯೋಗ ಮಾಡಿರುವ ಶಿಫಾರಸುಗಳು: ಅದರಂತೆ, ಆಯೋಗವು, ಪ್ರತಿ ತಿಂಗಳ ವಂತಿಗೆಯಲ್ಲಿ ಪರಿಷ್ಕರಣೆಯನ್ನು ಶಿಫಾರಸು ಮಾಡುತ್ತದೆ ಎಂದು ಹೇಳಿದೆ. ಸಾಮೂಹಿಕ ವಿಮಾ ಯೋಜನೆಯ ಮಾಸಿಕ ವಂತಿಗೆಯಲ್ಲಿ ಪರಿಷ್ಕರಣೆಯನ್ನು ಹೇಗೆ ಮಾಡಬೇಕು ಎಂದು ಶಿಫಾರಸು ಮಾಡಿದೆ.
* ಗ್ರೂಪ್-ಎ ಜಾರಿಯಲ್ಲಿರುವ ಮಾಸಿಕ ವಂತಿಗೆ ರೂ. 480, ಪಾವತಿಸಬೇಕಾದ ವಿಮಾ ಹಣ 4.80 ಲಕ್ಷ. ಹೊಸದಾಗಿ ಶಿಫಾರಸು ಮಾಡಲಾದ ಮಾಸಿಕ ವಂತಿಗೆ ರೂ. 720. ಪಾವತಿಸಬೇಕಾದ ವಿಮಾ ಹಣ 7.20 ಲಕ್ಷ. ಶೇಕಡಾವಾರು ಏರಿಕೆ 50.
* ಗ್ರೂಪ್-ಬಿ ಜಾರಿಯಲ್ಲಿರುವ ಮಾಸಿಕ ವಂತಿಗೆ ರೂ. 360, ಪಾವತಿಸಬೇಕಾದ ವಿಮಾ ಹಣ 3.60 ಲಕ್ಷ. ಹೊಸದಾಗಿ ಶಿಫಾರಸು ಮಾಡಲಾದ ಮಾಸಿಕ ವಂತಿಗೆ ರೂ. 540. ಪಾವತಿಸಬೇಕಾದ ವಿಮಾ ಹಣ 5.40 ಲಕ್ಷ. ಶೇಕಡಾವಾರು ಏರಿಕೆ 50.
* ಗ್ರೂಪ್-ಸಿ ಜಾರಿಯಲ್ಲಿರುವ ಮಾಸಿಕ ವಂತಿಗೆ ರೂ. 240, ಪಾವತಿಸಬೇಕಾದ ವಿಮಾ ಹಣ 2.40 ಲಕ್ಷ. ಹೊಸದಾಗಿ ಶಿಫಾರಸು ಮಾಡಲಾದ ಮಾಸಿಕ ವಂತಿಗೆ ರೂ. 480. ಪಾವತಿಸಬೇಕಾದ ವಿಮಾ ಹಣ 4.80 ಲಕ್ಷ. ಶೇಕಡಾವಾರು ಏರಿಕೆ 100.
* ಗ್ರೂಪ್-ಡಿ ಜಾರಿಯಲ್ಲಿರುವ ಮಾಸಿಕ ವಂತಿಗೆ ರೂ. 120, ಪಾವತಿಸಬೇಕಾದ ವಿಮಾ ಹಣ 1.20 ಲಕ್ಷ. ಹೊಸದಾಗಿ ಶಿಫಾರಸು ಮಾಡಲಾದ ಮಾಸಿಕ ವಂತಿಗೆ ರೂ. 240. ಪಾವತಿಸಬೇಕಾದ ವಿಮಾ ಹಣ 2.40 ಲಕ್ಷ. ಶೇಕಡಾವಾರು ಏರಿಕೆ 100.
ಶನಿವಾರ, ಸೆಪ್ಟೆಂಬರ್ 14, 2024
ರಾಜ್ಯ ಸರ್ಕಾರಿ ನೌಕರರೇ ಗಮನಿಸಿ : ಇಲ್ಲಿದೆ ʻNOCʼ ಪಡೆಯುವ ಕುರಿತು ಮುಖ್ಯ ಮಾಹಿತಿ
ರಾಜ್ಯ ಸರಕಾರಿ ನೌಕರರು ಸೇವೆ ಸಲ್ಲಿಸುತ್ತಲೇ ಬೇರೆ ಹುದ್ದೆಗೆ ನೇಮಕಾತಿ ಹೊಂದಲು ಮತ್ತು ಸದರಿ ಹುದ್ದೆಗೆ ಅರ್ಜಿ ಸಲ್ಲಿಸಲು ಮೊದಲೇ ಸೇವೆ ಸಲ್ಲಿಸುತ್ತಿರುವ ಇಲಾಖೆಯ ಮುಖ್ಯಸ್ಥರಿಂದ NOC (No objection Certificate) ನಿರಾಕ್ಷೇಪಣಾ ಪತ್ರ ಪಡೆಯಬೇಕಾಗಿತ್ತು.ಆದರೆ ಇದೀಗ ಆ ನಿಯಮವನ್ನು ತಿದ್ದುಪಡಿ ಮಾಡಿ ಆಯ್ಕೆಯಾದ ನಂತರವೂ ಇಲಾಖೆಯಿಂದ NOC ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ಯಾವುದೇ ಸೇವೆ ಅಥವಾ ಹುದ್ದೆಗೆ ಆಯ್ಕೆಯಾಗಲು ಅರ್ಜಿ ಸಲ್ಲಿಸುವ ಒಬ್ಬ ಸರ್ಕಾರಿ ನೌಕರನು ತನ್ನ ಅರ್ಜಿಯನ್ನು ನೇರವಾಗಿ ಆಯ್ಕೆ ಪ್ರಾಧಿಕಾರಕ್ಕೆ ಸಲ್ಲಿಸತಕ್ಕದ್ದು. ಆತನ ಆಯ್ಕೆಯನ್ನು ಅಧಿಸೂಚಿತಗೊಳಿಸಿದ ಕೂಡಲೇ, ಆತನು ಆಯ್ಕೆಯಾದ ವಾಸ್ತವಾಂಶವನ್ನು ತಾನು ಕರ್ತವ್ಯ ನಿರ್ವಹಿಸುತ್ತಿರುವ ಇಲಾಖೆಯ ಇಲಾಖಾ ಮುಖ್ಯಸ್ಥರಿಗೆ ತಿಳಿಸತಕ್ಕದ್ದು ಹಾಗೂ ಆತನು ಆಯ್ಕೆಯಾದ ಹುದ್ದೆಯ ನೇಮಕಾತಿಯನ್ನು ಒಪ್ಪಿಕೊಳ್ಳಲು ಅನುವಾಗುವಂತೆ ನಿರಾಕ್ಷೇಪಣಾ ಪ್ರಮಾಣಪತ್ರವನ್ನು ನೀಡುವಂತೆ ಕೋರತಕ್ಕದ್ದು.
ಸರ್ಕಾರಿ ನೌಕರನು ಶಿಸ್ತುಕ್ರಮಕ್ಕೆ ಒಳಗೊಂಡಿದ್ದಲ್ಲಿ ಅಥವಾ ಆತ ಇಲಾಖಾ ವಿಚಾರಣೆ ಅಥವಾ ಕ್ರಿಮಿನಲ್ ನಡವಳಿಗಳನ್ನು ಎದುರಿಸುತ್ತಿದ್ದಲ್ಲಿ ಮತ್ತು ಸಾರ್ವಜನಿಕ ಹಿತಾಸಕ್ತಿಯ ಕಾರಣ ಅಥವಾ ಸರ್ಕಾರಿ ನೌಕರ ಮತ್ತು ಸರ್ಕಾರದ ನಡುವೆ ಮಾಡಿಕೊಳ್ಳಲಾದ ಯಾವುದೇ ನಿರ್ದಿಷ್ಟ ಒಪ್ಪಂದಕ್ಕೆ ಅಸಂಗತವಾದಂತಹ ಸಂದರ್ಭದಲ್ಲಿ ಲಿಖಿತ ರೂಪದಲ್ಲಿ ಕಾರಣಗಳನ್ನು ದಾಖಲಿಸಿ ನಿರಾಕ್ಷೇಪಣಾ ಪ್ರಮಾಣಪತ್ರವನ್ನು ನೀಡಬಾರದೆಂದು ಇಲಾಖಾ ಮುಖ್ಯಸ್ಥರು ಪರಿಗಣಿಸಿದ ಹೊರತು, ಸಾಮಾನ್ಯವಾಗಿ ಇಲಾಖಾ ಮುಖ್ಯಸ್ಥರು ನಿರಾಕ್ಷೇಪಣಾ ಪ್ರಮಾಣಪತ್ರವನ್ನು ನೀಡತಕ್ಕದ್ದು, ಸಾಧ್ಯವಾದಷ್ಟು ಬೇಗನೆ ಆದರೆ ನಿರಾಕ್ಷೇಪಣಾ ಪ್ರಮಾಣಪತ್ರವನ್ನು ಕೋರಿ ಇಲಾಖಾ ಮುಖ್ಯಸ್ಥರಿಗೆ ಸಲ್ಲಿಸಿದ ಅರ್ಜಿಯ ದಿನಾಂಕದ ಮೂವತ್ತು ದಿನಗಳ ಅವಧಿಯ ಒಳಗಾಗಿ ಇಲಾಖಾ ಮುಖ್ಯಸ್ಥರು ಈ ಬಗ್ಗೆ ನಿರ್ಣಯವನ್ನು ತೆಗೆದುಕೊಳ್ಳತಕ್ಕದ್ದು ಹಾಗೂ ಅದನ್ನು ಸಂಬಂಧಿತ ಸರ್ಕಾರಿ ನೌಕರ ಮತ್ತು ಆಯ್ಕೆ ಪ್ರಾಧಿಕಾರ ಮತ್ತು ಉಪ-ನಿಯಮ (1)ರಲ್ಲಿ ಉಲ್ಲೇಖಿಸಲಾದ ಹುದ್ದೆಗೆ ನೇಮಕಾತಿ ಮಾಡುವ ಸಕ್ಷಮ ಪ್ರಾಧಿಕಾರಕ್ಕೆ ತಿಳಿಸತಕ್ಕದ್ದು ಹಾಗೂ ಆ ರೀತಿ ಮಾಡಲು ವಿಫಲವಾದಲ್ಲಿ ನಿರಾಕ್ಷೇಪಣಾ ಪ್ರಮಾಣಪತ್ರವನ್ನು ನೀಡಲಾಗಿದೆ ಎಂದು ಪರಿಗಣಿತಗೊಳ್ಳತಕ್ಕದ್ದು.
ಬುಧವಾರ, ಸೆಪ್ಟೆಂಬರ್ 11, 2024
ಹೆಚ್ಚು ವೇತನ ಸಿಗುವ ಟಾಪ್ 5 ಸರ್ಕಾರಿ ನೌಕರಿಗಳಿವು; ಈ ಉದ್ಯೋಗ ಪಡೆಯಲು ಏನು ಮಾಡಬೇಕು ಗೊತ್ತಾ?
7th Pay Commission: ಸರ್ಕಾರಿ ನೌಕರರ ಮನೆ ಖರೀದಿ, ಇತರ ಮುಂಗಡ ಹೆಚ್ಚಳಕ್ಕೆ ಶಿಫಾರಸು
ಮಂಗಳವಾರ, ಸೆಪ್ಟೆಂಬರ್ 10, 2024
7th & 8th Pay Commssion: ಈವರೆಗೆ ಸರ್ಕಾರಿ ನೌಕರರ ವೇತನದಲ್ಲಿ ಆದ ಬದಲಾವಣೆ ವಿವರ
7th Pay Commission: ಸಹಾಯಕ ನಿರ್ದೇಶಕ, ಅಧೀನ ಕಾರ್ಯದರ್ಶಿ ವೇತನ ಏರಿಕೆ ಮಾಹಿತಿ
ಸೋಮವಾರ, ಸೆಪ್ಟೆಂಬರ್ 9, 2024
7ನೇ ವೇತನ ಆಯೋಗ: ಸರ್ಕಾರಿ ನೌಕರರ ಮೂಲ ವೇತನ ಶೇ.18.5ರಷ್ಟು ಹೆಚ್ಚಳ
Police ಇಲಾಖೆಯ ಅತ್ಯುನ್ನತ ಹುದ್ದೆ DGP ಆಗೋ ಕನಸು ಇದ್ಯಾ? ಏನೇನು ಸೌಲಭ್ಯ ಸಿಗುತ್ತೆ? ಸಂಬಳವೆಷ್ಟು?
ರಾಜ್ಯ ಸರ್ಕಾರಿ ನೌಕರರಿಗೆ
Medical Allowance of state government employees from Rs.200 to Rs.500 per month
ರಾಜ್ಯ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. ವೈದ್ಯಕೀಯ ಭತ್ಯೆಯ ದರಗಳನ್ನು ಮಾಸಿಕ 200 ರೂ.ಗಳಿಂದ ಮಾಸಿಕ 500 ರೂ.ಗಳಿಗೆ ಹೆಚ್ಚಿಸಿ ಆದೇಶ ಹೊರಡಿಸಿದೆ.
ಗ್ರೂಪ್ ಸಿ ಮತ್ತು ಗ್ರೂಪ್ ಡಿ ವೃಂದದ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ರಾಜ್ಯ ಸರ್ಕಾರಿ ನೌಕರರುಗಳಿಗೆ ಲಭ್ಯವಿರುವ ವೈದ್ಯಕೀಯ ಭತ್ಯೆಯ ದರಗಳನ್ನು ಮಾಸಿಕ 200 ರೂ.ಗಳಿಂದ ಮಾಸಿಕ 500 ರೂ.ಗಳಿಗೆ ಏರಿಕೆ ಮಾಡಲಾಗಿದೆ. ಆಗಸ್ಟ್ 1, 2024ರಿಂದ ಜಾರಿಗೆ ಬರುವಂತೆ ಪರಿಷ್ಕರಿಸಲಾಗಿದೆ.
5-09-2022ರ ಸರ್ಕಾರಿ ಆದೇಶದಲ್ಲಿ ನಗದುರಹಿತ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ್ನು (ಕೆಎಎಸ್ಎಸ್) ಅನುಷ್ಠಾನಗೊಳಿಸಲು ಆದೇಶ ಹೊರಡಿಸಲಾಗಿದೆ. 22-07-2024ರ ಸರ್ಕಾರಿ ಆದೇಶದಲ್ಲಿ ವೇತನ ಶ್ರೇಣಿಗಳ ಮತ್ತು ವೇತನಕ್ಕೆ ಹೊಂದಿಕೊಂಡಿರುವ ನಿರ್ದಿಷ್ಟ ಭತ್ಯೆಗಳ ಪರಿಷ್ಕರಣೆ ಮತ್ತು ಪಿಂಚಣಿ ಪರಿಷ್ಕರಣೆ ಕುರಿತಂತೆ 7ನೇ ರಾಜ್ಯ ವೇತನ ಆಯೋಗದ ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸಿ ಆದೇಶ ಹೊರಡಿಸಲಾಗಿದೆ. 23-08-2024ರ ಸರ್ಕಾರಿ ಆದೇಶದಲ್ಲಿ ಪರಿಷ್ಕೃತ ವೇತನ ಶ್ರೇಣಿಗಳನ್ನು ಅನುಷ್ಠಾನಗೊಳಿಸಿ ವಿಸ್ತ್ರತವಾದ ಆದೇಶಿಸಲಾಗಿದೆ.
ಗ್ರೂಪ್ ಸಿ ಮತ್ತು ಗ್ರೂಪ್ ಡಿ ವೃಂದದ ರಾಜ್ಯ ಸರ್ಕಾರಿ ನೌಕರರಿಗೆ ಲಭ್ಯವಿರುವ ವೈದ್ಯಕೀಯ ಭತ್ಯೆ ದರಗಳ ಪರಿಷ್ಕರಣೆ ಕುರಿತಂತೆ 7ನೇ ರಾಜ್ಯ ವೇತನ ಆಯೋಗದ ಶಿಫಾರಸುಗಳನ್ನು ಸರ್ಕಾರ ಅಂಗೀಕರಿಸಿದೆ. ಅದರಂತೆ, ಸರ್ಕಾರ ದರ ಪರಿಷ್ಕರಿಸಿ ಆದೇಶ ಹೊರಡಿಸಿದೆ.
ನಗದು ರಹಿತ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯ (ಕೆಎಎಸ್ಎಸ್) ಸೌಲಭ್ಯ ಅನುಷ್ಠಾನ ಆಗುವವರೆಗೆ ಈ ವೈದ್ಯಕೀಯ ಸೌಲಭ್ಯ ಲಭ್ಯವಿರಲಿದೆ.
ನಗದು ರಹಿತ ವೈದ್ಯಕೀಯ ಸೌಲಭ್ಯ ಯೋಜನೆ ಅನುಷ್ಠಾನಗೊಂಡ ನಂತರದಲ್ಲಿ ವೈದ್ಯಕೀಯ ಭತ್ಯೆಯ ಮಂಜೂರಾತಿಯ ಈ ಆದೇಶ ಜಾರಿಯಲ್ಲಿರುವುದು ಕೊನೆಗೊಳ್ಳುತ್ತದೆ. ಹಾಗೂ ನಗದುರಹಿತ (ಕೆಎಎಸ್ಎಸ್) ಯೋಜನೆಯು ಅನುಷ್ಠಾನಗೊಂಡ ಬಳಿಕ ಯಾವುದೇ ಸರ್ಕಾರಿ ನೌಕರ ಈ ಸೌಲಭ್ಯವನ್ನು ಪಡೆಯಲು ಅರ್ಹವಿರುವುದಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.
╰┈➤ Please Follow https://whatsapp.com/channel/0029Va9sPs92ER6bR7mBuq1v Whatsapp Channel for more updates
ಭಾನುವಾರ, ಸೆಪ್ಟೆಂಬರ್ 8, 2024
7th Pay Commission: ತಾಲೂಕು ಕಛೇರಿ ಉಪ ತಹಶೀಲ್ದಾರ್ ವೇತನ ಎಷ್ಟು ಏರಿಕೆ?
ರಾಜ್ಯ `ನಿವೃತ್ತ ಸರ್ಕಾರಿ ನೌಕರ'ರ ಗಮನಕ್ಕೆ : `ನಿವೃತ್ತಿ ವೇತನ', `ತುಟ್ಟಿ ಭತ್ಯೆ' ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ!
Important Alert to All Employees & DDO’s
1. ಎಲ್ಲಾ ಪ್ರಮುಖ ಬ್ಯಾಂಕ್ಗಳಲ್ಲಿ ಒದಗಿಸುತ್ತಿರುವ ವೇತನ ಖಾತೆಯ ಯೋಜನೆಯ ಲಾಭವನ್ನು ಪಡೆಯಲು ನಿಮ್ಮ ಬ್ಯಾಂಕ್ ಖಾತೆಯನ್ನು ವೇತನ ಖಾತೆ ಯೋಜನೆಯಡಿ ಮಾರ್ಪಡಿಸಲು ಈ ಮೂಲಕ ತಿಳಿಸಿದೆ.
2. ಆರ್ಥಿಕ ಇಲಾಖೆ ಪತ್ರ ಸಂಖ್ಯೆ: FD-CAM/160/2023 ದಿನಾಂಕ:06/09/2023 ರನ್ವಯ, ಪ್ರತಿ ಉದ್ಯೋಗಿಗಳಿಗೆ ಎರಡು ಅಮೂಲ್ಯವಾದ ವಿಮಾ ಯೋಜನೆಗಳಾದ - ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ (PMJJBY) ಮತ್ತು ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (PMSBY) ಯನ್ನು ತೆರೆಯಲು ಕೋರಲಾಗಿದೆ. ಈ ಯೋಜನೆಯನ್ನು ತಮ್ಮ ವೇತನ ಖಾತೆ ಬ್ಯಾಂಕ್ ಮುಖಾಂತರ ಪಡೆಯಬಹುದಾಗಿದೆ. ಹೆಚ್ಚಿನ ವಿವರಕ್ಕಾಗಿ https://www.jansuraksha.gov.in/ ಲಿಂಕ್ ಅನ್ನು ಪ್ರವೇಶಿಸಿ.
ಪ್ರಧಾನ ಮಂತ್ರಿ ಜೀವನ ಜ್ಯೋತಿ ಬೀಮ ಯೋಜನೆ (ಪಿಎಂಜೆಜೆಬಿವೈ)
ಪ್ರಧಾನಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ (ಪಿಎಂಜೆಜೆಬಿವೈ) ವಾರ್ಷಿಕ ರೂ.436/-ಗಳ ಪ್ರೀಮಿಯಂ ಪಾವತಿಸುವುದು (ಪ್ರೀಮಿಯಂ ವಿಮಾದಾರರ ಬ್ಯಾಂಕ್ ಖಾತೆಯ ಮೂಲಕ ಪಾವತಿಸಲ್ಪಡುತ್ತದೆ) ಯಾವುದೇ ಕಾರಣದಿಂದ ಮರಣ ಸಂಭವಿಸಿದರೆ ಅವಲಂಬಿತ ಕುಟುಂಬ ಸದಸ್ಯರಿಗೆ ರೂ. 2.00 ಲಕ್ಷಗಳ ವಿಮಾ ಮೊತ್ತದ ನರೆವು. ಈ ಯೋಜನೆಯು 18 ರಿಂದ 50 ವರ್ಷದೊಳಗಿನ ಜನರಿಗೆ ಮಾತ್ರ ಲಭ್ಯವಿರುತ್ತದೆ.
ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (ಪಿಎಂಎಸ್ಬಿವೈ)
ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆ (ಪಿಎಂಎಸ್ಬಿವೈ) ಇದು ಅಪಘಾತ ವಿಮಾ ಯೋಜನೆಯಾಗಿದ್ದು, ವಾರ್ಷಿಕ ರೂ. 20/-ಗಳ ಪ್ರೀಮಿಯಂ ಪಾವತಿಸುವುದು (ಪ್ರೀಮಿಯಂ ವಿಮಾದಾರರ ಬ್ಯಾಂಕ್ ಖಾತೆಯ ಮೂಲಕ ಪಾವತಿಸಲ್ಪಡುತ್ತದೆ). ಒಂದು ವೇಳೆ ಅಪಘಾತವಾಗಿ ಮೃತಪಟ್ಟರೆ ಅಥವಾ ಶಾಶ್ವತ ಒಟ್ಟು ಅಂಗವೈಕಲ್ಯಕ್ಕೆ ರೂ. 2.00ಲಕ್ಷಗಳು ಹಾಗೂ ಶಾಶ್ವತ ಭಾಗಶಃ ಅಂಗವೈಕಲ್ಯಕ್ಕೆ ರೂ.1.00 ಲಕ್ಷಗಳ ವಿಮಾ ಮೊತ್ತದ ನರೆವು ಈ ಯೋಜನೆಯು 18 ರಿಂದ 70 ವರ್ಷದೊಳಗಿನ ಜನರಿಗೆ ಮಾತ್ರ ಲಭ್ಯವಿರುತ್ತದೆ. ಇವೆರಡು ಭಿಮಾ ಯೋಜನೆಗಳು ನಿಮ್ಮ ಕುಟುಂಬಕ್ಕೆ ಬಹಳ ಉಪಯುಕ್ತವಾಗುವುದು.
3. ಆರ್ಥಿಕ ಇಲಾಖೆ ಪತ್ರ ಸಂಖ್ಯೆ: FD-CAM/160/2023 ದಿನಾಂಕ:02/11/2023 ರನ್ವಯ, ಪಿಎಂಜೆಜೆಬಿವೈ ಮತ್ತು ಪಿಎಂಎಸ್ಬಿವೈ ವಿಮಾ ವಿವರಗಳನ್ನು ಹೆಚ್ಆರ್ಎಂಎಸ್ ಇಎಸ್ಎಸ್ ಲಾಗಿನ್ https://hrmsess.karnataka.gov.in ನ ಪೋರ್ಟಲ್ನಲ್ಲಿ ದಾಖಲಿಸಲು ಸೂಚಿಸಲಾಗಿದೆ. ಅದರಂತೆ ಪ್ರತಿ ಸಿಬ್ಬಂದಿಗಳು ಹಾಗೂ ಡಿಡಿಓಗಳು ಈ ಯೋಜನೆಯನ್ನು ಖಚಿತವಾಗಿ ಪಡೆದುಕೊಳ್ಳುವುದು ಹಾಗು ಇಎಸ್ಎಸ್ ಪೋರ್ಟಲ್ನಲ್ಲಿ ಈ ದಾಖಲೆಯನ್ನು ನವೀಕರಿಸುವುದು ಅವರ ಜವಾಬ್ದಾರಿಯಾಗಿರುತ್ತದೆ. ಸದರಿ ಪ್ರಗತಿಯನ್ನು ಅಪರ ಮುಖ್ಯ ಕಾರ್ಯದರ್ಶಿಗಳು, ಆರ್ಥಿಕ ಇಲಾಖೆರವರು ವೀಕ್ಷಿಸುತ್ತಿರುತ್ತಾರೆ.
4. ದಯವಿಟ್ಟು ತಮ್ಮ ನಗದು ರಹಿತ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯ ಫಲಾನುಭವಿಗಳನ್ನು ಅಪ್ಡೇಟ್ ಮಾಡಿದ್ದಲ್ಲಿ ಮಾತ್ರ ಯೋಜನೆಯ ಸದುಪಯೋಗವನ್ನು ಸಿಬ್ಬಂದಿಗಳು ಹಾಗೂ ಅವರ ಕುಟುಂಬವು ಪಡೆಯಬಹುದು.
5. ಎಲ್ಲಾ ಉದ್ಯೋಗಿಗಳು ESS ಪೋರ್ಟಲ್ನಲ್ಲಿ ನೋಂದಾಯಿಸಿಕೊಂಡು, ತಮ್ಮದೇ ಆದ ಪಾವತಿ ಚೀಟಿ, ರಜೆ ವಿವರಗಳು ಮತ್ತು ಕಡಿತದ ಸಾರಾಂಶವನ್ನು ಡೌನ್ಲೋಡ್ ಮಾಡಿಕೊಳ್ಳಬಹುದಾದ ಸೌಲಭ್ಯವನ್ನು ಪಡೆಯುತ್ತಿರುವ ಬಗ್ಗೆ ಡಿಡಿಓರವರು ಖಚಿತಪಡಿಸಿಕೊಳ್ಳಬೇಕು. ತಮ್ಮ ಎಲ್ಲಾ ಉದ್ಯೋಗಿಗಳು 1ನೇ ಜನವರಿ 2024 ರ ಮೊದಲು ಈ ಪೋರ್ಟಲ್ನಲ್ಲಿ ನೋಂದಾಯಿಸಲು ಅನುವು ಮಾಡಿಕೊಡುವ ಜವಾಬ್ದಾರಿ ಡಿಡಿಓರವರದಾಗಿರುತ್ತದೆ.
Important Alert to All Employees & DDO’s
1. All employees are informed to take benefit of salary account plan offered by all major bank and set your salary account under this plan in your respective banks.
2. As per FD letter no: FD-CAM/160/2023 Dated:06/09/2023 . Request every employees to opt for these two beneficial insurance schemes – Pradhan Mantri Jeevan Jyoti Bima Yojana (PMJJBY) and Pradhan Mantri Suraksha Bima Yojana (PMSBY) –through your Salary bank accounts. For more information please visit https://www.jansuraksha.gov.in/
Pradhan Mantri Jeevan Jyoti Bima Yojana(PMJJBY)
The PMJJBY is available to people in the age group of 18 to 50 years having a bank account who give their consent to join / enable auto-debit. Aadhar would be the primary KYC for the bank account. The life cover of Rs. 2 lakhs shall be for the one year period Stretching from 1st June to 31st May and will be renewable. Risk coverage under this scheme is for Rs. 2 Lakh in case of death of the insured, due to any reason. The premium is Rs. 436 per annum which is to be auto- debited in one installment from the subscriber's bank account as per the option given by him on or before 31st May of each annual coverage period under the scheme. The scheme is being offered by Life Insurance Corporation and all other life insurers who are willing to offer the product on similar terms with necessary approvals and tie up with banks for this purpose.
Pradhan Mantri Suraksha BimaYojana(PMSBY)
The Scheme is available to people in the age group 18 to 70 years with a bank account who give their consent to join / enable auto-debit on or before 31st May for the coverage period 1st June to 31st May on an annual renewal basis. Aadhar would- be the primary KYC for the bank account. The risk coverage under the scheme is Rs.2 lakh for accidental death and full disability and Rs. 1 lakh for partial disability. The premium of Rs.20 per annum is to be deducted from the account holder's bank account through 'auto-debit' facility in one instalment. The scheme is being offered by Public Sector General Insurance Companies or any Other General Insurance Company who are willing to offer the product on similar terms with necessary approvals and tie up with banks for this purpose.
3. As per FD Circular no: FD-CAM/160/2023 Dated:02/11/2023 , PMJJBY and PMSBY Insurance details need to be updated in ESS Portal https://hrmsess.karnataka.gov.in/. Additional Chief Secretary, Finance Department is following up the progress and it is the responsibility of all employees and DDO’s to ensure they avail these schemes and also update ESS accordingly.
4. Please also update your KASS beneficiaries immediately so that the cashless medical/health scheme benefits can be availed by employees and their family.
5. DDO should ensure that, all Employees register in ESS Portal, and use the services like downloading their own payslip, leave title and deduction summary. DDO’s are responsible for enabling all their employees to be registered before 1 st January 2024 in this portal.
Government Employee: ಸರ್ಕಾರಿ ನೌಕರರ KGID ನಿಯಮಗಳನ್ನು ತಿಳಿಯಿರಿ
Government Employee: ಸರ್ಕಾರಿ ನೌಕರರ KGID ನಿಯಮಗಳನ್ನು ತಿಳಿಯಿರಿ
ಸೆಪ್ಟೆಂಬರ್ 02: ರಾಜ್ಯ ಸರ್ಕಾರಿ ನೌಕರರಿಗೆ ಅನೇಕ ಸೌಲಭ್ಯಗಳಿವೆ. ಅದರಲ್ಲೂ ಕಡ್ಡಾಯ ಜೀವ ವಿಮಾ ಯೋಜನೆಗೆ ನೌಕರರು ಒಳಪಡುತ್ತಾರೆ. ಆದರೆ ಇದಕ್ಕೆ ಸಹ ಅನೇಕ ನಿಯಮಗಳಿವೆ. ಸಾಮಾಜಿಕ ಜಾಲತಾಣದಲ್ಲಿ ಮಾಹಿತಿಯೊಂದನ್ನು ಹಾಕಲಾಗಿದೆ. ಕಡ್ಡಾಯ ಜೀವ ವಿಮಾ ಯೋಜನೆಗೆ ಒಳಪಡುವ ವಿಧಾನವು ಈ ಕೆಳಕಂಡಂತಿದೆ ಎಂದು ನೌಕರರಿಗೆ ಮಾಹಿತಿ ನೀಡಲಾಗಿದೆ.
ಕರ್ನಾಟಕ ಸರ್ಕಾರದ ಸೇವೆಗೆ ಸೇರ್ಪಡೆಯಾಗುವ ಎಲ್ಲಾ ಶ್ರೇಣಿಯ ಅಧಿಕಾರಿ/ ನೌಕರರು ಕಡ್ಡಾಯವಾಗಿ ಹಾಗೂ ಭಾರತೀಯ ಆಡಳಿತ ಸೇವೆ, ಭಾರತೀಯ ಪೊಲೀಸ್ ಸೇವೆ ಮತ್ತು ಭಾರತೀಯ ಅರಣ್ಯ ಸೇವೆಯಲ್ಲಿನ ಕರ್ನಾಟಕ ವೃಂದಕ್ಕೆ ಸೇರಿದವರು ಐಚ್ಛಿಕವಾಗಿ ಕಡ್ಡಾಯ ಜೀವ ವಿಮಾ ಯೋಜನೆಗೆ ಒಳಪಡಲು ಅರ್ಹರಾಗಿರುತ್ತಾರೆ.
ಯೋಜನೆಗೆ ಒಳಪಡುವವರಿಗೆ 18 ವರ್ಷ ವಯಸ್ಸಾಗಿರಬೇಕು. 50 ವರ್ಷ ಮೀರಿರಬಾರದು. ಪ್ರಥಮ ಮಾಸಿಕ ವೇತನ ಪಡೆಯುವ ಮುನ್ನ ವಿಮೆಗೆ ಒಳಪಡಬೇಕು. ಧಾರಣ ಮಾಡಿದ ಹುದ್ದೆಗೆ ಅನ್ವಯವಾಗುವ ವೇತನ ಶ್ರೇಣಿಯ ಸರಾಸರಿ ವೇತನದ ಶೇ. 6.25 ಭಾಗಕ್ಕಿಂತ ಕಡಿಮೆ ಇಲ್ಲದಂತೆ ಮಾಸಿಕ ದರದ ವಿಮಾ ಕಂತನ್ನು ಪಾವತಿಸಬೇಕು.
education department
education department
ಬುಧವಾರ, ಸೆಪ್ಟೆಂಬರ್ 4, 2024
ಕರ್ನಾಟಕ ರಾಜ್ಯ ಸರಕಾರಿ ನೌಕರರಿಗೆ 7 ನೇ ವೇತನ ಆಯೋಗದ ಅನುಸಾರ ಲಭಿಸುವ ಹೊಸವೇತನವನ್ನು ಕಂಡುಕೊಳ್ಳಲು ಈಗಾಗಲೇ https://karpay.calculator.cafe ವೆಬ್ ಚಾಲನೆಗೊಳಿಸಲಾಗಿತ್ತು. 🏆🏆 ಈಗ ಅತಿ ಸರಳಿಕರಣಗೋಳಿಸಿ ಈ ಮೇಲೆ ತೋರಿಸಲಾದ ಚಿತ್ರದಲ್ಲಿ Tabular Format ನಲ್ಲಿ ತಮ್ಮ ವೇತನವನ್ನು 01.07.2022 , 01.07.2024, 01.08.2024 6ನೇ ಮತ್ತು 7ನೇ ವೇತನಗಳ ವ್ಯತ್ಯಾಸವನ್ನು ಕಂಡುಕೋಳ್ಳಲು ಬದಲಾವಣೆಯನ್ನು ಮಾಡಲಾಗಿದೆ.
ಭಾನುವಾರ, ಸೆಪ್ಟೆಂಬರ್ 1, 2024
ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ
ರಾಜ್ಯ ಸರ್ಕಾರಿ ಶಿಕ್ಷಕರಿಗೆ 7ನೇ ವೇತನ ಆಯೋಗದಂತೆ ಪರಿಷ್ಕೃತ ವೇತನ ಸರಣಿಗಳು
ರಾಜ್ಯ ಸರ್ಕಾರಿ ಶಾಲಾ ಶಿಕ್ಷಕರೇ ಗಮನಿಸಿ : ಇಲ್ಲಿದೆ `DA, HRA' ಸೇರಿ ಇತರೆ ಭತ್ಯೆಗಳ ಸಂಪೂರ್ಣ ವಿವರ
ರಾಜ್ಯ ಸರ್ಕಾರದಿಂದ ಸರ್ಕಾರಿ ನೌಕರರಿಗೆ 7ನೇ ವೇತನ ಶ್ರೇಣಿಯನ್ನು ಜಾರಿಗೊಳಿಸಲಾಗಿತ್ತು.ಈ ಬೆನ್ನಲ್ಲೇ 2024ರ ಹೊಸ ವೇತನ ಶ್ರೇಣಿಯ ಪರಿಷ್ಕೃತ ನಿಯಮಗಳನ್ನು ಜಾರಿಗೊಳಿಸಿ ಆದೇಶ ಹೊರಡಿಸಲಾಗಿದೆ.
ರಾಜ್ಯ ಸರ್ಕಾರವು ಶಿಕ್ಷಕರಿಗೆ 7 ನೇ ವೇತನ ಪರಿಷ್ಕರಣೆ ಮಾಡಿದ್ದು, ನೇಮಕಾತಿ ವರ್ಷವಾರು ಈ ಕೆಳಗಿನ ವೇತನ ಪರಿಷ್ಕರಣೆಯ ದಿನಾಂಕ 01-08-2024 ರಂದು ಪಡೆಯುವ ಒಟ್ಟು ಅಂದಾಜು ಮಾಡಲಾಗಿದೆ.
ರಾಜ್ಯ ಸರ್ಕಾರಿ ಶಿಕ್ಷಕರಿಗೆ 7ನೇ ವೇತನ ಆಯೋಗದ ಶಿಫಾರಸ್ಸಿನಂತೆ ಡಿಎ, ಹೆಚ್ಆರ್ ಎ ಸೇರಿದಂತೆ ಇತರೆ ವೇತನ ಶ್ರೇಣಿಯನ್ನು ಪರಿಷ್ಕರಿಸಲಾಗಿದೆ. ಹಾಗಾದ್ರೇ ವೇತನ ಶ್ರೇಣಿ ಪರಿಷ್ಕರಣೆಯ DA,HRA, MA ಸೇರಿ ವಿಸ್ತ್ರುತವಾದ ಇತರೆ ಸಂಪೂರ್ಣ ಮಾಹಿತಿ ಈ ಕೆಳಕಂಡಂತೆ ಇದೆ.
ಹೀಗಿದೆ ರಾಜ್ಯ ಸರ್ಕಾರಿ ಶಿಕ್ಷಕರಿಗೆ 7ನೇ ವೇತನ ಆಯೋಗದಂತೆ ಪರಿಷ್ಕೃತ ವೇತನ ಸರಣಿಗಳು
ಸೌಲಭ್ಯಕ್ಕೆ ಅರ್ಜಿ ಸಲ್ಲಿಕೆ
ಸರಕಾರಕ್ಕೆ ತೆರಿಗೆ ಕಟ್ಟಬೇಕಿಲ್ಲದಿದ್ದರೂ ನೀವು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಿ: ಯಾಕೆ ಗೊತ್ತಾ..? ಇಲ್ಲಿದೆ ವಿವರ..
2024-25ರ ಹಣಕಾಸು ವರ್ಷ (FY) ಗಾಗಿ ಆದಾಯ ತೆರಿಗೆ ರಿಟರ್ನ್ಸ್ (ITR) ಸಲ್ಲಿಸುವ ಗಡುವು (ವಿಸ್ತರಣೆ ನಂತರ ಸೆಪ್ಟೆಂಬರ್ 15) ಸಮೀಪಿಸುತ್ತಿದ್ದಂತೆ, ತೆರಿಗೆ ವಿಧಿಸಬಹುದಾ...

-
ರಾಜ್ಯ ಸರ್ಕಾರಿ' ನೌಕರರೇ ಗಮನಿಸಿ : ವಿವಿಧ ರಜೆಗಳು ಮತ್ತು ನಿಯಮಗಳ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ |GOVT EMPLOYEEಸತತವಾಗಿ 4 ತಿಂಗಳಿಗಿಂತಲೂ ಹೆಚ್ಚಾಗಿ ಅನಧಿಕೃತ ಗೈರು ಹಾಜರಾದಲ್ಲಿ ಅಂತಹ ಸರ್ಕಾರಿ ನೌಕರನನ್ನು ವಿಚಾರಣೆಗೆ ಒಳಪಡಿಸಿ (ಸಿಸಿಎ) ಪ್ರಕಾರ ಸೇವೆಯಿಂದ ವಜಾ ಮಾಡಬಹುದು. ಅನುಮತ...
-
ವೇತನ, ಭತ್ಯೆ ಹೆಚ್ಚಳಕ್ಕೆ ತಿದ್ದುಪಡಿ ಮಸೂದೆ ಸಿದ್ಧ: ಸಚಿವರು,ಶಾಸಕರ ವೇತನ ಇಮ್ಮಡಿ ಮುಖ್ಯಮಂತ್ರಿ, ಸಚಿವರು, ಶಾಸಕರು ಈಗ ಪಡೆಯುತ್ತಿರುವ ವೇತನ ಮತ್ತು ಭತ್ಯೆಯನ್ನು ಭಾರ...
-
7th Pay Commission: ಸರ್ಕಾರಿ ನೌಕರರ ರಜೆ ಸೌಲಭ್ಯಗಳ ಶಿಫಾರಸುಗಳು ರಾಜ್ಯ ಸರ್ಕಾರಿ ನೌಕರರಿಗೆ ಪ್ರತಿ ವರ್ಷ 30 ದಿನಗಳ ಗಳಿಕೆ ರಜೆಯನ್ನು ಮಂಜೂರು ಮಾಡಲಾಗುತ್ತದೆ. ಅವರ...
-
ಯೋಜನೆಗೆ ಅರ್ಹ ಅವಲಂಬಿತರು ಯಾರು? ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಹಾಜರಾತಿ) ನಿಯಮಗಳು 1963 ರ ನಿಯಮ 2ರಲ್ಲಿನ "ಕುಟುಂಬ" (Family) ಅಂದರೆ, ಸರ್ಕಾರಿ...
-
🏆🏆 ಕರ್ನಾಟಕ ರಾಜ್ಯ ಸರಕಾರಿ ನೌಕರರಿಗೆ 7 ನೇ ವೇತನ ಆಯೋಗದ ಅನುಸಾರ ಲಭಿಸುವ ಹೊಸವೇತನವನ್ನು ಕಂಡುಕೊಳ್ಳಲು ಈಗಾಗಲೇ https://karpay.calculator.cafe ವೆಬ್ ಚಾಲನೆ...
-
ನಿವೃತ್ತಿಯ ನಂತರ ನೆಮ್ಮದಿಯ ಜೀವನವನ್ನ ನಡೆಸಲು ನಮಗೆ ಹಣದ ಅಗತ್ಯ ಹೆಚ್ಚಿರುತ್ತದೆ. ನಿವೃತ್ತಿಯ ನಂತರ ಯಾವುದೇ ಸ್ಥಿರ ಆದಾಯವಿಲ್ಲದೇ ಹಣಕಾಸು ನಿರ್ವಹಣೆ ಮಾಡುವುದು ಕಷ್ಟವ...
-
ಈ ಯೋಜನೆಯನ್ನು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ ಎಂದಿದ್ದಾರೆ. ಈ ಯೋಜನೆಯ ಕಾರ್ಯನೀತಿ ಸೂಚನೆಗಳನ್ನು ಸರ್ಕಾರದ ಆದೇಶ ಸಂಖ್ಯೆ:ಸಿಆಸು...
-
ಕರ್ನಾಟಕ ಸರ್ಕಾರಿ ನೌಕರರ (ಕಡ್ಡಾಯ ಜೀವ ವಿಮಾ ತಿದ್ದುಪಡಿ ) ನೇಮಗಳು 2024 ರಂದು ತೆರೆಯಲ್ಪಟ್ಟಿದೆ ಕ್ರಮ ಸಂಖ್ಯೆ ವೇತನ ಶ್ರೇಣಿ ರೂಪಾಯಿಗಳಲ್ಲಿ...
-
ಕರ್ನಾಟಕ ರಾಜ್ಯ ಸೇವಾ ನಿಯಮಗಳು 1958 ರ ನಿಯಮ 8 (24) ಸೇರಿಕೆ ಕಾಲ ಸರ್ಕಾರಿ ನೌಕರನಿಗೆ ಯಾವ ಸಂದರ್ಭದಲ್ಲಿ ಲಭಿಸುತ್ತದೆ ಯಾರೇ ಒಬ್ಬ ಸರ್ಕಾರಿ ನೌಕರನು ಸರ್ಕಾರದ ಹಿತಾ...
-
ಈ ಸಂಬಂಧ ರಾಜ್ಯ ಸರ್ಕಾರದಿಂದ ಸಭಾ ಸೂಚನಾ ಪತ್ರವನ್ನು ಹೊರಡಿಸಲಾಗಿದ್ದು, ರಾಜ್ಯ ಸಚಿವ ಸಂಪುಟದ ತೀರ್ಮಾನಿಸಿದಂತೆ ಅಧಿಕಾರಿ, ನೌಕರರು ಮತ್ತು ಅವಲಂಬಿತ ಕುಟುಂಬದ ಸದಸ್ಯರ ಹ...